ಇಂದಿನಿಂದ ಹತ್ತು ದಿನ ಇ-ಪೌತಿ ಆಂದೋಲನ: ದಿವ್ಯಪ್ರಭು

KannadaprabhaNewsNetwork |  
Published : Jul 24, 2025, 01:45 AM IST
23ಡಿಡಬ್ಲೂಡಿ7 | Kannada Prabha

ಸಾರಾಂಶ

ರಾಜ್ಯ ಕಂದಾಯ ಸಚಿವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇ-ಪೌತಿ ತಂತ್ರಾಂಶ ವಿಸ್ತರಿಸಲು ನಿರ್ದೇಶನ ನೀಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಪಹಣಿ ಪತ್ರಿಕೆಗಳಿಗೆ ಆಧಾರ ಜೋಡಣೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಸದರಿ ಕಾರ್ಯದಲ್ಲಿ ಈವರೆಗೂ ಶೇ. 87.33 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.

ಧಾರವಾಡ:

ಪಹಣಿಗಳಿಗೆ ಆಧಾರ ಜೋಡಣೆ ಸಂದರ್ಭದಲ್ಲಿ ಜಿಲ್ಲೆಯ ಸಾವಿರಾರು ಖಾತೆಗಳಲ್ಲಿ ವಾರಸುದಾರರ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಉಚಿತವಾಗಿ ಖಾತೆ ಮಾಡುವ ಉದ್ದೇಶದಿಂದ ಇ-ಪೌತಿ ಅಂದೋಲನವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ.

ಜು. 24 ರಿಂದ ಆಗಸ್ಟ್ 2ರ ವರೆಗೆ ಹತ್ತು ದಿನಗಳ ವಿಶೇಷ ಇ-ಪೌತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಕಂದಾಯ ಸಚಿವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇ-ಪೌತಿ ತಂತ್ರಾಂಶ ವಿಸ್ತರಿಸಲು ನಿರ್ದೇಶನ ನೀಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಪಹಣಿ ಪತ್ರಿಕೆಗಳಿಗೆ ಆಧಾರ ಜೋಡಣೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಸದರಿ ಕಾರ್ಯದಲ್ಲಿ ಈವರೆಗೂ ಶೇ. 87.33 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.

ವಿಶೇಷ ಇ-ಪೌತಿ ಆಂದೋಲನದ ಸಂದರ್ಭದಲ್ಲಿ ಪೌತಿ ಅಂತಾ ಗುರುತಿಸಲಾದ ಪಹಣಿ ಪತ್ರಿಕೆಗಳ ಇ-ಪೌತಿ ಕಾರ್ಯಕ್ಕೆ ಅವಶ್ಯಕ ದಾಖಲೆಗಳೊಂದಿಗೆ ಸಾರ್ವಜನಿಕರು ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿ, ಉಚಿತವಾಗಿ ಖಾತೆ ಬದಲಾವಣೆ ಮಾಡಿಸಿಕೊಳ್ಳಬಹುದು.

ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯ - 0836-2445508, ಧಾರವಾಡ ಉಪವಿಭಾಗಾಧಿಕಾರಿಗಳ ಕಾರ್ಯಾಲಯ - 0836-2233860, ಧಾರವಾಡ ತಹಸೀಲ್ದಾರರ ಕಾರ್ಯಾಲಯ -0836-2233822, ಅಳ್ನಾವರ ತಹಸೀಲ್ದಾರರ ಕಾರ್ಯಾಲಯ - 0836-2385544, ಹುಬ್ಬಳ್ಳಿ ನಗರ - 0836-2358035, ಹುಬ್ಬಳ್ಳಿ ಗ್ರಾಮೀಣ - 0836-2233844, ಕಲಘಟಗಿ - 08370-284535, ಕುಂದಗೋಳ - 08340-290239, ನವಲಗುಂದ - 08380-229240, ಅಣ್ಣಿಗೇರಿ - 8618442759ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಬಡತನ ನಿರ್ಮೂಲನೆಗೆ ಸಂಜೀವಿನಿ ಸಹಕಾರಿ
ರೈತರು ಸರ್ಕಾರದ ಸೌಕರ್ಯ ಪಡೆಯಲು ಎಫ್‌ಐಡಿ ಮಾಡಿಸಲಿ: ಚೇತನಾ ಪಾಟೀಲ