ಒನಕೆ ಓಬವ್ವ ಉತ್ಸವ ಯಶಸ್ವಿಗೆ ಸಹಕಾರ ನೀಡಿ: ಶಾಸಕ ಡಾ. ಎನ್.ಟಿ. ಶ್ರೀನಿವಾಸ್

KannadaprabhaNewsNetwork |  
Published : Jan 12, 2026, 02:45 AM IST
 ಕೂಡ್ಲಿಗಿ ತಾಲೂಕು  ಗುಡೇಕೊಟೆಯ ಕೆಪಿಎಸ್ ಶಾಲೆಯಲ್ಲಿ ಒನಕೆ ಓಬವ್ವ ಉತ್ಸವದ ಪೂರ್ವಬಾವಿ ಸಭೆಯು ಶಾಸಕ ಡಾ.ಎನ್.ಟಿ.ಶ್ರೀ ಅಧ್ಯಕ್ಷತೆಯಲ್ಲಿ  ನಡೆಯಿತು.  | Kannada Prabha

ಸಾರಾಂಶ

ಉತ್ಸವನ್ನು ಜ. 31, ಫೆ. 1ರಂದು ನಡೆಸಲಾಗುವುದು. ಒನಕೆ ಓಬವ್ವ ಇತಿಹಾಸವನ್ನು ರಾಜ್ಯಮಟ್ಟದಲ್ಲಿ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಉತ್ಸವ ಆಯೋಜಿಸಲಾಗುತ್ತಿದೆ.

ಕೂಡ್ಲಿಗಿ: ವೀರವನತೆ ಒನಕೆ ಓಬವ್ವನ ಹುಟ್ಟೂರು ಗುಡೇಕೋಟೆಯಲ್ಲಿ ಒನಕೆ ಓಬವ್ವನ ಉತ್ಸವವನ್ನು ಸಾಂಸ್ಕೃತಿಕ ರಸದೌತಣದೊಂದಿಗೆ ಜನೋತ್ಸವವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಗುಡೇಕೊಟೆಯ ಕೆಪಿಎಸ್ ಶಾಲೆಯಲ್ಲಿ ನಡೆದ ಒನಕೆ ಓಬವ್ವ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ಸವನ್ನು ಜ. 31, ಫೆ. 1ರಂದು ನಡೆಸಲಾಗುವುದು. ಒನಕೆ ಓಬವ್ವ ಇತಿಹಾಸವನ್ನು ರಾಜ್ಯಮಟ್ಟದಲ್ಲಿ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಉತ್ಸವ ಆಯೋಜಿಸಲಾಗುತ್ತಿದ್ದು ಗುಡೇಕೋಟೆ ಪಾಳೆಗಾರರ ಇತಿಹಾಸ ಮತ್ತು ಓಬವ್ವ ಚರಿತ್ರೆ ಮೆಲಕು ಹಾಕುವ ಉದ್ದೇಶದಿಂದ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ಉತ್ಸವ ಯಶಸ್ವಿಗೆ ಪೂರಕವಾದ ಸಲಹೆ ನೀಡುವಂತೆ ಶಾಸಕರು ಮನವಿ ಮಾಡಿದರು.

ಮಾಜಿ ತಾಪಂ ಉಪಧ್ಯಾಕ್ಷೆ ವಿಶಾಲಾಕ್ಷಿ ರಾಜಣ್ಣ ಮಾತನಾಡಿ, ಕಳೆದ ವರ್ಷ ಸ್ಥಳೀಯ ಕಲಾವಿದರಿಗೆ ಕಡಿಮೆ ಆದ್ಯತೆ ನೀಡಲಾಗಿತ್ತು. ಊಟಕ್ಕೂ ಪರದಾಡುವಂತಾಯಿತು. ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಆಗ ಶಾಸಕರು, ಸ್ಥಳೀಯ ಕಲಾವಿದರಿಗೆ ಮೊದಲಾದ್ಯತೆ ಎಂದರು.

ಇದು ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಪ್ರೋಟೊ ಕಾಲ್ ಪಾಲಿಸಬೇಕು. ಸ್ಥಳೀಯ ಸಾಧಕರು, ಹಿರಿಯರನ್ನು ಗೌರವಿಸಬೇಕು. ಅದನ್ನು ಬಿಟ್ಟು ಯಾರು ಬೇಕು ಅವರು ವೇದಿಕೆ ಹತ್ತಿ ಕುಳಿತು ಅಭಾಸ ಮಾಡಬಾರದು ಎಂದು ಶಾಸಕರು ಹೇಳಿದರು.

ಸ್ಥಳ ಬದಲಾವಣೆ:

ಕಳೆದ ಎರಡು ವರ್ಷಗಳಿಂದ ಉತ್ಸವನ್ನು ಕಾಲೇಜು ಆವರಣದೊಳಗೆ ಆಚರಿಸಲಾಗಿತ್ತು. ಈಗ ಜನಸಂದಣಿ ಹೆಚ್ಚಾಗಿರುವ ಕಾರಣ ಮುಖ್ಯವೇದಿಕೆಯನ್ನು ಚಿತ್ರಮಂದಿರದ ಬಳಿ ಇರುವ ವಿಶಾಲ ಜಮೀನಿನಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.

ಸಭೆಗೂ ಮುನ್ನ ತಹಸೀಲ್ದಾರ್ ವಿ.ಕೆ. ನೇತ್ರಾವತಿ ಮತ್ತು ಡಿವೈಎಸ್ಪಿ ಮಲೇಶ್ ದೊಡ್ಡಮನಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಸಭೆಯಲ್ಲಿ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ, ನಾಟಕ ಅಕಾಡೆಮೆ ಸದಸ್ಯ ಶಿವನಾಯಕ ದೊರೆ, ಗ್ರಾಪಂ ಅಧ್ಯಕ್ಷ ಎನ್. ಕೃಷ್ಣ, ಮಲ್ಲೇಶ ದೊಡ್ಡಮನಿ, ಸಿಪಿಐ ಪ್ರಹ್ಲಾದ್ ಚನ್ನಗಿರಿ, ಪ್ರಾಚಾರ್ಯ ಗಿರೀಶ್, ಕೆಪಿಎಸ್ ಶಾಲೆಯ ಮುಖ್ಯಶಿಕ್ಷಕಿ ರುಖ್ಮಣಿಬಾಯಿ, ಉಪನ್ಯಾಸಕ ನಾಗರಾಜ್ ಕೊಟ್ರಪ್ಪಗಳ, ಗುಡೇಕೋಟೆ ಬಷಿರ್, ಕೆಇಬಿ ಗೋವಿಂದಪ್ಪ, ತಿಪ್ಪೇಸ್ವಾಮಿ, ಗುಡೇಕೋಟೆ ಕರವೇ ಅಧ್ಯಕ್ಷ ಶಿವಕುಮಾರ, ತಿಪ್ಪೇಸ್ವಾಮಿ, ಜಿಪಂ ಎಇಇ ಮಲ್ಲಿಕಾರ್ಜುನ, ಟಿಎಚ್‌ಒ ಡಾ. ಪ್ರದೀಪ್, ತಾಪಂ ಎಡಿ ಕೆ.ಆರ್. ಪ್ರಕಾಶ, ಪಿಡಿಒ ಬಸಮ್ಮ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ