ಕನ್ನಡಪ್ರಭ ವಾರ್ತೆ ಆಳಂದ
ಈ ವೇಳೆ ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಡಾ.ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ ಸಂಪಾದಕ ಡಾ. ಮಹೇಂದ್ರ ದೇವ್, ಭಾರತೀಯ ಆರ್ಥಿಕ ಸಂಘದ ಅಧ್ಯಕ್ಷ ಡಾ.ತಪನಕುಮಾರ್ ಸಂಡಿಯಾಲ್ ಪ್ರೊ. ಆರ್.ಆರ್. ಬಿರಾದಾರ್ ಉಪಸ್ಥಿತರಿದ್ದರು.
ಪುಸ್ತಕ ಬಿಡುಗಡೆ ಬಳಿಕ ಪ್ರೊ. ಬಿರಾದಾರ್ ಮಾತನಾಡಿ, “ಪುಸ್ತಕವು ಗ್ರಾಮೀಣ ಕೃಷಿಯೇತರ ಚಟುವಟಿಕೆಗಳಲ್ಲಿ (ಆರ್ಎನ್ಎಫ್ಎ) ಕೆಲಸ ಮಾಡುವ ಕಾರ್ಮಿಕರ ಔದ್ಯೋಗಿಕ ಬದಲಾವಣೆ ವಿವರಿಸುತ್ತದೆ ಮತ್ತು ಬಡತನ, ಆದಾಯದ ಅಸಮಾನತೆ ಮತ್ತು ಗ್ರಾಮೀಣ ಕೃಷಿಯೇತರ ಜೀವನ ಪರಿಸ್ಥಿತಿಗಳ ಮೇಲೆ ಅವುಗಳ ಪ್ರಭಾವವನ್ನು ಪರಿಶೀಲಿಸುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಈ ಸಂದರ್ಭದಲ್ಲಿ ಈ ಪುಸ್ತಕವು ದೇಶದ ಗ್ರಾಮೀಣ-ನಗರವಾಸಿಗಳ ಜನಸಂಖ್ಯೆ ಮತ್ತು ಸಾಕ್ಷರತೆ, ಆರೋಗ್ಯದ ಸ್ಥಿತಿ, ಆರ್ಥಿಕತೆ, ಜೀವನ ಮಟ್ಟದಲ್ಲಿನ ಅಸಮಾನತೆಯನ್ನು ಸಹ ಪರಿಶೀಲಿಸುತ್ತದೆ.ಇದು ಭಾರತದಲ್ಲಿನ ಗ್ರಾಮೀಣ ಆರ್ಥಿಕತೆಯ ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಭಾವ್ಯ ತೊಂದರೆಗಳನ್ನು ಗುರುತಿಸುತ್ತದೆ ಮತ್ತು ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರ ಅಭಿವೃದ್ಧಿಗಾಗಿ ಗ್ರಾಮೀಣ-ನಗರ ಸಂಪರ್ಕಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಇದು ಭಾರತ ಮತ್ತು ಕರ್ನಾಟಕದಲ್ಲಿನ ಗ್ರಾಮೀಣ ಕೃಷಿಯೇತರ ಚಟುವಟಿಕೆಗಳ ಪ್ರವೃತ್ತಿಗಳು ಮತ್ತು ಮಾದರಿಗಳನ್ನು ಮತ್ತು ಅವುಗಳ ಬೇಳವಣಿಗೆಗೆ ಕಾರಣವಾದ ಅಂಶಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತದೆ. ಪುಸ್ತಕವು ಗ್ರಾಮೀಣ ಕೃಷಿಯೇತರ ಚಟುವಟಿಕೆಗಳ ಬೆಳವಣಿಗೆಯ ಪ್ರಕ್ರಿಯೆಯನ್ನು ವಿವರಿಸುತ್ತದೆ ಮತ್ತು ಜಾಗತೀಕರಣದ ಯುಗದಲ್ಲಿ ಗ್ರಾಮೀಣ ಕೃಷಿಯೇತರ ಆರ್ಥಿಕತೆಯ ಸುಸ್ಥಿರ ಅಭಿವೃದ್ಧಿಗಾಗಿ ಕಾರ್ಯತಂತ್ರಗಳು ಮತ್ತು ನೀತಿಗಳನ್ನು ರೂಪಿಸಲು ಸಲಹೆಗಳನ್ನು ಒದಗಿಸುತ್ತದೆ” ಎಂದು ಅವರು ಹೇಳಿದರು.