ಮುಡುಗೋಡು ಗ್ರಾಪಂ ಸಂತೆಮೈದಾನ ವಿಚಾರ ಆರೋಪ ಸತ್ಯಕ್ಕೆ ದೂರ

KannadaprabhaNewsNetwork |  
Published : Aug 26, 2026, 01:15 AM IST
ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸುದ್ದಿಗೋಷ್ಠಿ | Kannada Prabha

ಸಾರಾಂಶ

ತರೀಕೆರೆಮುಡುಗೋಡು ಗ್ರಾಪಂ ಸಂತೆ ಮೈದಾನ ಜಾಗ ವಿಚಾರದಲ್ಲಿ ಶಾಸಕರ ಹಿಂಬಾಲಕರು ಖಾತೆ ಮಾಡಿಸಿ ಲಕ್ಷಾಂತರ ರು. ಹೊಡೆದಿದ್ದಾರೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾಡಿರುವ ಅರೋಪ ಸತ್ಯಕ್ಕೆ ದೂರವಾಗಿದೆ ಎಂದು ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಪಾರೂಕ್ ಹೇಳಿದ್ದಾರೆ.

ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾರೂಕ್ ಸ್ಪಷ್ಟನೆ । ಸೈಟ್‌ ಅನಧಿಕೃತವಾಗಿದ್ದರೆ, ಕಾನೂನು ಕ್ರಮ ಕೈಗೊಳ್ಳಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಮುಡುಗೋಡು ಗ್ರಾಪಂ ಸಂತೆ ಮೈದಾನ ಜಾಗ ವಿಚಾರದಲ್ಲಿ ಶಾಸಕರ ಹಿಂಬಾಲಕರು ಖಾತೆ ಮಾಡಿಸಿ ಲಕ್ಷಾಂತರ ರು. ಹೊಡೆದಿದ್ದಾರೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾಡಿರುವ ಅರೋಪ ಸತ್ಯಕ್ಕೆ ದೂರವಾಗಿದೆ ಎಂದು ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಪಾರೂಕ್ ಹೇಳಿದ್ದಾರೆ.

ಮಂಗಳವಾರ ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ನಿವೇಶನದಲ್ಲಿ 50-60 ವರ್ಷಗಳಿಂದ ವಾಸವಾಗಿದ್ದು 94-ಸಿ.ನಲ್ಲಿ ಹಕ್ಕು ಪತ್ರ ಪಡೆದಿದ್ದಾರೆ. ಅಕ್ರಮ ನಡೆದಿದ್ದರೆ ನಿವೇಶನ ಅನಧಿಕೃತವಾಗಿದ್ದರೆ, ಕಾನೂನು ರೀತಿ ಕ್ರಮ ಕೈಗೊಳ್ಳಬಹುದು. ಗುಟ್ಕಾ ನಿಷೇಧ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇನ್ನು ಕೇಂದ್ರವೇ ಅಡಕೆ ನಿಷೇಧ ಮಾಡಲು ಹೊರಟಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮಾಜಿ ಶಾಸಕ ಡಿ.ಎಸ್. ಸುರೇಶ್ ಮೊದಲು ಅದನ್ನು ನಿಲ್ಲಿಸಲಿ ಎಂದರು.

ಸಚಿವ ನಾಗೇಂದ್ರ ತಪ್ಪಿತಸ್ಥರು ಎಂದು ತೀರ್ಮಾನವಾದರೆ ರಾಜೀನಾಮೆ ಕೊಡುತ್ತಾರೆ. ಪಿಂಚಣಿದಾರರಿಗೆ ಈಗ ಏನೂ ಸಮಸ್ಯೆ ಇಲ್ಲ ಅದನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.

ಒಳ್ಳೆ ಬೆಳವಣಿಗೆ ಅಲ್ಲ: ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಶಾಸಕರ ಕುಟುಂಬ ದವರ ಬಗ್ಗೆ ಮಾತನಾಡಿರುವುದು ಒಳ್ಳೆಯ ಬೆಳೆವಣಿಗೆ ಅಲ್ಲ, ಎನ್.ಆರ್. ಎಲ್.ಎಂ.ಯೋಜನೆಯಲ್ಲಿ ಹಣ ಮಾಡಿ ಕೊಳ್ಳುವ ಅಗತ್ಯಯಾರಿಗೂ ಇಲ್ಲ. ಇಂತಹ ಹೇಳಿಕೆ ನಿಲ್ಲಿಸಲಿ, ಮದ್ಯ ಮಾರಾಟ, ಮಟ್ಕಾ ದಂಧೆ, ಗಾಂಜಾ, ಓ.ಸಿ ನಡೆಯುತ್ತಿದ್ದರೆ ದೂರು ಕೊಡಿ, ಇದಕ್ಕೆ ನಮ್ಮ ಬೆಂಬಲ ಇದೆ ಎಂದು ತಿಳಿಸಿದರು.

ಎರಡು ವರ್ಷದಿಂದ ಪಟ್ಟಣದ ಬಿ.ಎಚ್.ರಸ್ತೆ ಕಾಮಗಾರಿ ನಡೆಯುತ್ತಿದೆ. ಕೇಂದ್ರದ ₹4. 34 ಕೋಟಿಯಲ್ಲಿ ಬೈಪಾಸ್ ನಿಂದ ಹಳೆಯೂರು ತನಕ ನಡೆದ ರಸ್ತೆ ಕಾಮಗಾರಿ ಸ್ವಲ್ಪ ಹಾಳಾಗಿದೆ. ಇದಕ್ಕೆ ಅಧಿಕಾರಿಗಳು ಕಾರಣ, ಇದನ್ನು ಕೂಡಲೇ ಸರಿಪಡಿಸುವಂತೆ ಶಾಸಕ ಜಿ.ಎಚ್. ಶ್ರೀನಿವಾಸ್ ಸೂಚಿಸಿದ್ದಾರೆ.

ಹಳೆಯೂರಿನಿಂದ ಪಟ್ಟಣದ ಡಿವೈಎಸ್.ಪಿ.ಕಚೇರಿ ತನಕ ಶಾಸಕ ಜಿ.ಎಚ್. ಶ್ರೀನಿವಾಸ್ ಅವರ ಸತತ ಶ್ರಮದಿಂದ ಮಂಜೂರಾದ 56 ಕೋಟಿ ರು. ಗಳಲ್ಲಿ ಅಚ್ಚುಕಟ್ಟಾದ ರಸ್ತೆ ಕಾಮಗಾರಿ ನಡೆಯುತ್ತಿರುವುದನ್ನು ಎಲ್ಲರೂ ಸಂತೋಷದಿಂದ ಸ್ವಾಗತಿಸಿದ್ದಾರೆ. ಸಂಪೂರ್ಣ ರಸ್ತೆ ಹಾಳಾಗಿದೆ ಎನ್ನುವುದು ಸರಿಯಲ್ಲ. ಅಭಿವೃದ್ಧಿ ಆಗಿರುವ ಬಿ.ಎಚ್. ರಸ್ತೆಯಲ್ಲಿ 8 ಕೋಟಿ ರು.ನಲ್ಲಿ ಲೈಟಿಂಗ್ ವ್ಯವಸ್ಥೆ ಕೂಡ ನಡೆಯುತ್ತದೆ. ಆಗ ತರೀಕೆರೆ ಪಟ್ಟಣದ ರೂಪವೇ ಸುಂದರವಾಗಿ ಕಾಣುತ್ತದೆ ಎಂದು ಹೇಳಿದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಕುಟುಂಬದವರು ಬಂದರೆ ಅದನ್ನು ಮಾಜಿ ಶಾಸಕರು ಕೇಳುವ ಪ್ರಶ್ನೆ ಅಲ್ಲ. ಅದು ನಮ್ಮ ಪಕ್ಷದವರಿಗೆ ಸಂಬಂಧಿಸಿದ್ದು ನೀವೇಕೆ ಕೇಳುತ್ತೀರಿ, ಇದು ನಿಮಗೆ ಶೋಭೆ ತರುವಂತದ್ದಲ್ಲ. ಇದನ್ನು ನಿಲ್ಲಿಸಬೇಕು, ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಸಕ್ಕರೆ ದರ ಹೆಚ್ಚಾಗಿದೆ ಮಾಜಿ ಶಾಸಕರು ಅದರ ಕಡೆಗೆ ಗಮನ ನೀಡಲಿ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ಬಿ.ಎಚ್.ರಸ್ತೆ ಅಭಿವೃದ್ಧಿ ಕಾಮಗಾರಿ ಅತ್ಯಂತ ಗುಣಮಟ್ಟದಿಂದ ಕೂಡಿದೆ. ಇಲ್ಲಿಯವರೆಗೆ ಯಾರೂ ಮಾಡದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ನಿರ್ವಹಿಸಿದ್ದಾರೆ. ಎಲ್ಲಾ ಗ್ಯಾರಂಟಿಗಳು ಐದು ವರ್ಷ ಖಂಡಿತ ಮುಂದುವರಿಯುತ್ತದೆ. ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ಟ್ಯಾಂಡ್ , ಪುರಸಭೆ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ, ಬಿ.ಎಚ್.ರಸ್ತೆಗೆ ₹8 ಕೋಟಿ ಗಳಲ್ಲಿ ವಿದ್ಯುತ್ ದೀಪಗಳ ವ್ವವಸ್ಥೆ ಅಗುತ್ತದೆ. ತರೀಕೆರೆ ರೂಪವೇ ಬದಲಾವಣೆ ಆಗುತ್ತದೆ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ, ಷರೀಪ್, ತಾ.ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಹೇಮಲತಾ ರೇವಣ್ಣ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪರ್ವಿನ್ ತಾಜ್, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ, ಕಾಂಗ್ರೆಸ್ ಸಮಿತಿ ಕಿಸಾನ್ ಸೆಲ್ ಅಧ್ಯಕ್ಷ ಗಿರೀಶ್, ಕಾಂಗ್ರೆಸ್ ಸಮಿತಿ ಎಸ್.ಸಿ.ಸೆಲ್ ಅಧ್ಯಕ್ಷ ಬಿ.ಜಿ.ಗೌರೀಶ್ ಮತ್ತಿತರರು ಭಾಗವಹಿಸಿದ್ದರು.

-

25ಕೆಟಿಅರ್.ಕೆ.1ಃ ಹೆಚ್.ಯು. ಫಾರೂಕ್

-----------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ವರ್ಷದಿಂದ ಬಿಲ್‌ ಆಗಿಲ್ಲ: ಅಸಮಧಾನ
ಸಂಘಗಳ ಆರ್ಥಿಕ ಪ್ರಗತಿಗೆ ಸದಸ್ಯರು ಸಹಕರಿಸಿ