ಕನ್ನಡಪ್ರಭ ವಾರ್ತೆ ನಾಗಮಂಗಲ
ಈ ವೇಳೆ ತಹಸೀಲ್ದಾರ್ ಜಿ.ಆದರ್ಶ ಮಾತನಾಡಿ, ತಾಲೂಕಿನ ಇಬ್ಬರು ಶಿಕ್ಷಕರ ಕಾರ್ಯಕ್ಷಮತೆ ಉಳಿದೆಲ್ಲಾ ಶಿಕ್ಷಕರಿಗೆ ಪ್ರೇರಣೆಯಾಗಿ ಆದರ್ಶಪ್ರಾಯರಾಗಿದ್ದಾರೆ. ಇದೇ ರೀತಿ ಎಲ್ಲಾ ಗಣತಿದಾರರು ತಮ್ಮ ಜವಾಬ್ದಾರಿ ಅರಿತು ತ್ವರಿತಗತಿಯಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ, ಶಿಕ್ಷಕರಾದ ಹಾಲೇಶ್ ಮತ್ತು ರವಿಕುಮಾರ್ ಅವರ ಕೆಲಸದಿಂದಾಗಿ ಶಿಕ್ಷಣ ಇಲಾಖೆ ಗೌರವ ಹೆಚ್ಚಿದೆ. ಈ ಇಬ್ಬರು ಶಿಕ್ಷಕರು ಉಳಿದ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ನಿಮ್ಮ ಕಾರ್ಯಕ್ಷಮತೆಗೆ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ ಎಂದರು.ಈ ವೇಳೆ ಕ್ಷೇತ್ರ ಸಮನ್ವಯ ಅಧಿಕಾರಿ ಕೆ. ರವೀಶ್, ಮೇಲ್ವಿಚಾರಕರಾದ ಕೆಂಪೇಗೌಡ, ಮನೋಹರ್, ತಾಂತ್ರಿಕ ಸಿಬ್ಬಂದಿ ಮುತ್ತುರಾಜ್, ಚಂದ್ರಶೇಖರ್, ರಾಘವನ್, ದರ್ಶನ್ ಉಪಸ್ಥಿತರಿದ್ದು, ಸಮೀಕ್ಷೆ ಪೂರ್ಣಗೊಳಿಸಿದ ಇಬ್ಬರು ಶಿಕ್ಷಕರನ್ನು ಅಭಿನಂದಿಸಿ ಶುಭ ಕೋರಿದರು.
ಪಾಂಡವಪುರ:
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಭಿನಂದನೆ ಸ್ವೀಕರಿಸಿದ ನಿರ್ದೇಶಕ ಎ.ಕೃಷ್ಣ ಮಾತನಾಡಿ, ಚುನಾವಣೆಯಲ್ಲಿ ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜು ಮಾರ್ಗದರ್ಶನದಲ್ಲಿ ಸ್ಪರ್ಧಿಸಿ ಷೇರುದಾರ ಮತದಾರ ಆಶೀರ್ವಾದದಿಂದ ಗೆಲುವು ಸಾಧಿಸಿದ್ದೇನೆ ಎಂದರು.
ಈ ವೇಳೆ ಕುರುಬ ಸಮುದಾಯದ ಮುಖಂಡರಾದ ಚಿಕ್ಕಮರಳಿ ಪಿ.ರಮೇಶ್, ಹಾರೋಹಳ್ಳಿ ಗಿರೀಗೌಡ, ಈರುಳ್ಳಿ ರಮೇಶ್, ಶ್ರೀಧರ್, ಶಿವಕುಮಾರ್, ಅರಳಕುಪ್ಪೆಮಹೇಶ್, ಕೆ.ಬೆಟ್ಟಹಳ್ಳಿ ಸ್ವಾಮಿ, ಎಲೆಕೆರೆ ರಾಜೇಶ್, ಚಿನಕುರಳಿ ಮನು, ಎರೆಗೌಡನಹಳ್ಳಿಲೋಕೇಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.