ಗುಳೇದಗುಡ್ಡ: ಗುಳೇದಗುಡ್ಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬೈಕ್ ಸಮೇತ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವೇಶ್ವರ ನಗರದ ಆರೋಪಿ ಲಕ್ಷ್ಮಣ ಅಂಬಾಜಿ ಗಣಾಚಾರಿ ಬೈಕ್ ಕಳ್ಳತನ ಮಾಡಿದ್ದ ಆರೋಪಿ. ಈತ ಕಳೆದ 2023ರ ಅಕ್ಟೋಬರ್ 3 ರಂದು ಬಸವೇಶ್ವರ ನಗರದ ಮೆಹಬೂಬಸಾಬ್ ಮಕ್ತುಮಸಾಬ್ ಮುಲ್ಲಾ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನು ಕಳ್ಳತನ ಮಾಡಿದ್ದು, ಈ ಬಗ್ಗೆ ಮೆಹಬೂಬ್ ಸಾಬ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಗುಳೇದಗುಡ್ಡ: ಗುಳೇದಗುಡ್ಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬೈಕ್ ಸಮೇತ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸವೇಶ್ವರ ನಗರದ ಆರೋಪಿ ಲಕ್ಷ್ಮಣ ಅಂಬಾಜಿ ಗಣಾಚಾರಿ ಬೈಕ್ ಕಳ್ಳತನ ಮಾಡಿದ್ದ ಆರೋಪಿ. ಈತ ಕಳೆದ 2023ರ ಅಕ್ಟೋಬರ್ 3 ರಂದು ಬಸವೇಶ್ವರ ನಗರದ ಮೆಹಬೂಬಸಾಬ್ ಮಕ್ತುಮಸಾಬ್ ಮುಲ್ಲಾ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿಯನ್ನು ಕಳ್ಳತನ ಮಾಡಿದ್ದು, ಈ ಬಗ್ಗೆ ಮೆಹಬೂಬ್ ಸಾಬ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಹಿಂದೆ ಬಿದ್ದಿದ್ದ ಪಿಎಸ್ಐ ಲಕ್ಷಪ್ಪ ಆರಿ ತನಿಖೆ ಕೈಕೊಂಡು ಸ್ಕೂಟಿ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಬಿ.ಆರ್.ಬಂಕಾಪೂರ ಹಾಗೂ ಸಿಬ್ಬಂದಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.