ಡಿಜಿಟಲ್‌ ಸ್ಟಾರ್ಟರ್‌ ರಿಪೇರಿಯಾದ್ರೂ ನೀರು ಬಂದಿಲ್ಲ

KannadaprabhaNewsNetwork |  
Published : Mar 21, 2024, 01:03 AM IST
ಡಿಜಿಟಲ್‌ ಸ್ಟಾರ್ಟರ್‌ ರಿಪೇರಿ…..ಗುಂಡ್ಲುಪೇಟೆಗೆ ಕಬಿನಿ ನೀರು ಬಂದು ತಿಂಗಳಾಯ್ತು! | Kannada Prabha

ಸಾರಾಂಶ

ಡಿಜಿಟಲ್‌ ಸ್ಟಾರ್ಟರ್‌ ರಿಪೇರಿಗೆ ಬಂದು ತಿಂಗಳಿಂದಳಾಗುತ್ತಿದ್ದರೂ ಗುಂಡ್ಲುಪೇಟೆಗೆ ಕಬಿನಿ ನೀರು ಬಂದಿಲ್ಲ. ಡಿಜಿಟಲ್‌ ಸ್ಟಾರ್ಟರ್‌ ರಿಪೇರಿಯಾಗಿ ಸರಿಯಾಯ್ತು ಎನ್ನುವ ವೇಳೆಗೆ ಬೇಗೂರಿನ ಜಲ ಸಂಗ್ರಹಾಲಯದ ಸ್ಟಾರ್ಟರ್‌ ಕೆಟ್ಟ ಕಾರಣ ನೀರು ಮೇಲೆತ್ತಲಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಡಿಜಿಟಲ್‌ ಸ್ಟಾರ್ಟರ್‌ ರಿಪೇರಿಗೆ ಬಂದು ತಿಂಗಳಿಂದಳಾಗುತ್ತಿದ್ದರೂ ಗುಂಡ್ಲುಪೇಟೆಗೆ ಕಬಿನಿ ನೀರು ಬಂದಿಲ್ಲ. ಡಿಜಿಟಲ್‌ ಸ್ಟಾರ್ಟರ್‌ ರಿಪೇರಿಯಾಗಿ ಸರಿಯಾಯ್ತು ಎನ್ನುವ ವೇಳೆಗೆ ಬೇಗೂರಿನ ಜಲ ಸಂಗ್ರಹಾಲಯದ ಸ್ಟಾರ್ಟರ್‌ ಕೆಟ್ಟ ಕಾರಣ ನೀರು ಮೇಲೆತ್ತಲಾಗುತ್ತಿಲ್ಲ.ಡಿಜಿಟಲ್‌ ಸ್ಟಾರ್ಟರ್‌ ಕೆಟ್ಟು ತಿಂಗಳಿನಿಂದ ಗುಂಡ್ಲುಪೇಟೆ ಪಟ್ಟಣದ ಜನತೆಗೆ ಕಬಿನಿ ನೀರಿಲ್ಲ. ಜೊತೆಗೆ ಕಬಿನಿ ನೀರಿನ ಸಂಪರ್ಕ ಇರುವ ಹಳ್ಳಿಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ಪುರಸಭೆಗೆ ನಾಗರೀಕರು ಶಾಪ ಹಾಕುತ್ತಿದ್ದಾರೆ.ಯಾವುದೇ ಪ್ರತಿಭಟನೆ ಇಲ್ಲ:

ಪುರಸಭೆಯ ಆಡಳಿತ, ವಿಪಕ್ಷ ಸದಸ್ಯರು ಕುಡಿವ ನೀರಿಲ್ಲದೆ ಜನತೆ ಪರದಾಡುತ್ತಿದ್ದಾರೆ ಎಂದು ಕನಿಷ್ಟ ಪುರಸಭೆ ವಿರುದ್ಧ ಸಾಂಕೇತಿಕ ಪ್ರತಿಭಟನೆಯನ್ನು ಮಾಡಲಿಲ್ಲ. ಪಟ್ಟಣದ ಜನತೆ ಪುರಸಭೆ ಸದಸ್ಯರ ವಿರುದ್ಧವೂ ನಾಗರೀಕರೂ ಕೂಡ ಪ್ರತಿಭಟಿಸಲಿಲ್ಲ.ಪುರಸಭೆ ಮುಖ್ಯಾಧಿಕಾರಿ ಹಾಗು ಡಿಜಿಟಲ್‌ ಸ್ಟಾರ್ಟರ್‌ ದುರಸ್ಥಿ ಹಾಗೂ ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರರ ಬಾಕಿ ಹಣ ನೀಡದ ಬಗ್ಗೆ ಮುಸುಕಿನ ಗುದ್ದಾಟ ಬಯಲಿಗೆ ಬಂದಿತ್ತು. ಗುತ್ತಿಗೆದಾರ ಹಾಗೂ ಪುರಸಭೆ ಮುಖ್ಯಾಧಿಕಾರಿ ಹಳೆ ಬಿಲ್‌ ಪಾವತಿ ವಿಚಾರದಲ್ಲಿ ಮುನಿಸಿತ್ತು ಆಗ ಹಳೆಯ ಬಾಕಿ ಕೊಟ್ಟರೆ ಕೆಟ್ಟಿರುವ ಡಿಜಿಟಲ್‌ ಸ್ಟಾರ್ಟರ್‌ ರಿಪೇರಿ ಒಂದೇ ದಿನದಲ್ಲಿ ಮಾಡಿಸುವೆ ಎಂದು ಗುತ್ತಿಗೆದಾರ ಭರವಸೆ ನೀಡಿದ ಬಳಿಕ ಒಂದೇ ದಿನದಲ್ಲೂ ಡಿಜಿಟಲ್‌ ಸ್ಟಾರ್ಟರ್‌ ರಿಪೇರಿಯೂ ಆಗಿದೆ.

ಈಗ ಡಿಜಿಟಲ್‌ ಸ್ಟಾರ್ಟರ್‌ ರಿಪೇರಿಯಾಗಿ ಕೆಲಸ ನಿರ್ವಹಿಸುತ್ತಿವೆ ಆದರೀಗ ಸಿಂಧುವಳ್ಳಿ ಹಾಗೂ ದೇಬೂರಿನ ಸ್ಟಾರ್ಟರ್‌ ದುರಸ್ಥಿಗೊಂಡು ನೀರೆತ್ತಲು ಶುರು ಮಾಡಿ ಬುಧವಾರ ಮಧ್ಯಾಹ್ನ ಬೇಗೂರಿನ ಸಂಪಿನ ತನಕ ಕಬಿನಿ ನೀರು ಬಂದಿದೆ.

ಬೇಗೂರಿನ ಡಿಜಿಟಲ್‌ ಸ್ಟಾರ್ಟರ್‌ ಈಗ ಕೆಟ್ಟಿರುವ ಕಾರಣ ಗುಂಡ್ಲುಪೇಟೆಗೆ ನೀರು ತಲುಪಿಲ್ಲ. ಸ್ಟಾರ್ಟರ್‌ ರಿಪೇರಿ ಮಾಡಲಾಗುತ್ತಿದ್ದು ಗುಂಡ್ಲುಪೇಟೆಗೆ ಬುಧವಾರ ಸಂಜೆಯ ತನಕ ನೀರು ಬಂದಿರಲಿಲ್ಲ. ಗುಂಡ್ಲುಪೇಟೆಯ ಜನ ಕಬಿನಿ ನೀರಿಗಾಗಿ ಶಬರಿಯಂತೆ ಕಳೆದೊಂದು ತಿಂಗಳಿನಿಂದ ಕಾಯುತ್ತಿದ್ದಾರೆ.ಪುರಸಭೆಗೆ ಎಚ್ಚರಿಸಿದ್ದ ಕನ್ನಡಪ್ರಭ!: ಕಳೆದ ಮಾ.13 ರಂದು ಕನ್ನಡಪ್ರಭದಲ್ಲಿ ʼಗುಂಡುಪೇಟೆ ೧೫ ದಿನಗಳಿಂದ ಕಬಿನಿ ನೀರಿಲ್ಲʼ ಎಂದು ವರದಿ ಪ್ರಕಟಿಸಿತ್ತು. ಮಾ.18 ರಂದು ಕನ್ನಡಪ್ರಭದಲ್ಲಿ ʼಗುಂಡ್ಲುಪೇಟೇಲಿ ನೀರಿಗಾಗಿ ನಿಲ್ಲದ ಹಾಹಾಕಾರʼ ಎಂದು ವರದಿ ಪ್ರಕಟಿಸಿ ಗಮನ ಸೆಳೆದು ಪುರಸಭೆ ಆಡಳಿತಾಧಿಕಾರಿಗಳಿಗೆ ಎಚ್ಚರಿಸಿತ್ತು. ಕನ್ನಡಪ್ರಭದ ವರದಿ ಬಳಿಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ಪುರಸಭೆ ಮುಖ್ಯಾಧಿಕಾರಿಗೆ ಎಚ್ಚರಿಕೆ ಕೊಟ್ಟು ಕೂಡಲೇ ನೀರು ಕೊಡುವ ಕೆಲಸ ಮಾಡಬೇಕು ಎಂದೇಳಿದ ಬಳಿಕ ತಿಂಗಳಿನಿಂದ ಕೆಟ್ಟಿದ್ದ ಡಿಜಿಟಲ್‌ ಸ್ಟಾರ್ಟರ್‌ಗಳು ದಿಡೀರ್ ದುರಸ್ಥಿಯಾಗಿ ಎರಡು ದಿನ ಕಳೆದರೂ ಗುಂಡ್ಲುಪೇಟೆಗೆ ಮಾತ್ರ ತಲುಪಿಲ್ಲ. ಡಿಜಿಟಲ್‌ ಸ್ಟಾರ್ಟರ್‌ ರಿಪೇರಿಯಾಗಿದೆ.ಮಂಗಳವಾರ ದೇಬೂರು,ಸಿಂಧುವಳ್ಳಿಯ ಸ್ಟಾರ್ಟರ್‌ ಕೆಟ್ಟಿತ್ತು ಅದು ರಿಪೇರಿ ಆಗಿವೆ.ಅಲ್ಲಿಂದ ಬೇಗೂರಿನ ಸಂಪಿನ ತನಕ ನೀರು ಬಂದಿದೆ.ಬೇಗೂರು ಸಂಪಿನ ಸ್ಟಾರ್ಟರ್‌ ನೀರು ಮೊದಲಿಗೆ ಎತ್ತಿತ್ತು ನಂತರ ಕೆಟ್ಟಿದೆ.ದುರಸ್ಥಿ ಕೆಲಸ ಆಗುತ್ತಿದೆ.ಬುಧವಾರ ರಾತ್ರಿ ಎಷ್ಟೊತ್ತಾದರೂ ಗುಂಡ್ಲುಪೇಟೆಗೆ ನೀರು ತಲುಪುವ ಸಾದ್ಯತೆ ಇದೆ.

ಕೆ.ಪಿ.ವಸಂತಕುಮಾರಿ ಪುರಸಭೆ ಮುಖ್ಯಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ