ಸುರಪುರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ : 28 ಕ್ಕೂ ಹೆಚ್ಚು ಮನೆಗಳು ಕುಸಿದು, ಬೆಳೆಗಳು ಜಲಾವೃತ

KannadaprabhaNewsNetwork |  
Published : Sep 06, 2024, 01:10 AM ISTUpdated : Sep 06, 2024, 09:14 AM IST
 ಸುರಪುರ ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ಮಳೆಗೆ ಹತ್ತಿ ಬೆಳೆ ನಾಶವಾಗಿರುವುದು.   | Kannada Prabha

ಸಾರಾಂಶ

ಸುರಪುರ ತಾಲೂಕಿನಲ್ಲಿ ಭಾರಿ ಬಿರುಗಾಳಿ ಸಹಿತ ಸುರಿದ ಮಳೆಗೆ 28 ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದು, 57.4 ಮಿ.ಮೀ ಮಳೆ ದಾಖಲಾಗಿದೆ. ಹತ್ತಿ, ಭತ್ತ, ತೊಗರಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಜಲಾವೃತಗೊಂಡು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

 ಸುರಪುರ : ಭಾರಿ ಬಿರುಗಾಳಿ ಮಳೆಗೆ 28ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಅಪಾರ ಪ್ರಮಾಣದಲ್ಲಿ ಬೆಳೆಗಳಿಗೆ ಹಾನಿಯಾಗಿದೆ.

ತಾಲೂಕಿನ ಲಕ್ಷ್ಮಿಪುರ, ಏವೂರು, ಚನ್ನಪಟ್ಟಣ, ತಿಪ್ಪನಟಗಿ, ಸುರಪುರ, ದೇವಿಕೇರಾ, ರಕ್ಮಾಪುರ, ಅರಕೇರಾ, ಹೂವಿನಾಳ ಸೇರಿದಂತೆ ವಿವಿಧೆಡೆ 28ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ.

ಮಳೆಗಾಲದಲ್ಲಿ ರಭಸದಿಂದ 57.4 ಮಿ.ಮೀ. ಮಳೆಯಾಗಿದೆ. ಅರಳಹಳ್ಳಿ ಗ್ರಾಮದಲ್ಲಿ ಶಾಂತಮ್ಮ ಅಯ್ಯಣ್ಣ ಅವರಿಗೆ 3 ಎಕರೆಯಲ್ಲಿ ಹತ್ತಿ ಮಳೆಗೆ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ಸಾಲ ಸೂಲ ಮಾಡಿ ಬೆಳೆ ಮಳೆಗೆ ನಾಶವಾಗಿದೆ ಎಂದು ಜಮೀನು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಭತ್ತದ ಗದ್ದೆಗಳು, ತೊಗರಿ, ಶೇಂಗಾದ ಜಮೀನುಗಳಲ್ಲಿ ಜಲಾವೃತವಾಗಿವೆ. ಇನ್ನೆರಡು ದಿನ ಹೀಗೆ ಮಳೆ ಬಂದರೆ ಬೆಳೆಗಳು ನಾಶವಾಗುತ್ತವೆ. ಈಗಾಗಲೇ ನಷ್ಟವಾಗಿರುವ ಬೆಳೆಗಳ ಸರ್ವೇ ಮಾಡಿ ಪರಿಹಾರ ಕಲ್ಪಿಸಬೇಕು ಎಂದು ರೈತ ಸಂಘಟನೆಯ ಮುಖಂಡರು ಮನವಿ ಮಾಡಿದ್ದಾರೆ.

ಮಳೆ ಪ್ರಮಾಣ: ಸುರಪುರ-57.6 ಮಿ.ಮೀ., ಕೆಂಭಾವಿ-9.4, ಮಿ.ಮೀ., ಕಕ್ಕೇರಾ-2.6 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು