ಶ್ರೀರಾಮ ಕಟೌಟ್ ಎದುರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

KannadaprabhaNewsNetwork |  
Published : Jan 23, 2024, 01:48 AM IST
22ಕೆಡಿವಿಜಿ1, 2, 3-ದಾವಣಗೆರೆ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ರಾಮ ಮಂದಿರ ಉದ್ಘಾಟನೆ ದಿನವೇ ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ಕೆಬಿ ಬಡಾವಣೆಯ ರೋಹಿತ್‌, ಅರ್ಪಿತಾ ಜೋಡಿ. ಉಭಯ ಕುಟುಂಬಗಳ ಜೊತೆಗೆ ಶ್ರೀರಾಮನಿಗೆ ನಮಿಸುತ್ತಿರುವುದು. | Kannada Prabha

ಸಾರಾಂಶ

ಕೆಬಿ ಬಡಾವಣೆಯ ನಿವಾಸಿ ರೋಹಿತ್ ಹಾಗೂ ಅರ್ಪಿತಾ ತಮ್ಮ ಮದುವೆ ಮಂಟಪದಲ್ಲೇ ಶ್ರೀ ವಿಘ್ನೇಶ್ವರನ ಜೊತೆಗೆ ಅಯೋಧ್ಯೆ ಶ್ರೀರಾಮ ಮಂದಿರ ಹಾಗೂ ಪ್ರಭು ಶ್ರೀರಾಮಚಂದ್ರನ ಕಟೌಟ್ ಎದುರು ದಾಂಪತ್ಯ ಜೀವನಕ್ಕೆ ಅಡಿ ಇಡುವ ಮೂಲಕ ಮಂದಿರ ಉದ್ಘಾಟನೆಯಾಗುತ್ತಿದ್ದಂತೆ ಜೈ ಶ್ರೀರಾಮ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ, ಪುಷ್ಪಾರ್ಚನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠೆ ಹಾಗೂ ಶ್ರೀರಾಮ ಮಂದಿರ ಉದ್ಘಾಟನೆ ದಿನದಂದೇ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಮನೆಯಲ್ಲಿ ತಮ್ಮ ಕುಟುಂಬಗಳ ಮದುವೆ ಸಂಭ್ರಮದ ಜೊತೆಗೆ ಮಂದಿರ ಉದ್ಘಾಟನೆ ಸಂಭ್ರಮದಲ್ಲಿ ಇಡೀ ಕಲ್ಯಾಣ ಮಂಟಪದಲ್ಲಿ ಸೇರಿದ್ದ ಬಂಧು-ಬಳಗ, ಸ್ನೇಹಿತರು, ಹಿತೈಷಿಗಳು ಭಾವುಕರಾದ ಘಟನೆ ನಗರದಲ್ಲಿ ಸೋಮವಾರ ನಡೆಯಿತು.

ನಗರದ ಬಾಪೂಜಿ ಸಮುದಾಯ ಭ‍ವನದಲ್ಲಿ ಸೋಮವಾರ ಇಲ್ಲಿನ ಕೆಬಿ ಬಡಾವಣೆಯ ನಿವಾಸಿ ರೋಹಿತ್ ಹಾಗೂ ಅರ್ಪಿತಾ ತಮ್ಮ ಮದುವೆ ಮಂಟಪದಲ್ಲೇ ಶ್ರೀ ವಿಘ್ನೇಶ್ವರನ ಜೊತೆಗೆ ಅಯೋಧ್ಯೆ ಶ್ರೀರಾಮ ಮಂದಿರ ಹಾಗೂ ಪ್ರಭು ಶ್ರೀರಾಮಚಂದ್ರನ ಕಟೌಟ್ ಎದುರು ದಾಂಪತ್ಯ ಜೀವನಕ್ಕೆ ಅಡಿ ಇಡುವ ಮೂಲಕ ಮಂದಿರ ಉದ್ಘಾಟನೆಯಾಗುತ್ತಿದ್ದಂತೆ ಜೈ ಶ್ರೀರಾಮ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿ, ಪುಷ್ಪಾರ್ಚನೆ ಸಲ್ಲಿಸಿದರು.

ಮಂದಿರ ಉದ್ಘಾಟನೆ, ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನವೇ ತಮ್ಮ ಮದುವೆಯಾಗಿದ್ದಕ್ಕೆ ಸಂಭ್ರಮದಲ್ಲಿದ್ದ ತೇಲುತ್ತಿದ್ದ ರೋಹಿತ್‌, ಅರ್ಪಿತಾ ಜೋಡಿಗೆ ಶುಭ ಮುಹೂರ್ತದಲ್ಲಿ ತಾಳಿ ಕಟ್ಟಿ, ಶ್ರೀ ವಿಘ್ನೇಶ್ವರ, ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ಪಡೆದರು.

ಪೂರ್ವಜನ್ಮದ ಪುಣ್ಯ:

ಈ ವೇಳೆ ಮಾತನಾಡಿದ ರೋಹಿತ್‌, ಅರ್ಪಿತಾ ಜೋಡಿ, ಪ್ರಭು ಶ್ರೀರಾಮ ಮಂದಿರದ ದಿನವೇ ನಮ್ಮ ಮದುವೆಯಾಗಿದ್ದು ಪೂರ್ವಜನ್ಮದ ಪುಣ್ಯ. ಸೌಭಾಗ್ಯ ಇದಾಗಿದೆ. ಇಡೀ ಮದುವೆ ಮನೆಯಲ್ಲಿ ಸುಮಾರು ಹೊತ್ತು ಜೈ ಶ್ರೀರಾಮ ಜೈ ಶ್ರೀರಾಮ್‌ ಘೋಷಣೆಗಳು ಕಲ್ಯಾಣ ಮಂಟಪದಲ್ಲಿ ಮೊಳಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಕ್ಕೆ ನಿಧಿ ನೀಡಿದ್ದ ಲಕ್ಕುಂಡಿ ಪ್ರಜ್ವಲ್‌ಗೆ ಸರ್ಕಾರದಿಂದ ಸಿಕ್ತು ಬಂಪರ್ ಗಿಫ್ಟ್
ಕಾಂಗ್ರೆಸ್‌ನಿಂದ ಗೆದ್ದಿದ್ದ ಸುಬ್ಬಾರೆಡ್ಡಿ ಶಾಸಕತ್ವಕ್ಕೆ ‘ಸುಪ್ರೀಂ’ ರಕ್ಷಣೆ