ಕನ್ನಡಪ್ರಭ ವಾರ್ತೆ ಶಿರಾ
ಅವರು ತಾಲೂಕಿನ ನಾದೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಕೋರಿ ಮಾತನಾಡಿದರು. ಶಿರಾ ತಾಲೂಕಿಗೆ ಹೇಮಾವತಿ, ಎತ್ತಿನಹೊಳೆ, ಅಪ್ಪರ ಭದ್ರ ನೀರಾವರಿ ಯೋಜನೆಯಡಿ ಮೂರು ನದಿಗಳ ಸಂಗಮ ಮಾಡಿದ ಕೀರ್ತಿ ಜಯಚಂದ್ರ ರವರಿಗೆ ಸಲ್ಲುತ್ತದೆ. ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಹಲವಾರು ರಾಜಕಾರಣಿಗಳ ಪ್ರಯತ್ನ ಇದ್ದರೂ ಕೂಡ ಯೋಜನೆ ಯಶಸ್ವಿಗೊಳಿಸಿ, ಹೇಮಾವತಿ ನೀರಿನಿಂದ ಮದಲೂರು ಕೆರೆ ಭರ್ತಿಯಾಗಲು ಜಯಚಂದ್ರ ಅವರ ಕೊಡುಗೆ ಅಪಾರ. ನಮಗೆ ವಿಶ್ವಾಸವಿದ್ದು ಮುಂಬರುವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಯಲ್ಲಿ ಟಿ.ಬಿ. ಜಯಚಂದ್ರ ಅವರಿಗೆ ಮಂತ್ರಿ ಸ್ಥಾನ ಸಿಕ್ಕೆ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತುಳಸಿ ಮಧುಸೂದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಕ್ಷಿತಾ ಆರ್. ಕೆ. ಮಾರುತಿ, ಮಾಜಿ ಅಧ್ಯಕ್ಷರುಗಳಾದ ಮೆಹರ್ ತಾಜ್ ಬಾಬು, ಪಾರ್ವತಮ್ಮ, ಮೇಘಶ್ರೀ ನವೀನ್, ಕಲ್ಲೇಗೌಡ, ಸದಸ್ಯರಾದ ಮಂಜುನಾಥ ಸ್ವಾಮಿ, ಪಿ.ಬಿ.ನಾಗರಾಜು, ಭೂತರಾಜು, ವಿಜಯಕುಮಾರ್ ,ಮಂಜುನಾಥ್, ರಾಮಣ್ಣ, ಲಕ್ಷ್ಮಮ್ಮ, ನಾದೂರು ಲಕ್ಷ್ಮಮ್ಮ, ಸುನಂದಮ್ಮ, ಪಿಡಿಒ ಮಹೇಶ್, ಕಾರ್ಯದರ್ಶಿ ತಿಪ್ಪೇಸ್ವಾಮಿ , ಸೇರಿದಂತೆ ಹಲವರು ಹಾಜರಿದ್ದರು.