ವಕ್ಫ್‌ ಹಠಾವೋ ದೇಶ ಬಚಾವೋ ಆಂದೋಲನಕ್ಕೆ ಬೆಂಬಲ

KannadaprabhaNewsNetwork |  
Published : Nov 08, 2024, 12:33 AM IST
ವಿಜಯಪುರದಲ್ಲಿ ನಮ್ಮ ಸತ್ಯ ಶೋಧಕ ಡಾ.ಅಣ್ಣಾಭಾವು ಸಾಠೆ ಸಂಘಟನಾ ಸಮಿತಿ ಪದಾಧಿಕಾರಿಗಳು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ವಿಜಯಪುರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ವಕ್ಫ್‌ ಹಠಾವೋ ದೇಶ ಬಚಾವೋ ಆಂದೋಲನಕ್ಕೆ ನಮ್ಮ ಸತ್ಯ ಶೋಧಕ ಡಾ.ಅಣ್ಣಾಭಾವು ಸಾಠೆ ಸಂಘಟನಾ ಸಮಿತಿ ಪದಾಧಿಕಾರಿಗಳು ಬೆಂಬಲ ನೀಡಿದರು.

ವಿಜಯಪುರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಡೆದ ವಕ್ಫ್‌ ಹಠಾವೋ ದೇಶ ಬಚಾವೋ ಆಂದೋಲನಕ್ಕೆ ನಮ್ಮ ಸತ್ಯ ಶೋಧಕ ಡಾ.ಅಣ್ಣಾಭಾವು ಸಾಠೆ ಸಂಘಟನಾ ಸಮಿತಿ ಪದಾಧಿಕಾರಿಗಳು ಬೆಂಬಲ ನೀಡಿದರು.

ಇದೇ ಸಂದರ್ಭದಲ್ಲಿ ಪದಾಧಿಕಾರಿಗಳು ನಗರದಲ್ಲಿ ಸತ್ಯ ಶೋಧಕ ಲೋಕ ಶಾಹೀರ ಡಾ.ಅಣ್ಣಾಬಾವು ಸಾಠೆ ಮೂರ್ತಿ ಪ್ರತಿಷ್ಠಾಪನೆ, ಡಾ.ಅಣ್ಣಾಭಾವು ಸಾಠೆ ಯವರ ಜನ್ಮ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲು, ಅವರಿಗೆ ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಹಾಗೂ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡಲು ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಸ್ಥಾಪಕ ಅಧಕ್ಷ ಸೋಮಲಿಂಗ ರಣದೇವಿ, ಉಪಾಧ್ಯಕ್ಷ ಲಖನ್ ದೇವಕುಳೆ, ಜಿಲ್ಲಾ ಕಾರ್ಯದರ್ಶಿ ರಾಹುಲ ಸದಾಶಿವ ಮೋರೆ, ಪ್ರಕಾಶ ತುಪಸುಂದರ, ನಗರ ಅಧ್ಯಕ್ಷ ಕುಮಾರ ವಾಘ್ಮೋರೆ, ಶಿವಾಜಿ ರಣದೇವಿ, ಸುನೀಲ ಮಳಗಿ, ಮಧು ಕಸಬೆ, ಭಾರತ ದೇವಕುಳೆ, ಜನಾರ್ಧನ ದೇವುಕುಳೆ, ಸುರೇಶ ವಾಘ್ಮೋರೆ, ರಾಜು ರಾಕ್ಷೆ, ರಮೇಶ ಕಾಂಬಳೆ, ಕುಮಾರ ರಣದೇವಿ, ಕೃಷ್ಣ ದೇವಕುಳೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ