ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾರಕ್ಕಿ ನಿವಾಸಿ ಮಹದೇವಸ್ವಾಮಿ (21) ಮೃತ ಯುವಕ ಆದರೆ ತಮ್ಮ ಮಗನ್ನು ಯುವತಿಯ ಕುಟುಂಬದವರು ಹತ್ಯೆ ಮಾಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.
ಘಟನೆ ವಿವರ:ಮಹದೇವಸ್ವಾಮಿ, ಡೆಲವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದು, ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಆದರೆ ಆತನ ಪ್ರೇಮವನ್ನು ವಿದ್ಯಾರ್ಥಿನಿ ನಿರಾಕರಿಸಿದ್ದಳು. ತನ್ನ ಮಗಳ ಹಿಂದೆ ಬಿದ್ದಿದ್ದಾನೆ ಎಂದು ಮಹದೇವಸ್ವಾಮಿ ವಿರುದ್ಧ ಯುವತಿ ಕುಟುಂಬದವರಿಗೆ ಸಿಟ್ಟಿತ್ತು.
ತಮ್ಮ ಮನೆ ಬಾಗಿಲು ಮಧ್ಯೆ ರಾತ್ರಿಯಲ್ಲಿ ಯಾರು ಬಡಿದ್ದಾರೆ ಎಂದು ಆತಂಕಗೊಂಡು ಯುವತಿ ಹೊರ ಬಂದಿದ್ದಾರೆ. ಮನೆ ಬಾಗಿಲು ತೆರೆದು ಯುವತಿ ಪೋಷಕರು ಹೊರಗೆ ಬರುತ್ತಿದ್ದಂತೆ ಭೀತಿಗೊಂಡು ಮಹದೇವಸ್ವಾಮಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಮಹಡಿಯಿಂದ ಆಯ ತಪ್ಪಿ ಆತ ಬಿದ್ದಾಗ ಗಂಭೀರ ಪೆಟ್ಟಾಗಿ ಕೊನೆ ಉಸಿರೆಳೆದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ತಮ್ಮ ಮಗನನ್ನು ಯುವತಿಯ ಪೋಷಕರೇ ಕೊಂದು ಬೇರೆಡೆ ಮೃತದೇಹ ಬಿಸಾಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ನನ್ನ ಮಗನನ್ನು ಆ ಯುವತಿ ಪ್ರೀತಿಸುತ್ತಿದ್ದಳು. ಈ ಪ್ರೇಮ ವಿಚಾರಕ್ಕೆ ಆಕೆಯ ಪೋಷಕರು ವಿರೋಧಿಸಿದ್ದರು. ಅಂದು ಆ ಯುವತಿ ಕರೆ ಮೇರೆಗೆ ಅವರ ಮನೆಗೆ ಮಹದೇವಸ್ವಾಮಿ ಹೋಗಿದ್ದನು. ನನ್ನ ಮಗನನ್ನು ಕರೆಸಿ ಆಕೆಯ ಪೋಷಕರು ಹತ್ಯೆ ಮಾಡಿರಬಹುದು ಎಂದು ಮೃತನ ಮಹದೇವಸ್ವಾಮಿ ಕುಟುಂಬದವರು ದೂರಿದ್ದಾರೆ.