ಮುಂಡರಗಿ:ಕನ್ನಡ ನಾಡು, ನುಡಿ, ನೆಲ, ಜಲಗಳ ಸಂರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಿರಂತರವಾಗಿ ಕಾರ್ಯಕ್ರಮಗಳು ಜರುಗುತ್ತಾ ಬಂದಿದ್ದು, ಕಸಾಪ ಕಾರ್ಯ ಮಹತ್ವದ್ದಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಶಂಭುಲಿಂಗ ಚಿಗರಿ ಹೇಳಿದರು. ಅವರು ಈಚೆಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಶರಣ ಸಾಹಿತ್ಯ ಪರಿಷತ್, ಚೈತನ್ಯ ಶಿಕ್ಷಣ ಸೌರಭ ಇವುಗಳ ಸಹಯೋಗದಲ್ಲಿ ನಡೆಯುತ್ತಿರುವ ಶರಣ ಚಿಂತನ ಉಪನ್ಯಾಸ ಮಾಲೆ 16 ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಸಾಪ ತಾಲೂಕು ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು 111ನೇ ಸಂಸ್ಥಾಪನಾ ದಿನ ಆಚರಿಸುತ್ತಿದ್ದೇವೆ. ಇದರ ಬೆಳವಣಿಗೆ ಪಣತೊಟ್ಟ ಸರ್ ಎಂ. ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣ ರಾಜ ಒಡೆಯರ್, ಸರ್ ಮಿರ್ಜಾ ಇಸ್ಮಾಯಿಲ್ ಅವರ ಪಾತ್ರ ಪ್ರಮುಖವಾಗಿದೆ. ರಾಜ್ಯದಲ್ಲಿ ಅಷ್ಟೆ ಅಲ್ಲದೆ ಗಡಿನಾಡಿನಲ್ಲೂ ಕನ್ನಡದ ಕಂಪನ್ನು ಬೆಳಗಿಸಿದ್ದಾರೆ ಎಂದರು. ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಬಿ. ಹಿರೇಮಠ, ಕೃಷ್ಣಮೂರ್ತಿ ಸಾವುಕಾರ, ಮಧುಮತಿ ಇಳಕಲ್, ಸಿ.ಎಸ್. ಅರಸನಾಳ, ಆರ್. ವೈ. ಪಾಟೀಲ, ವಿಶ್ವನಾಥ ಉಳ್ಳಾಗಡ್ಡಿ, ಕಾವೇರಿ ಬೋಲಾ, ಜ್ಯೋತಿ ಗಣಪ್ಪನವರ, ಮುತ್ತು ಬಳ್ಳಾರಿ, ಶಂಕರ ಕೂಕನೂರ, ಎಂ.ಐ. ಮುಲ್ಲಾ, ಅಕ್ಕಮಹಾದೇವಿ ಕೊಟ್ಟೂರ ಶೆಟ್ಟರ, ಆರ್.ಕೆ. ರಾಯನಗೌಡ, ಸಂತೋಷ ಹಿರೇಮಠ, ವೆಂಕಟೇಶ ಗುಗ್ಗರಿ, ಸಂಗಪ್ಪ ಲಿಂಬಿಕಾಯಿ, ರವಿಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎನ್.ಎನ್.ಕಲಕೇರಿ ನಿರೂಪಿಸಿದರು. ಸಿ.ಕೆ. ಗಣಪ್ಪನವರ ವಂದಿಸಿದರು.