- ಯಶವಂತ ರಾವ್ ಹಿನ್ನೆಲೆ ಏನೆಂಬುದು ನೋಡಿಕೊಳ್ಳಲಿ: ದಿನೇಶ್ ಶೆಟ್ಟಿ ಸಲಹೆ - - -
ಶಾಮನೂರುರಂತಹ ದೊಡ್ಡ ಕುಟುಂಬದ ಬಗ್ಗೆ ಮಾತನಾಡಿದರೆ ದೊಡ್ಡವನಾಗುವ ಭ್ರಮೆಯಲ್ಲಿರುವ ಯಶವಂತ ರಾವ್ ಜಾಧವ್ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸೋತರೂ ತಾನು ಹೇಗೆ ಶ್ರೀಮಂತನಾದೆ, ತಮ್ಮ ಹಿನ್ನೆಲೆ ಏನೆಂಬುದನ್ನೂ ಮೊದಲು ಬಹಿರಂಗಪಡಿಸಲಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟದ ಅಂಗಡಿಯಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದ ಯಶವಂತ ರಾವ್ ಅದರಿಂದಲೇ ಶ್ರೀಮಂತರಾಗಿದ್ದಾ ಅಥವಾ ಅಕ್ರಮ ಮದ್ಯ ಮಾರಾಟ ಮಾಡಿ ಶ್ರೀಮಂತರಾಗಿದ್ದಾ? ತಮ್ಮ ಇತಿಹಾಸ ಮರೆತು, ಅನ್ಯರ ಇತಿಹಾಸದತ್ತ ಯಶವಂತ ರಾವ್ ಬೊಟ್ಟು ಮಾಡುತ್ತಿದ್ಧಾರೆ. ತಾನು ನಡೆದು ಬಂದ ಹಾದಿ ತಿರುಗಿ ನೋಡಲಿ ಎಂದರು.ಮದ್ಯದಂಗಡಿಯಲ್ಲಿ ಮದ್ಯ ಪೂರೈಸುವ ವ್ಯಕ್ತಿ ಹೇಗೆ ಕೋಟ್ಯಂತರ ರು. ಆಸ್ತಿ ಗಳಿಸಲು ಸಾಧ್ಯ? ದಾವಣಗೆರೆ ಬಹುತೇಕ ಕಡೆ ಇಂತಹ ವ್ಯಕ್ತಿಯ ನಿವೇಶನಗಳು ಹೇಗೆ ಬಂದವು? ಪ್ರತಿಷ್ಟಿತ ಬಡಾವಣೆಯಲ್ಲಿ ರಾಕೇಶ ಜಾಧವ್ ಕಾಂಪ್ಲೆಕ್ಸ್ ಅಂತಾ ಕಟ್ಟಿದ್ದರ ಹಣದ ಮೂಲ ಯಾವುದು? ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರರ ಗಾರ್ಡ್ ಆಗಿರುವ ಯಶವಂತ ರಾವ್ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮೊದಲಿನಿಂದಲೂ ಹಿಂದುಗಳಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ ಎಂದು ದಿನೇಶ್ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ನಗರ, ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷದಿಂದ ಉತ್ತಮ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯ ಸಹಿಸಲಾಗದೇ ಯಶವಂತ ರಾವ್ ಮಾತಾಡುತ್ತಿರುವುದು ಸರಿಯಲ್ಲ. ನಾನು ಶಾಮನೂರು ಕುಟುಂಬದ ಚಮಚಾಗಿರಿ ಮಾಡಿಕೊಂಡು ಬದುಕುತ್ತಿರುವುದಾಗಿ ಅವಹೇಳನವಾಗಿ ಮಾತನಾಡಿರುವ ಯಶವಂತ ರಾವ್ ತಮ್ಮ ಹಿನ್ನೆಲೆ ಬಗ್ಗೆ ಬಹಿರಂಗಪಡಿಸಲಿ ಎಂದು ದಿನೇಶ ಶೆಟ್ಟಿ ತಿಳಿಸಿದರು.
- - -
- ದಿನೇಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ, ದಾವಣಗೆರೆ.
-3ಕೆಡಿವಿಜಿ2: ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ಮುಖಂಡ, ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.