ಸೂಲಿಬೆಲೆ: ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಇದರಿಂದ ಕೃಷಿ ಮತ್ತು ಪಶುಪಾಲನೆಗೆ ಸಹಕಾರಿಯಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಹರೀಶ್ ಆಭಿಪ್ರಾಯಪಟ್ಟರು.
ಕೆರೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ್ಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ೨೬ ಲಕ್ಷಗಳ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದ್ದು, ಸ್ಥಳೀಯವಾಗಿ ಮಳೆಯ ನೀರು ಸಂಗ್ರಹವಾಗಿ ಕೃಷಿ ಮತ್ತು ಪಶುಪಾಲನೆಗೆ ಹೆಚ್ಚು ಅನುಕೂಲವಾಗಲಿದೆ. ಶ್ರೀ ಕ್ಷೇತ್ರದ ಸೇವಾಕೈಂಕರ್ಯ ಶ್ಲಾಘನೀಯ ಎಂದರು.
ಕೃಷಿ ಮೇಲ್ವಿಚಾರಕ ಚೇತನ್ ಮಾತನಾಡಿ, ನಮ್ಮೂರು, ನಮ್ಮ ಕೆರೆ ಯೋಜನೆಯು ಇಡೀ ರಾಜ್ಯದಲ್ಲಿ ಜಾರಿಯಲಿದ್ದು, ಟಿ.ಅಗ್ರಹಾರ ಕೆರೆ ೫೮೪ನೇ ಕೆರೆ ಅಭಿವೃದ್ಧಿಯಾಗಿದೆ. ನೀರಿನ ಮೂಲಗಳ ರಕ್ಷಣೆಗೆ ಅಂತರ್ಜಲ ವೃದ್ಧಿಯ ದೂರದೃಷ್ಟಿಯಿಂದ ಕೆರೆ ಅಭಿವೃದ್ಧಿ ಅವಶ್ಯವಾಗಿದೆ ಎಂದರು.ಗ್ರಾಪಂ ಅಧ್ಯಕ್ಷೆ ನರಸಮ್ಮನರಸಿಂಹಮೂರ್ತಿ, ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಚನ್ನಕೇಶವ, ರಾಮೇಗೌಡ, ತಿಪ್ಪಯ್ಯ, ವಾಟರ್ ಮೆನ್ ಮಾರಪ್ಪ, ರವಿಕುಮಾರ್, ಕಿರಣ್, ಒಕ್ಕೂಟದ ಅಧ್ಯಕ್ಷೆ ನಾಗವೇಣಿ, ಸೇವಾಪ್ರತಿ ನಿಧಿ ಭಾಗ್ಯಲಕ್ಷ್ಮೀ ಮತ್ತಿತರರಿದ್ದರು.