ಎಂ.ಶೆಟ್ಟಹಳ್ಳಿ ಡೇರಿಗೆ ಅಧ್ಯಕ್ಷರಾಗಿ ಸುರೇಶ್ ಆಯ್ಕೆ

KannadaprabhaNewsNetwork |  
Published : Jun 18, 2025, 11:48 PM IST
18ಕೆಎಂಎನ್ ಡಿ22 | Kannada Prabha

ಸಾರಾಂಶ

ತಾಲೂಕಿನ ಎಂ.ಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಅಧ್ಯಕ್ಷ ಸುರೇಶ್ ಹಾಗೂ ಉಪಾಧ್ಯಕ್ಷೆ ಎಸ್.ಆರ್.ಮಂಜುಳ ಹಾಗೂ ಎಲ್ಲಾ ನಿರ್ದೇಶಕರನ್ನು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಅಭಿನಂಧಿಸಿದರು.

ಪಾಂಡವಪುರ: ತಾಲೂಕಿನ ಎಂ.ಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಅಧ್ಯಕ್ಷ ಸುರೇಶ್ ಹಾಗೂ ಉಪಾಧ್ಯಕ್ಷೆ ಎಸ್.ಆರ್.ಮಂಜುಳ ಹಾಗೂ ಎಲ್ಲಾ ನಿರ್ದೇಶಕರನ್ನು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಅಭಿನಂಧಿಸಿದರು.

ನಂತರ ಮಾತನಾಡಿದ ಸಿ.ಶಿವಕುಮಾರ್, ಸಹಕಾರ ಸಂಘಗಳು ದೇವಸ್ಥಾನ ಇದ್ದಂತೆ. ಇಲ್ಲಿ ಎಲ್ಲರು ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಸಂಘವನ್ನು ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ನೀಡುದರು.ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಎಂ.ಶೆಟ್ಟಹಳ್ಳಿಗೆ ಈ ಹಿಂದಿನ ಶಾಸಕರಾದ ಸಿ.ಎಸ್.ಪುಟ್ಟರಾಜು ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮನ್ಮುಲ್ ನಿರ್ದೇಶಕರಾದ ಶಿವಕುಮಾರ್ ಅವರು ಡೇರಿಗಳ ಅಭಿವೃದ್ಧಿ ಶ್ರಮಿಸುತ್ತಿದ್ದಾರೆ. ಡೇರಿ ಅಧ್ಯಕ್ಷ - ಉಪಾಧ್ಯಕ್ಷರು ರಾಜಕೀಯ ಮಾಡದೇ ಅಧಿಕಾರಿಗಳೊಂದಿಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಪಡೆದು ಡೇರಿಗಳ ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.ಇದೇ ವೇಳೆ ಸಿ.ಶಿವಕುಮಾರ್ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಮಾರ್ಗ ವಿಸ್ತಾರ್ಣಾಧಿಕಾರಿ ಪ್ರಜ್ವಲ್ ಗೌಡ, ನಿರ್ದೇಶಕರಾದ ಶಿವಸ್ವಾಮಿ, ಕೆಂಪೇಗೌಡ, ಪ್ರದೀಪ್, ಸುಶೀಲಮ್ಮ, ಪವಿತ್ರ, ಲಕ್ಷ್ಮಮ್ಮ, ವಿನೋದ್ ಕುಮಾರ್, ರಾಜೇಶ್, ಗ್ರಾಪಂ ಸದಸ್ಯರಾದ ಎಸ್.ಕೆ.ತಮ್ಮೇಗೌಡ, ಕೆಂಪಶೆಟ್ಟಿ,ಮಾಜಿ ಸದಸ್ಯ ಕೆಂಪರಾಜು, ನಿಂಗೇಗೌಡ, ನರಸಿಂಹೇಗೌಡ, ಚಂದ್ರಶೇಖರ್,ಪುಟ್ಟರಾಜಶೆಟ್ಟಿ, ಸ್ವಾಮೀಗೌಡ, ಕಾರ್ಯದರ್ಶಿ ಎಸ್.ಜೆ.ಮಧು ಸೇರಿದಂತೆ ಡೇರಿ ಸಿಬ್ಬಂದಿಗಳು, ಎಂ.ಶೆಟ್ಟಹಳ್ಳಿ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ