ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ -‘ಪಿಂಕಿ ಎಲ್ಲಿ’,ನಿರ್ಮಾಪಕರಿಗೆ ಕೊಡುವ ‘ಕೆ.ಸಿ.ಎನ್.ಗೌಡ ಪ್ರಶಸ್ತಿ’-ಕೃಷ್ಣೇಗೌಡ, ನಿರ್ದೇಶಕರಿಗೆ ಕೊಡುವ ‘ಎಚ್ಎಲ್ಎನ್ ಸಿಂಹ ಪ್ರಶಸ್ತಿ’ಗೆ ಪೃಥ್ವಿ ಕೊಣನೂರು ಅವರು ಭಾಜನರಾಗಿದ್ದಾರೆ. ಉಳಿದಂತೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ-‘ವರ್ಣಪಟಲ’(ನಿರ್ದೇಶಕ - ಚೇತನ ಮುಂಡಾಡಿ),ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ‘ಹರಿವ ನದಿಗೆ ಮೈಯೆಲ್ಲಾ ಕಾಲು’ (ನಿರ್ದೇಶನ-ಬಾಬು ಈಶ್ವರ ಪ್ರಸಾದ್ ಎಸ್.ಎಸ್), ವಿಶೇಷ ಸಾಮಾಜಿಕ ಕಳಕಳಿ ಪ್ರಶಸ್ತಿಗೆ ‘ಗಿಳಿಯು ಪಂಜರದೊಳಿಲ್ಲ’ (ನಿರ್ದೇಶನ - ರಾಮದಾಸ್ ನಾಯ್ಡು ಪಿ.ಆರ್). ಮತ್ತು ‘ಈ ಮಣ್ಣು’ (ನಿರ್ದೇಶನ - ಶಿವಪ್ರಸಾದ್ ಶೆಟ್ಟಿ ಕೆ.ಪಿ) ಆಯ್ಕೆಯಾಗಿದೆ.ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ-‘ಫೋರ್ ವಾಲ್ಸ್’ (ನಿರ್ದೇಶನ- ಸಂಗಮೇಶ್ ಎಸ್. ಸಜ್ಜನರ್), ನಿರ್ಮಾಪಕರಿಗೆ ಕೊಡುವ ‘ನರಸಿಂಹರಾಜು ಪ್ರಶಸ್ತಿ’ಗೆ ಟಿ.ವಿಶ್ವನಾಥ್ ನಾಯ್ಕ್, ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ‘ಪದಕ’, (ನಿರ್ದೇಶನ - ಆದಿತ್ಯ ಆರ್. ಚಿರಂಜೀವಿ), ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ನೀಲಿ ಹಕ್ಕಿ’, (ನಿರ್ದೆಶಕ - ಗಣೇಶ್ ಹೆಗ್ಡೆ), ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಗೆ ತುಳು ಭಾಷೆಯ‘ಜೀಟಿಗೆ’ (ತುಳು), (ನಿರ್ದೇಶಕ-ಸಂತೋಷ್ ಮಾಡ) ಭಾಜನವಾಗಿದೆ.
ಅತ್ಯುತ್ತಮ ಪೋಷಕ ನಟನೆಗೆ ಕೊಡುವ ‘ಕೆ.ಎಸ್.ಅಶ್ವಥ್ ಪ್ರಶಸ್ತಿ’ ರಮೇಶ್ ಪಂಡಿತ್ (ಚಿತ್ರ - ತಲೆದಂಡ), ಅತ್ಯುತ್ತಮ ಪೋಷಕ ನಟಿ-ಕೆ.ಎಸ್. ಮಂಜುಳಮ್ಮ (ಚಿತ್ರ-ದಂತಪುರಾಣ), ಅತ್ಯುತ್ತಮ ಚಿತ್ರ ಕತೆ-ಶಶಿಕಾಂತ್ ಗಟ್ಟಿ (ಚಿತ್ರ - ರಾಂಚಿ), ಅತ್ಯುತ್ತಮ ಚಿತ್ರಕತೆ - ರಾಘವೇಂದ್ರಕುಮಾರ್ (ಚಿತ್ರ - ಚಾಂದಿನಿ ಬಾರ್), ಅತ್ಯುತ್ತಮ ಸಂಭಾಷಣೆ-ವೀರಪ್ಪ ಮರಳವಾಡಿ (ಚಿತ್ರ - ಹೂವಿನ ಹಾರ), ಅತ್ಯುತ್ತಮ ಛಾಯಾಗ್ರಹಣ-ಅಶೋಕ್ ಕಶ್ಯಪ್ (ಚಿತ್ರ - ತಲೆದಂಡ), ಅತ್ಯುತ್ತಮ ಸಂಗೀತ ನಿರ್ದೇಶನ-ಗಗನ ಬಡೇರಿಯಾ (ಚಿತ್ರ- ಮಾಲ್ಕುಡಿ ಡೇಸ್) ಆಯ್ಕೆಯಾಗಿದೆ.ಅತ್ಯುತ್ತಮ ಸಂಕಲನ-ನಾಗೇಂದ್ರ ಕೆ.ಉಜ್ಜನಿ (ಚಿತ್ರ - ಆಕ್ಟ್ 1978), ಅತ್ಯುತ್ತಮ ಬಾಲ ನಟ-ಮಾಸ್ಟರ್ ಅಹಿಲ್ ಅನ್ಸಾರಿ (ಚಿತ್ರ - ದಂತ ಪುರಾಣ), ಅತ್ಯುತ್ತಮ ಬಾಲನಟಿ-ಬೇಬಿ ಹಿತೈಷಿ ಪೂಜಾರ್ (ಚಿತ್ರ - ಪಾರು), ಅತ್ಯುತ್ತಮ ಕಲಾ ನಿರ್ದೇಶನ- ಗುಣಶೇಖರ್ (ಚಿತ್ರ - ಬಿಚ್ಚುಗತ್ತಿ), ಅತ್ಯುತ್ತಮ ಗೀರ ರಚನೆಗಾಗಿ ಕಾರೆಹಕ್ಲು (ಚಿತ್ರ - ಪರ್ಜನ್ಯ, ಮೌನವು ಮಾತಾಗಿದೆ..), ಸಚಿನ್ ಶೆಟ್ಟಿ ಕುಂಬ್ಳೆ (ಚಿತ್ರ - ಈ ಮಣ್ಣು, ದಾರಿಯೊಂದು ಹುಡುಕುತಿದೆ...), ಅತ್ಯುತ್ತಮ ಹಿನ್ನೆಲೆ ಗಾಯಕ - ಅನಿರುದ್ಧ ಶಾಸ್ತ್ರಿ (ಚಿತ್ರ - ಆಚಾರ್ಯ ಶ್ರೀ ಶಂಕರ), ಅತ್ಯುತ್ತಮ ಹಿನ್ನೆಲೆ ಗಾಯಕಿ-ಅರುಂಧತಿ ವಶಿಷ್ಠ (ಚಿತ್ರ - ದಂತ ಪುರಾಣ)ತೀಪುಗಾರರ ವಿಶೇಷ ಪ್ರಶಸ್ತಿ:
ನಟನೆಗಾಗಿ ಮರಣೋತ್ತರವಾಗಿ ಸಂಚಾರಿ ವಿಜಯ್, ವಸ್ತ್ರ ವಿನ್ಯಾಸ-ಶ್ರೀವಲ್ಲಿ (ಚಿತ್ರ - ಸಾರವಜ್ರ), ಪ್ರಸಾಧನ-ರಮೇಶ್ ಬಾಬು (ಚಿತ್ರ ತಲೆದಂಡ), ಶಬ್ದಗ್ರಹಣ- ವಿ.ಜಿ.ರಾಜನ್ (ಚಿತ್ರ - ಅಮೃತ್ ಅಪಾರ್ಟ್ಮೆಂಟ್), ವಿಶೇಷ ಪ್ರಶಸ್ತಿ (ಪ್ರಮಾಣ ಪತ್ರ)- ವಿಶೇಷ ಚೇತನನಟ ವಿಶ್ವಾಸ್ ಕೆ.ಎಸ್. (ಚಿತ್ರ - ಅರಬ್ಬಿ) ಹಾಗೂ ಅತ್ಯುತ್ತಮ ನಿರ್ಮಾಣ ನಿರ್ವಾಹಕ- ಚಂಪಕದಾಮ (ಚಿತ್ರ - ಕನ್ನಡಿಗ) ಅವರು ಭಾಜನರಾಗಿದ್ದಾರೆ.