ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕು ಆಡಳಿತ, ಕನ್ನಡಸಂಘದ ಆಶ್ರಯದಲ್ಲಿ ನಗರದ ಹೊಕ್ಕಳವಾವೊ ಪ್ರದೇಶದಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಬೇರೆ ರಾಜ್ಯಗಳ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಕನ್ನಡ ನಾಮಫಲಕ ಅಳವಡಿಸಬೇಕು. ಅವರೊಂದಿಗೆ ಕನ್ನಡಿಗರು ಬೆಳೆಯಬೇಕು ಎಂದರು.
2500 ವರ್ಷಗಳ ಇತಿಹಾಸ ವಿರುವ ಕನ್ನಡ ಭಾಷೆಗೆ 2008ರಿಂದ ಅಳಿವು- ಉಳಿವಿನ ಚರ್ಚೆಗಳು ಪ್ರಾರಂಭವಾಗಿದೆ. ಆಂಗ್ಲ ಪ್ರಸಿದ್ಧ ಕವಿ ಸೇಕ್ಸಪೀಯರ್ ಅವರ ಕೃತಿಗಳಿಗಿಂತಲೂ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಯುನಿಕೋಡ್ನಲ್ಲಿ ಬಳಕೆಯಾಗುತ್ತಿದೆ. ಐಫೋನ್ನಲ್ಲೂ ಕನ್ನಡ ಬಳಸಬಹುದಾಗಿದೆ. ಬಂಗಾಳಿ ಬಿಟ್ಟರೆ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯಕ್ಕೆ ಬಂದಿವೆ. 2ನೇ ಸ್ಥಾನದಲ್ಲಿದೆ. ವಿಶ್ವದ 22 ಭಾಷೆಗಳಲ್ಲಿ ಕನ್ನಡವು ಒಂದು ಅದರ ಬಗ್ಗೆ ಹೆಮ್ಮೆ ಇರಬೇಕು. ಕನ್ನಡ ಸಾಹಿತ್ಯ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ನಾಡಿನ ಪ್ರಸಿದ್ಧ ಕವಿಗಳ ಕೃತಿಗಳನ್ನು ಓದಬೇಕು. ಗಡಿಪ್ರದೇಶಗಳಲ್ಲಿ ಕನ್ನಡದ ಭಾಷೆಯ ಬಗ್ಗೆ ಗೌರವ ಹೆಚ್ಚಲು, ಘರ್ಷಣೆಗಳಾಗದಂತೆ ಒಗ್ಗಟ್ಟಾಗಿ ಕನ್ನಡದ ಉಳುವಿಗೆ ಶ್ರಮಿಸಬೇಕು ಎಂದರು.ಜಂಬಗಿ ಬ್ರಿಜ್ಗೆ ಸಾಹಿತಿ ರಾವ್ಬಹದ್ದೂರ ಹೆಸರಿಡಿ:
ಜಮಖಂಡಿಯ ರಾಜರಾಗಿದ್ದ ಪಟವರ್ಧನ ಅವರು, ಜಂಬಗಿ ಬ್ರಿಜ್, ಕುಡಚಿ ವರೆಗೆ ರೈಲುಮಾರ್ಗ ಹಾಗೂ ಜಮಖಂಡಿಯನ್ನು ಜಿಲ್ಲಾಕೇಂದ್ರವಾಗಬೇಕೆಂಬ ಕಸನು ಕಂಡಿದ್ದರು. ಅವರ ಆಶಯ ಈಡೇರಿಸುವ ಕೆಲಸವಾಗಬೇಕು. ವಚನ ಸಾಹಿತ್ಯ 40 ಭಾಷೆಗಳಲ್ಲಿ ತರ್ಜುಮೆಯಾಗಿದೆ. ಇನ್ನೂ ವಿದೇಶಿಯ 10 ಭಾಷೆಗಳಿಗೆ ತರ್ಜುಮೆ ಮಾಡುವ ಕೆಲಸ ನಡೆದಿದೆ, ಅದಕ್ಕಾಗಿ ಅರವಿಂದ ಜತ್ತಿಯವರು ಕಾರ್ಯನಿರತರಾಗಿದ್ದು, ಪ್ರಧಾನಿ ಮೋದಿಯವರ ಸರ್ಕಾರ ಅನುದಾನ ನೀಡಿದೆ ಎಂದು ತಿಳಿಸಿದರು. ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಕೊರತೆಯಾಗಿದೆ. 13 ಶಾಲೆಗಳಲ್ಲಿ ಮಕ್ಕಳಿಲ್ಲ, 8 ಶಾಲೆಗಳನ್ನು ಮುಚ್ಚಬೇಕಾದ ಸ್ಥಿತಿ ಬಂದಿದೆ ಎಂದು ತಿಳಿಸಿದರು.
ಕಸ್ತೂರಿಬಾ ಶಾಲೆ, ಜಿಜಿ ಹೈಸ್ಕೂಲ ವಿದ್ಯಾರ್ಥಿಗಳು ರೂಪಕ ಪ್ರದರ್ಶನ ಮಾಡಿದರು. ಪಿಯುಸಿ ವಿದ್ಯಾರ್ಥಿನಿ ಸೌಮ್ಯಾ ನಾವಿ ಹಾಗೂ ವಿಕಲ ಚೇತನ ವಿದ್ಯಾರ್ಥಿಗೆ ಲ್ಯಾಪ್ಟಾಪ್ ನೀಡಲಾಯಿತು. ಪತ್ರಕರ್ತ ಪೀರಸಾಬ ಕೊಡತಿ ಸ್ವಲಿಖಿತ ಕವನ ವಾಚನ ಮಾಡಿದರು. ತಹಸೀಲ್ದಾರ್ ಅನೀಲ ಬಡಿಗೇರ ಸ್ವಾಗತಿಸಿದರು. ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ಉಪಾಧ್ಯಕ್ಷೆ ರೇಖಾ ಕಾಂಬಳೆ, ಪೌರಾಯುಕ್ತ ಜ್ಯೋತಿ ಗಿರೀಶ, ನಗರ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮೊಮಿನ, ಸಿಪಿಐ ಮಲ್ಲಪ್ಪ ಮಡ್ಡಿ, ತಾಪಂ ಇಒ ಸಚಿನ ಮಾಚಕನೂರು, ಅಬಕಾರಿ ಅಧಿಕಾರಿ ಗೀತಾ ತೆಗ್ಯಾಳ, ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ಅರುಣ ಕುಮಾರ ಶಾ ಮುಂತಾದವರು ವೇದಿಕೆಯಲ್ಲಿದ್ದರು.