ಹಿರೇಕೆರೂರು: ಯಾವುದೇ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಸಿಬ್ಬಂದಿ, ನಿರ್ದೇಶಕರು ಮತ್ತು ಸದಸ್ಯರ ಸಹಾಯ, ಸಹಕಾರ, ಕರ್ತವ್ಯ ನಿಷ್ಠೆ ಪ್ರಾಮಾಣಿಕತನ ಅತಿ ಮುಖ್ಯವಾಗಿದೆ ಎಂದು ಪಟ್ಟಣದ ದಿ.ಅರ್ಬನ್ ಕೋ, ಆಫ್ ಕ್ರೆಡಿಟ್ ಸೊಸೈಟಿ (ಬ್ಯಾಂಕಿನ) ಅಧ್ಯಕ್ಷ ಸಿದ್ಧಲಿಂಗೇಶ ಶೆಟ್ಟರ ಹೇಳಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ನಾಗರಾಜ ದುರ್ಗದ ಮಾತನಾಡಿ, ನಮ್ಮ ಬ್ಯಾಂಕು 2025-26ನೇ ಸಾಲಿನಲ್ಲಿ 62.67 ಲಕ್ಷ ರು. ನಿವ್ವಳ ಲಾಭಾಂಶ ಹೊಂದಿದ್ದು, 2026-27ನೇ ಸಾಲಿನಲ್ಲಿ ಸಾಲ ನೀಡುವುದು, ಡಿಪಾಜಿಟ್ ಸೇರಿದಂತೆ ಇನ್ನಿತರ ಮೂಲಗಳಿಂದ 85.31 ಲಕ್ಷ ರು. ಆದಾಯ ಬರುವ ನಿರೀಕ್ಷೆಯಿದೆ. ಇನ್ನು ತೆರಿಗೆ, ಠೇವಣಿದರರಿಗೆ ಬಡ್ಡಿ ವಿತರಣೆ, ನೌಕರದಾರರಿಗೆ ಸಂಬಳ ಸೇರಿದಂತೆ ವಿವಿಧ ಕಾರ್ಯಗಳಿಗೆ 25.62 ಲಕ್ಷ ರು. ಖರ್ಚಿಗಾಗಿ ಮೀಸರಿಲಿರಿಸಲಾಗಿದೆ ಎಂದರು.
ಇದೆ ವೇಳೆ ಬ್ಯಾಂಕಿನಲ್ಲಿ ಹಿರಿಯ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಂ.ಎಸ್. ಕೆರೂಡಿ ಹಾಗೂ ಉತ್ತಮ ವಹಿವಾಟು ನಡೆಸಿದ ಗ್ರಾಹಕರಿಗೆ, ಪತ್ರಕರ್ತರನ್ನು ಸನ್ಮಾನಿಸಲಾಯಿತು.ಬ್ಯಾಂಕಿನ ನಿರ್ದೇಶಕರಾದ ಬಸವರಾಜಪ್ಪ ಹಂಪಾಳಿ, ಪರಮೇಶಪ್ಪ ಹಳಕಟ್ಟಿ, ಪ್ರಭುಲಿಂಗಪ್ಪ ಹಂಚಿನ, ರಾಜಶೇಖರ ಹಾದ್ರಿಹಳ್ಳಿ, ಪ್ರಕಾಶ ಹರಿಹರ, ಸುಮಿತ್ರಾ ಅಬಲೂರ, ಪ್ರತಿಭಾ ಕೋರಿ, ನಾಗಪ್ಪ ಲಾಪೋಜಿ, ಶಿವಾನಂದ ಖಾಂಡ್ಕೆ ಹಾಗೂ ಸದಸ್ಯರು, ಸಿಬ್ಬಂದಿಯವರು ಇದ್ದರು.