ಹಾನಗಲ್ಲ: ರೈತರು ಸಾಮಾನ್ಯ ಜನರಿಗೆ ಸಲ್ಲಬೇಕಾದ ರೈತ ವಿದ್ಯಾನಿಧಿಯಂತಹ ಯೋಜನೆಗಳನ್ನು ಬಂದ ಮಾಡಿರುವುದೇ ಈಗಿನ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದ್ದು, ಬಾಳಂಬೀಡ ಏತ ನೀರಾವರಿಗೆ ಉಳಿದ ಶೇ.೧೦ರಷ್ಟು ಕೆಲಸ ಮಾಡದೇ ಯೋಜನೆಯಿಂದ ನೀರು ಹರಿಸಲು ಇವರಿಂದ ಆಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹರಿಹಾಯ್ದರು.
ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಭವಿಷ್ಯದ ಕೇಂದ್ರ ಮಂತ್ರಿಗಳು. ಜಗ ಮೆಚ್ಚಿದ ಮಗ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬೆಳಗುತ್ತಿದೆ. ಈಗ ಮತ್ತೆ ಮೋದಿ ಪ್ರಧಾನಿಯಾಗುವ ಮೂಲಕ ಇಡೀ ಜಗತ್ತಿನಲ್ಲಿ ಭಾರತ ಸದೃಢ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನಿಲ್ಲಬೇಕಾಗಿದೆ. ಕಾಂಗ್ರೆಸ್ ಅಭಿವೃದ್ಧಿ ಪರ ಅಲ್ಲ. ನನ್ನನ್ನು ತೀರ ಕನಿಷ್ಠವಾಗಿ ಕಂಡ ಕಾಂಗ್ರೆಸ್ ಹಲವು ಬಗೆಯಿಂದ ನನಗೆ ಅಗೌರವ ತೋರಿದರು. ಬಿಜೆಪಿಯಲ್ಲಿ ನನ್ನನ್ನು ಗೌರವದಿಂದ ಕಾಣುತ್ತಿದ್ದಾರೆ. ನನಗೆ ಯಾವುದೇ ಅಧಿಕಾರ ಬೇಡ. ಬಿಜೆಪಿ ಗೆಲ್ಲಬೇಕಷ್ಟೇ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ ಕಮಡೊಳ್ಳಿ ಮಾತನಾಡಿ, ಹಾನಗಲ್ಲ ತಾಲೂಕು ಬಿಜೆಪಿಯ ಭದ್ರ ಕೋಟೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡು ಮತಗಳನ್ನು ಪಡೆದು ಈ ಬಾರಿ ಬಿಜೆಪಿಗೆ ಅಭೂತಪೂರ್ವ ಗೆಲುವು ನೀಡುವುದು ಸತ್ಯ. ಮೋದಿಜಿ ದೇಶಕ್ಕೆ ಅತ್ಯಗತ್ಯ ಎಂದರು.ಮಾಜಿ ಶಾಸಕ ಶಿವರಾಜ ಸಜ್ಜನವರ, ಮುಖಂಡರಾದ ರಾಜಶೇಖರ ಕಟ್ಟೇಗೌಡರ, ಬಸವರಾಜ ಹಾದಿಮನಿ, ಮಲ್ಲಿಕಾರ್ಜುನ ಹಾವೇರಿ, ಎಸ್.ಎಂ. ಕೋತಂಬರಿ, ಸಂದೀಪ ಪಾಟೀಲ, ಮಾಲತೇಶ ಸೊಪ್ಪಿನ, ನಿಂಗಪ್ಪ ಗೊಬ್ಬೇರ, ಎಂ.ಆರ್.ಪಾಟೀಲ, ಬಿ.ಎಸ್.ಅಕ್ಕಿವಳ್ಳಿ, ಕಲ್ಯಾಣಕುಮಾರ ಶೆಟ್ಟರ ಮೊದಲಾದವರಿದ್ದರು.