ಗಮನ ಸೆಳೆದ ಬಾಲಕರ ಪಥಸಂಚಲನ

KannadaprabhaNewsNetwork |  
Published : Oct 13, 2025, 02:03 AM IST
ಗಮನಸೆಳೆದ ಬಾಲಕರ ಪಥಸಂಚಲನ  | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ವಿದ್ಯಾಗಿರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಘೋಷ ಸಹಿತ ಬಾಲಕರ ಪಥಸಂಚಲನ ಗಮನ ಸೆಳೆಯಿತು. ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಿಂದ ಸಂಜೆ 4ಕ್ಕೆ ಪಥಸಂಚಲನ ಆರಂಭಗೊಂಡಿತು. ಭಾರೀ ಸಂಖ್ಯೆಯಲ್ಲಿ ಬಾಲಕರು ಗಣವೇಷಧಾರಿಗಳಾಗಿ ದಂಡ ಹಿಡಿದು ಹೆಜ್ಜೆ ಹಾಕಿ ಗಮನ ಸೆಳೆದರು. ಘೋಷ ವಾದನಕ್ಕೆ ತಕ್ಕಂತೆ ಶಿಸ್ತುಬದ್ಧ ಹೆಜ್ಜೆ ನೋಡುಗರ ಕಣ್ಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ವಿದ್ಯಾಗಿರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಘೋಷ ಸಹಿತ ಬಾಲಕರ ಪಥಸಂಚಲನ ಗಮನ ಸೆಳೆಯಿತು.

ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಿಂದ ಸಂಜೆ 4ಕ್ಕೆ ಪಥಸಂಚಲನ ಆರಂಭಗೊಂಡಿತು. ಭಾರೀ ಸಂಖ್ಯೆಯಲ್ಲಿ ಬಾಲಕರು ಗಣವೇಷಧಾರಿಗಳಾಗಿ ದಂಡ ಹಿಡಿದು ಹೆಜ್ಜೆ ಹಾಕಿ ಗಮನ ಸೆಳೆದರು. ಘೋಷ ವಾದನಕ್ಕೆ ತಕ್ಕಂತೆ ಶಿಸ್ತುಬದ್ಧ ಹೆಜ್ಜೆ ನೋಡುಗರ ಕಣ್ಮನ ಸೆಳೆಯಿತು.

ವಿದ್ಯಾಗಿರಿ ಕಾಲೇಜು ವೃತ್ತದಿಂದ ನೇತಾಜಿ ಹಾಸ್ಟೇಲ್ ರಸ್ತೆಯಲ್ಲಿ ಸಾಗಿ ಹಲವು ಒಳರಸ್ತೆಗಳಲ್ಲಿ ಪಥಸಂಚಲನ ಸಾಗಿತು. ನಂತರ 22ನೇ ಕ್ರಾಸ್ ಮುಖಾಂತರ ವಿದ್ಯಾಗಿರಿ ಕಾಲೇಜು ವೃತ್ತಕ್ಕೆ ಮರಳಿ. ಗೌರಿಶಂಕರ ಮಂಗಲ ಕಾರ್ಯಾಲಯ ಆವರಣದಲ್ಲಿ ಸಂಪನ್ನಗೊಂಡಿತು. ನಂತರ ಬೌದ್ಧಿಕ ಜರುಗಿತು.

ಫಥಸಂಚಲನ ಸಾಗುವ ಮಾರ್ಗದುದ್ಧಕ್ಕೂ ಮಹಿಳೆಯರು ಚಿತ್ತಾಕರ್ಷ ರಂಗೋಲಿ ಬಿಡಿ ಪಥಸಂಚಲನಕ್ಕೆ ಸ್ವಾಗತಿಸಿದರು. ಭಗ್ವಾಧ್ವಜ ಸಹಿತ ಗಣವೇಷಧಾರಿಗಳು ಸಾಗಿ ಬಂದಾಗ ಪುಷ್ಪವೃಷ್ಟಿ ಮೂಲಕ ಸ್ವಾಗತಿಸಲಾಯಿತು. ಸಂಘದ ಶತಮಾನೋತ್ಸವ ಪ್ರಯುಕ್ತ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಮಕ್ಕಳು ಒನಕೆ ಓಬ್ಬವ್ವ, ನೇತಾಜಿ ಸುಭಾಶ್ಚಂದ್ರ ಬೋಸ್, ಛತ್ರಪತಿ ಶಿವಾಜಿ ಮಹಾರಾಜ, ಕಿತ್ತೂರ ಚೆನ್ನಮ್ಮ, ಸೈನಿಕರ ವೇಷಭೂಷಣದಲ್ಲಿ ಮಿಂಚಿದರು. ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳ್ಳಾರಿಯಿಂದ ಗುಂತಕಲ್‌ಗೆ ನಿತ್ಯ ನಾಲ್ಕು ರೈಲು ಓಡಿಸಿ
ದೇಗುಲದ ಹುಂಡಿ ಹಣ ಕಳವು ಪ್ರಕರಣ: ಇಬ್ಬರ ಸೆರೆ