ಕನ್ನಡಪ್ರಭ ವಾರ್ತೆ ಬ್ಯಾಡಗಿ
ಪಟ್ಟಣದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಿಂದುಳಿದ ಮತ್ತು ದಲಿತ ವರ್ಗಗಳ ಮುಕ್ತಿಧಾಮ ಅಭಿವೃದ್ಧಿ ಸಮಿತಿ ಉದ್ಘಾಟನೆ ಹಾಗೂ ಸಮಿತಿ ನೂತನ ಪದಾಧಿಕಾರಿಗಳ ಮತ್ತು ಸದಸ್ಯರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಬಾರಿ ಶಾಸಕನಾಗಿದ್ದಾಗ 40 ಉಪಜಾತಿಗಳಿಗೆ ಇರುವಂತಹ ಏಕೈಕ ಮುಕ್ತಿಧಾಮ ಅಭಿವೃದ್ಧಿಪಡಿಸುವ ವಿಫಲ ಪ್ರಯತ್ನಗಳು ನಡೆದಿದ್ದವು. ಇದೀಗ ಜಾಗೃತಿಗೊಂಡು ಎಲ್ಲರೂ ಸೇರಿ ಸಮಿತಿ ರಚಿಸಿಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದರು.ನೂತನ ಸಮಿತಿಯು ಪಟ್ಟಣದಲ್ಲಿ ಹೊಸ ಮುಕ್ತಿಧಾಮ ನಿರ್ಮಾಣಕ್ಕೆ 10 ಎಕರೆ ಸರ್ಕಾರಿ ಜಮೀನು ಮಂಜೂರು ಹಾಗೂ ಮೊದಲಿದ್ದ ಮುಕ್ತಿಧಾಮದ ಅಭಿವೃದ್ಧಿಗೆ ₹50 ಲಕ್ಷ ಮಂಜೂರು ಮಾಡಲು ವಿನಂತಿಸಿದ್ದು ಅನುದಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು.
ಚಿಕ್ಕಪ್ಪ ಹಾದಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಕಲಾವತಿ ಬಡಿಗೇರ, ಫಕ್ಕೀರಮ್ಮ ಛಲವಾದಿ, ಸುಭಾಸ ಮಾಳಗಿ, ತಹಶೀಲ್ಧಾರ ರವಿ ಕೊರವರ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಮುಖಂಡರಾದ ಎಸ್.ಎನ್. ಯಮನಕ್ಕನವರ, ಹೊನ್ನೂರಪ್ಪ ಕಾಡಸಾಲಿ ಸುರೇಶ ಅಸಾದಿ ಉಪಸ್ಥಿತರಿದ್ದರು. ಶಂಕರ ಕುಸಗೂರ ನಿರೂಪಿಸಿ, ವಿಷ್ಣುಕಾಂತ ಬೆನ್ನೂರ ವಂದಿಸಿದರು.ಮಹಾಮಾತೆಗೆ ಸನ್ಮಾನ:
ಅನಾಥ ಹಾಗೂ ಬಡಕುಟುಂಬದ ಸುಮಾರು 5 ಸಾವಿರ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ ಮುಕ್ತಿಧಾಮದ ಮಹಾಮಾತೆ ಎನಿಸಿಕೊಂಡಿರುವ ಆ್ಯಂಬುಲೆನ್ಸ್ ಡ್ರೈವರ್ ರಾಮನಗರದ ಆಶಾ ವೆಂಕಟಸ್ವಾಮಿ ಅವರನ್ನು ಇದೇ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.