ತಂತ್ರಜ್ಞಾನ ಭರಿತ ಭಾರತ: ಮಹೇಂದ್ರಕರ್‌

KannadaprabhaNewsNetwork |  
Published : Mar 01, 2026, 02:30 AM IST
ಹುಬ್ಬಳ್ಳಿಯ ಡೆನಿಸನ್ಸ್‌ ಹೊಟೇಲ್‌ನಲ್ಲಿ ಶನಿವಾರ ಐಬಿಎಂಆರ್​ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಫಿನ್ನೋವೇಟ್​ ಸಮಿಟ್  ಶೃಂಗಸಭೆಯನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಮಟ್ಟದ ಫಿನ್​ಟೆಕ್​ ಮತ್ತು ನಾವಿನ್ಯತೆ ಸಮಿಟ್‌ ಇದಾಗಿದ್ದು, ವಿವಿಧೆಡೆಯಿಂದ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು. ವಿಕಸಿತ ಭಾರತ ಸಂಕಲ್ಪದೊಂದಿಗೆ ಆಯೋಜಿಸಿದ್ದ ಸಮ್ಮೇಳನಕ್ಕೆ ಅನೇಕ ವಿದ್ಯಾರ್ಥಿಗಳು, ವಾಣಿಜ್ಯೋದ್ಯಮಿಗಳು, ಉದ್ಯಮಶೀಲರು ಆಗಮಿಸಿದ್ದಾರೆ.

ಹುಬ್ಬಳ್ಳಿ:

ಇಲ್ಲಿಯ ಐಬಿಎಂಆರ್​ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ನವೀನತೆ, ಸ್ಟಾರ್ಟ್ಅ​ಪ್​ ಚಿಂತನೆ ಹಾಗೂ ಉದ್ಯಮಶೀಲತೆ ಬೆಳೆಸುವ ಸಲುವಾಗಿ ನಗರದ ಡೆನಿಸನ್ಸ್​ ಹೋಟೆಲ್​ನಲ್ಲಿ ಏರ್ಪಡಿಸಿದ್ದ ಮೆಗಾ ಫಿನ್ನೋವೇಟ್​ ಶೃಂಗಸಭೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಅಂತಾರಾಷ್ಟ್ರೀಯ ಮಟ್ಟದ ಫಿನ್​ಟೆಕ್​ ಮತ್ತು ನಾವಿನ್ಯತೆ ಸಮಿಟ್‌ ಇದಾಗಿದ್ದು, ವಿವಿಧೆಡೆಯಿಂದ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು. ವಿಕಸಿತ ಭಾರತ ಸಂಕಲ್ಪದೊಂದಿಗೆ ಆಯೋಜಿಸಿದ್ದ ಸಮ್ಮೇಳನಕ್ಕೆ ಅನೇಕ ವಿದ್ಯಾರ್ಥಿಗಳು, ವಾಣಿಜ್ಯೋದ್ಯಮಿಗಳು, ಉದ್ಯಮಶೀಲರು ಆಗಮಿಸಿದ್ದಾರೆ. ತಜ್ಞರು, ಉದ್ಯಮದಲ್ಲಿ ಯಶಸ್ಸು ಕಂಡವರು ತಮ್ಮದೇ ಆದ ಅನುಭವ ಹಂಚಿಕೊಂಡರು.

ತಂತ್ರಜ್ಞಾನ ಭರಿತ ಭಾರತ:

ಫಿನ್ನೋವೇಟ್​ ಶೃಂಗಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಬಿಎಂಆರ್​ ಚೇರ್‌ಮನ್​ ವಿನಯಚಂದ್ರ ಮಹೇಂದ್ರಕರ್​, ದೇಶವು ಬರಲಿರುವ ದಿನಗಳಲ್ಲಿ ತಂತ್ರಜ್ಞಾನ ಭರಿತ ಭಾರತವಾಗಲಿದೆ. ಶಿಕ್ಷಣ, ಆರ್ಥಿಕ, ಸಾಮಾಜಿಕ ರಂಗಗಳಲ್ಲಿ ತಂತ್ರಜ್ಞಾನವು ಸಂಪತ್ಭರಿತವಾಗಲಿದೆ. ಇದು ಪ್ರಪಂಚದಲ್ಲಿಯೇ ಬಲಿಷ್ಠ ತಂತ್ರಜ್ಞಾನ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ ಎಂದರು.

ಶೃಂಗಸಭೆಯಲ್ಲಿ 147 ಸ್ಟಾರ್ಟಅಪ್​ಗಳು, 500ಕ್ಕಿಂತ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕನಕದಾಸ ಶಿಕ್ಷಣ ಸಮಿತಿಯ ಚೇರ್‌ಮನ್​ ರವೀಂದ್ರನಾಥ ದಂಡಿನ, ಐಬಿಎಂಆರ್​ ಸಂಸ್ಥೆಯ ಟ್ರಸ್ಟಿ ಸುಮಾ ಮಹೇಂದ್ರಕರ, ಕರ್ನಾಟಕ ರಾಜ್ಯ ಕಾನೂನು ವಿವಿ ಸಿಂಡಿಕೇಟ್​ ಸದಸ್ಯ ಡಾ. ಎಚ್​.ವಿ. ಬೆಳಗಲಿ, ಐಬಿಎಂಆರ್​ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆ ಸಂಜನಾ ಮಹೇಂದ್ರಕರ, ಎಸ್​ಟಿಪಿಐ ನಿರ್ದೇಶಕ ಶಶಿಕುಮಾರ, ಪವನ ಜೈನ್​, ಡಾ. ವೆಂಕಟೇಶ ಅರಕೇರಿ, ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ, ಕೆಡಿಇಎಂನ ವೆಂಕಟೇಶ ದೇಶಪಾಂಡೆ ಸೇರಿದಂತೆ ಇತರರು ಪ್ಯಾನಲ್​ ಚರ್ಚೆಯಲ್ಲಿ ಪಾಲ್ಗೊಂಡರು.ಅಭಯ ಕಬಾಡಿ, ಶಶಿಕರ ಕೃಷಿ, ರಶ್ಮಿತಾ ಕಲ್ಯಾಣ, ಹಲವು ಸಂಪನ್ಮೂಲ ವ್ಯಕ್ತಿಗಳು ಅನುಭವ ಹಂಚಿಕೊಂಡರು. ಸಿಇಒ ಇಗ್ನೇಶ್​ ಸಕ್ರಿ ಸ್ವಾಗತಿಸಿದರು. ರೇಖಾ ಮಹೇಂದ್ರಕರ ಪ್ರಾಸ್ತಾವಿಕ ಮಾತನಾಡಿದರು. ರೋಹನಕುಮಾರ್​ ಕುಲಕರ್ಣಿ ಶೃಂಗಸಭೆ ಕುರಿತು ತಿಳಿಸಿದರು. ನಜೀಮ್​ ಮಿಶ್ರಿಕೋಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಭವದ ಮೂಲಕ ವಿಜ್ಞಾನ ಕಲಿಯಿರಿ: ಕುಲಪತಿ ಖಾನ್‌
ಮಾರ್ಚ್ 5ರಂದು ರಾಮನಗರದಲ್ಲಿ ಉದ್ಯೋಗ ಮೇಳ