ಹುಬ್ಬಳ್ಳಿ:
ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲ್ ಘಾಟ ಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವರಾಜ ಮಡಿವಾಳರ ಅಪಘಾತದ ಘಟನೆ ವಿವರಿಸಿದ ಪರಿ. ಅಪಘಾತದ ಕ್ಷಣಗಳನ್ನು ನೆನಪಿಸಿಕೊಂಡ ಅವರು, ತಮ್ಮ ಸ್ನೇಹಿತರನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರಾದರು.
ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ನಾವೆಲ್ಲರೂ ಧರ್ಮಸ್ಥಳ, ಕೊಡಚಾದ್ರಿ, ಚಿಕ್ಕಮಗಳೂರ ಸೇರಿದಂತೆ ಪ್ರವಾಸ ಸ್ಥಳಗಳ ವೀಕ್ಷಣೆಗೆ ಮೂರು ದಿನ ಯೋಜನೆ ರೂಪಿಸಿ ಹೊರಟಿದ್ದೇವು. ಅಷ್ಟರಲ್ಲಿ ಇಷ್ಟೆಲ್ಲ ಆಯ್ತು ಎನ್ನುವಾಗ ಆತನಲ್ಲಿ ದುಃಖವು ಮಡುಗಟ್ಟಿತ್ತು.ಇನ್ನು ಕೆಎಂಸಿಆರ್ಐನಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಸಚಿನ ಹೆಬ್ಬಳ್ಳಿ ತಾಯಿ ಈರಮ್ಮ ದುಃಖದ ಕಟ್ಟೆ ಒಡೆದಿತ್ತು. ಸ್ನೇಹಿತರೆಲ್ಲ ಸೇರಿ ಪ್ರವಾಸಕ್ಕೆ ಹೋಗಿ ಬರ್ತೇವೆ ಅಂತ ಹೇಳಿ ಹೋಗಿದ್ದ. ರಾತ್ರಿ 11 ಗಂಟೆಗೆ ಮನೆಯಿಂದ ಹೋದಾವ ಬೆಳಗ್ಗೆ ಹೆಣಾ ಆಗಿ ಬಂದಾನ. ದುಬೈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಲ್ಲಿಗೆ ಬಂದು 20 ದಿನ ಆಗಿತ್ತು. ಅಲ್ಲಿಯೇ ಉಳಿದಿದ್ದರ ಈ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಇದ್ದೊಬ್ಬ ಮಗ ನಮ್ಮನ್ ಬಿಟ್ಟು ಹೋಗ್ಯಾನ್ರಿ.. ಎಂದು ಕಣ್ಣೀರು ಸುರಿಸಿದರು.
ಇಬ್ಬರ ಸಾವು
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನಿಬ್ಬರು ಗಾಯಾಳುಗಳಲ್ಲಿ ಶಿವರಾಜ ಮಡಿವಾಳ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆರೋಗ್ಯವಾಗಿದ್ದಾರೆ. ಚೆನ್ನಬಸಪ್ಪ ಸಂಪಗಾಂವ ಅವರ ದೇಹದಲ್ಲಿನ ಮೂಳೆಗಳಿಗೆ ಪೆಟ್ಟಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.