ಕನ್ನಡಪ್ರಭ ವಾರ್ತೆ ಹರಿಹರ
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಲಭ್ಯ ಇರುವ ಖಾಸಗಿ ಬೋರ್ ವೆಲ್ ಮಾಲೀಕರಿಂದ ತಿಂಗಳಿಗೆ ₹೧೫ ಸಾವಿರದಂತೆ ಬಾಡಿಗೆ ಪಡೆದು ನೀರುಣಿಸಬೇಕು ಹಾಗೂ ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗೂ ತಲುಪಬೇಕು ಎಂದರು.
ಈಗಾಗಲೇ ಕಡರನಾಯಕನಹಳ್ಳಿ ಮಿಟ್ಲಕಟ್ಟೆ, ದೇವರಬೆಳೆಕೆರೆ, ಹರಳಹಳ್ಳಿ, ಕೊಕ್ಕನೂರು, ರಾಮತೀರ್ಥ, ಕುಣೆಬೆಳೆಕೆರೆ, ಜಿ.ಬೇವಿನಹಳ್ಳಿ, ಜಿಗಳಿ ಗ್ರಾಮಗಳು ಸೇರಿ ಇತರೆ ಹಳ್ಳಿಗಳಲ್ಲಿ ಖಾಸಗಿ ಕೊಳವೇಬಾವಿ ಮಾಲಿಕರಿಂದ ಬಾಡಿಗೆ ಪಡೆದು ನೀರನ್ನು ಪೂರೈಸಬೇಕೇ ವಿನಾ ಸರ್ಕಾರದ ನಿಯಮ ಮೀರಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಾ.೩೧ ರಾಗಿ ಖರೀದಿ ಕೇಂದ್ರದಲ್ಲಿ ರೈತರು ನೋಂದಾಯಿಸಲು ಕೊನೆ ದಿನ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಬಿಇಒ ಹನುಮಂತಪ್ಪ ಮಾತನಾಡಿ, ಎಸ್ಎಸ್ಎಲ್ಸಿ ಫಲಿತಾಂಶ ವೃದ್ಧಿಗೆ ವ್ಯಕ್ತಿತ್ವ ವಿಕಸನ ಶಿಬಿರ ಸೇರಿ ಹಲವು ಚಟುವಟಿಕೆಗಳ ಮಾಡಲಾಗುತ್ತಿದೆ. ನಮ್ಮ ತಾಲೂಕು ಫಲಿತಾಂಶದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯುವ ಗುರಿ ಹೊಂದಿದೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ಗುರುಬಸವರಾಜ್, ತಾ.ಪಂ ಇಒ ರಮೇಶ್ ಸುಲ್ಫಿ, ಸಿಡಿಪಿಒ ಪೂರ್ಣಿಮಾ, ಅರಣ್ಯ ಇಲಾಖೆಯ ಅಮೃತಾ, ಪಿಆರ್ಇ ಜೆಇ ಯತಿರಾಜ್, ಪ್ರಭಾರಿ ಟಿಎಚ್ಒ ಪ್ರಶಾಂತ್, ಪ್ರಭಾರ ಟಿಪಿಒ ಪೂಜಾ, ಸ್ವಪ್ನಾ, ಕೆ.ಎನ್.ಲಿಂಗರಾಜ್ ಸೇರಿ ತಾಲೂಕಿನ ಎಲ್ಲಾ ಗ್ರಾಪಂ ಪಿಡಿಒಗಳು ಉಪಸ್ಥಿತರಿದ್ದರು.