ಸ್ವಾಮಿ ವಿವೇಕಾನಂದ ಬೋಧನೆ ನಮಗೆಲ್ಲ ದಾರಿದೀಪ: ಕೆ.ಜಿ. ಬಸವರಾಜ

KannadaprabhaNewsNetwork |  
Published : Jan 16, 2025, 12:45 AM IST
ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿಯ ಸ್ವಾಮಿ ವಿವೇಕಾನಂದ ಪಾಠಶಾಲೆಯಲ್ಲಿ  ಯುವ ಬ್ರಿಗೇಡ್ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಮುಂಚೆ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿದರು. ============ | Kannada Prabha

ಸಾರಾಂಶ

ಕಾನಾಹೊಸಹಳ್ಳಿ ಪಟ್ಟಣದ ಸ್ವಾಮಿ ವಿವೇಕಾನಂದ ಪಾಠದ ಮನೆಯಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ಕೂಡ್ಲಿಗಿ: ದೇಶದ ಪ್ರಗತಿಗೆ ಯುವಜನರ ಶಕ್ತಿ ಬಳಕೆಯಾಗಬೇಕು. ಯುವಜನರೇ ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬಂತೆ ಬೋಧನೆ ಮಾಡಿರುವ ಸ್ವಾಮಿ ವಿವೇಕಾನಂದರ ಬೋಧನೆ ನಮಗೆಲ್ಲ ದಾರಿದೀಪವಾಗಬೇಕು ಎಂದು ಯುವ ಬ್ರಿಗೇಡ್ ಕಾರ್ಯಕರ್ತ ಕೆಂಚಮಲ್ಲನಹಳ್ಳಿ ಕೆ.ಜಿ. ಬಸವರಾಜ ತಿಳಿಸಿದರು.

ತಾಲೂಕಿನ ಕಾನಾಹೊಸಹಳ್ಳಿ ಪಟ್ಟಣದ ಸ್ವಾಮಿ ವಿವೇಕಾನಂದ ಪಾಠದ ಮನೆಯಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನವನ್ನು ಸುಂದರವಾಗಿ ಹಾಗೂ ಅರ್ಥಪೂರ್ಣವಾಗಿಸುವ ಅವರ ವಾಣಿಯನ್ನು ಪ್ರತಿಯೊಬ್ಬರೂ ಓದಬೇಕಿದೆ. ರಾಜ್ಯಾದ್ಯಂತ ವಾಗ್ಮಿ, ಚಕ್ರವರ್ತಿ ಸೂಲಿಬೆಲಿ ಅವರ ಮಾರ್ಗದರ್ಶನದಲ್ಲಿ ನಾನಾ ವರ್ಷಗಳಿಂದ ವಿವೇಕ ಮಾಲೆ ಧರಿಸುವ ಮೂಲಕ ಯುವಕರು ಸದೃಢ ದೇಹ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿರುವುದು ಉತ್ತಮ ಕಾರ್ಯವಾಗಿದೆ. ಈ ವಿವೇಕ ಮಾಲೆ ಕಾರ್ಯಕ್ರಮದಲ್ಲಿ 18 ದಿನಗಳ ಕಾಲ ವ್ಯಾಯಾಮ, ಯೋಗ, ಧ್ಯಾನದಲ್ಲಿ ತೊಡಗುವಂಥ ಯುವಕರು ಉತ್ತಮ ದಿಕ್ಕಿನಲ್ಲಿ ಸಾಗುವಂತಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರಾದ ದಯಾನಂದ ಸಜ್ಜನ್, ಸಂಜಯ ನಾಯಕ, ಕಾಮಶೆಟ್ಟಿ ವಿನೋದ್, ಪರಶುರಾಮ, ಕಣದಮನೆ ಶಿವಕುಮಾರ್, ತಿಪ್ಪೇಶ್, ಸುದೀಪ್, ಬಸವರಾಜ, ಸತೀಶ್, ಕ್ಲಿಂಟನ್, ಗುರುಮೂರ್ತಿ ಸೇರಿ ಇತರರಿದ್ದರು. ಇದೇ ಸಂದರ್ಭದಲ್ಲಿ ಯುವ ಬ್ರಿಗೇಡ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್‌ಗಳನ್ನು ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!