ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನ
ಗ್ರಾಮೀಣ ಮಕ್ಕಳ ಪ್ರತಿಭೆ ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನದ ಮೂಲಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಕಳಸ ಕೆಪಿಎಸ್ ಶಿಕ್ಷಕ ಸಂದೇಶ್ ಕೆ.ಎಲ್. ಅವರಿಗೆ 2026–27ನೇ ಸಾಲಿನ ಜಿಲ್ಲಾ "ಅತ್ಯುತ್ತಮ ಶಿಕ್ಷಕ ಪ್ರಶಸ್ತಿ " ನೀಡಿ ಗೌರವಿಸಲಾಗಿದೆ.
ಕಳಸ ತಾಲೂಕು ಕಳಕೋಡಿನ ಲಕ್ಷ್ಮಣಚಾರ್ಯ, ಶಾಂತ ಅವರ ತೃತೀಯ ಪುತ್ರರಾದ ಸಂದೇಶ್ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಪ್ರಾಥಮಿಕ ಶಿಕ್ಷಣ, ಕುದುರೆಮುಖ, ಶೃಂಗೇರಿ ಬಿಜಿಎಸ್ ನಲ್ಲಿ ಕಾಲೇಜು, ಬಿಇಡಿ ಪಡೆದು, ಕುವೆಂಪು ವಿವಿಯಲ್ಲಿ ಎಂ ಎಸ್ಸಿ ಪೂರ್ಣಗೊಳಿಸಿ ಪ್ರಸ್ತುತ ಕಳಸ ಕೆ ಪಿ ಎಸ್ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.ವಿದ್ಯಾರ್ಥಿಗಳಲ್ಲಿರುವ ಕುತೂಹಲ ಗುರುತಿಸಿ ಜ್ಞಾನ ಮತ್ತು ಹೊಸ ಆವಿಷ್ಕಾರಗಳಾಗಿ ಪರಿವರ್ತಿ ಸುವುದು ಅವರ ಧ್ಯೇಯ. ವಿಜ್ಞಾನ, ಗಣಿತ, ತಂತ್ರಜ್ಞಾನ, ನವೀನತೆ ಹಾಗೂ ಸೃಜನಶೀಲ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮೀಣ ವಿದ್ಯಾರ್ಥಿಗಳಲ್ಲೂ ವಿಶ್ವಮಟ್ಟದ ಸಾಮರ್ಥ್ಯವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.ಕಳಸದಂತಹ ಗ್ರಾಮೀಣ ವಿದ್ಯಾರ್ಥಿಗಳನ್ನು 6 ಬಾರಿ ರಾಷ್ಟ್ರಮಟ್ಟದ ವೈಜ್ಞಾನಿಕ ಸ್ಪರ್ಧೆಗಳಿಗೆ ಕರೆ ದೊಯ್ದು, ರಾಷ್ಟ್ರ ಮಟ್ಟದಲ್ಲಿ ಪ್ರತಿಭೆ ಅನಾವರಣಗೊಳಿಸಿರುವುದು ಅವರ ಪ್ರಮುಖ ಸಾಧನೆ. ಅಲ್ಲದೆ, ಅಂತಾ ರಾಷ್ಟ್ರೀಯ ಮಟ್ಟದ ಬ್ರಿಕ್ಸ್ ಮ್ಯಾಥ್ಸ್ ಸ್ಪರ್ಧೆಯಲ್ಲೂ ಎಂಟು ವಿದ್ಯಾರ್ಥಿ ಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
-- ಬಾಕ್ಸ್--
-- ಕೋಟ್-- "ಬಾಳಿಗೆ ಬೆಳಕಾದ ಗುರು ಸಂದೇಶ್ "ಸಂದೇಶ್ ಸರ್ ನಮಗೆ ಪಾಠ ಹೇಳುವ ಗುರುವಷ್ಟೇ ಅಲ್ಲ. ನಮ್ಮ ಬದುಕಿಗೆ ದಾರಿದೀಪ. ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ರೀತಿ ವಿಷಯಗಳನ್ನು ಅವರು ಬೋಧಿಸುವ ರೀತಿ ಅತ್ಯಂತ ವಿಶಿಷ್ಟ. ವಿಜ್ಞಾನ ಪ್ರದ-ರ್ಶನಗಳ ವಿಷಯದಲ್ಲಿ ಅವರ ಪ್ರೋತ್ಸಾಹ ಮರೆಯುವಂತಿಲ್ಲ. ಈ ವರ್ಷ ಅವರು ಪ್ರತಿಯೊಂದು ವಿಜ್ಞಾನ ಪ್ರದರ್ಶನಕ್ಕೂ ನನ್ನ ಬೆನ್ನೆಲುಬಾಗಿದ್ದರು. ನಾನು 3 ದಿನಗಳ ರಾಜ್ಯ ಮಟ್ಟದ ವಿಜ್ಞಾನ ಪ್ರದರ್ಶನ ಹಾಗೂ ಹೈದರಾಬಾದ್ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ಅವಕಾಶ ಪಡೆದೆ. ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳಿದ್ದರೂ ಸ್ನೇಹಿತ ನಂತೆ ಆಲಿಸಿ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.