ಸಹಕಾರ ಸಂಘವು ರಾಜ್ಯದಲ್ಲಿಯೇ ಎರಡನೇ ಗಣಕೀಕೃತ ಸಂಘ ಎಂಬ ಹೆಗ್ಗಳಿಕೆ: ಎಚ್ .ಟಿ.ಮಂಜು

KannadaprabhaNewsNetwork |  
Published : Aug 18, 2025, 12:00 AM IST
17ಕೆಎಂಎನ್ ಡಿ11 | Kannada Prabha

ಸಾರಾಂಶ

ಸರ್ಕಾರ ನೀಡಿದ ಸಾಲ ನೈಜ ಫಲಾನುಭವಿಗೆ ತಲುಪಬೇಕೆಂಬ ಉದ್ದೇಶದಿಂದ ಕಳೆದ 10-15 ವರ್ಷಗಳಿಂದಲೂ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿಕೊಂಡು ಬರಲಾಗಿದೆ. ನಾನೂ ಸಹ ಅಧ್ಯಕ್ಷನಾಗಿ ಸಂಘವನ್ನು ಅಭಿವೃದ್ಧಿಯತ್ತ ನಡೆಸಿಕೊಂಡು ಹೋಗಿದ್ದೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸ್ವಗ್ರಾಮ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರಾಜ್ಯದಲ್ಲಿಯೇ ಎರಡನೇ ಗಣಕೀಕೃತ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ಗ್ರಾಮದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಹಿರಿಯರು ಕಟ್ಟಿ ಬೆಳೆಸಿದ ಸಹಕಾರ ಸಂಘವನ್ನು ಇನ್ನೂ ಹೆಚ್ಚಿನ ಪ್ರಗತಿಯಡೆಗೆ ಕೊಂಡೋಯ್ಯಬೇಕಾದುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ ಎಂದರು.

ಸರ್ಕಾರ ನೀಡಿದ ಸಾಲ ನೈಜ ಫಲಾನುಭವಿಗೆ ತಲುಪಬೇಕೆಂಬ ಉದ್ದೇಶದಿಂದ ಕಳೆದ 10-15 ವರ್ಷಗಳಿಂದಲೂ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿಕೊಂಡು ಬರಲಾಗಿದೆ. ನಾನೂ ಸಹ ಅಧ್ಯಕ್ಷನಾಗಿ ಸಂಘವನ್ನು ಅಭಿವೃದ್ಧಿಯತ್ತ ನಡೆಸಿಕೊಂಡು ಹೋಗಿದ್ದೇನೆ. ಸ್ವಂತ ನಿವೇಶನ ಸ್ವಂತ ಕಟ್ಟಡ, ಬ್ಯಾಂಕ್, ರಸಗೊಬ್ಬರ ಮಾರಾಟ ಕೇಂದ್ರ ಸೇರಿದಂತೆ ವಿವಿಧ ಉದ್ದೇಶ ಇಟ್ಟುಕೊಂಡು ಸಂಘದ ಏಳಿಗೆಗೆ ಕಳೆದ 3-4 ಆಡಳಿತ ಮಂಡಳಿಯ ಸದಸ್ಯರು ಶ್ರಮಿಸಿದ್ದಾರೆ ಎಂದರು.

ಸಂಘವು ತಾಲೂಕಿನಲ್ಲಿ ಮಾದರಿಯಾಗಿ ಬೆಳೆದಿದೆ. 73 ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರ ಸಬಲೀಕರಣದ ಕೆಲಸ ಮಾಡುತ್ತಿದೆ. ಏಳೆಂಟು ಕೋಟಿ ಮುಂಗಡ ನೀಡಿ 1 ಕೋಟಿಗೂ ಅಧಿಕ ಲಾಭದಲ್ಲಿ ನಡೆಯುತ್ತಿದೆ. ಅಲ್ಲದೇ, ರಸಗೊಬ್ಬರ ಕಂಪನಿಗಳಿಂದ ನೇರವಾಗಿ ಗೊಬ್ಬರ ಖರೀದಿಸುವ 3-4 ಸೊಸೈಟಿಗಳಲ್ಲಿ ನಮ್ಮದೂ ಒಂದು. ಸದಸ್ಯರು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿದರೆ ಯಾವುದೇ ಸಹಕಾರಿ ಸಂಘಗಳು ಲಾಭದತ್ತ ಸಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಈರೇಗೌಡ, ಉಪಾದ್ಯಕ್ಷೆ ಭಾಗ್ಯಮ್ಮ, ನಿರ್ದೇಶಕರಾದ ಎಚ್.ಟಿ.ಲೋಕೇಶ್, ಜೆ.ಹರೀಶ್, ಪ್ರೇಮ್‌ಕುಮಾರ್, ಗುರುಪ್ರಸಾದ್, ಚಂದ್ರಶೇಖರ್, ರಮೇಶ್, ದೇವಮ್ಮ, ತಿಮ್ಮಯ್ಯ, ಮಂಜುಳ, ಆದಿಲ್‌ಪಾಷ, ಸಿಡಿಒ ಭರತ್, ಕಾರ್ಯನಿರ್ವಹಣಾಧಿಕಾರಿ ಆದರ್ಶ, ಸಿಬ್ಬಂದಿಗಳಾದ ಆಶಾ, ಅರುಣ್‌ಕುಮಾರ್, ಅನುರತಿ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌