ರಾಘು ಕಾಕರಮಠ
ಜುಲೈ 22ರಂದು ಮದುವೆಯ ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮವಿತ್ತು. ಈ ಖುಷಿಯನ್ನು ಸಂತಸದಿಂದಲೇ ಆಚರಿಸಬೇಕು ಎಂಬ ತವಕದಿಂದಲೆ ಹೊಟ್ಟೆ ಪಾಡಿಗಾಗಿ ಜೋಯಿಡಾದಿಂದ ಕೇರಳಕ್ಕೆ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದ. ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ದುರಂತದಲ್ಲಿ ಪತಿ ಮಾತ್ರ ದಾರಿಯ ಮಧ್ಯೆಯೆ ವಿಧಿಯಾಟಕ್ಕೆ ಸಿಲುಕಿ ನಾಪತ್ತೆಯಾಗಿದ್ದ. ತನ್ನ ಗಂಡನೊಂದಿಗೆ ಸಂಭ್ರಮ ಆಚರಿಕೊಳ್ಳಬೇಕಿದ್ದ ಪತ್ನಿ ಈಗ 6 ತಿಂಗಳ ಮಗುವನ್ನು ಎತ್ತುಕೊಂಡು ಕಣ್ಣಿರಲ್ಲೇ ಪತಿಯ ಬರುವಿಕೆಯ ದಾರಿ ಎದುರು ನೋಡುತ್ತಿರುವ ಈ ಕರಾಣಾಜನಕ ಕಥೆ ಕರಳು ಹಿಂಡುವಂತಿದೆ.
ಹೌದು.. ಇದು ಅಂಕೋಲಾದ ಶಿರೂರಿನ ಗುಡ್ಡ ಕುಸಿತ ಪ್ರಕರಣದಲ್ಲಿ ಲಾರಿಯೊಂದಿಗೆ ಕಣ್ಮರೆಯಾದ ಕೇರಳದ ಕ್ಯಾಲಿಕೆಟ್ನ ಅರ್ಜುನ ಡಿ. ದುರಂತದ ವ್ಯಥೆಯ ಕಥೆ.ಪ್ರೀತಿಸಿ ಮದುವೆಯಾಗಿದ್ದರು:
ಆಗಾಗ ಪೋನ್ ಮಾಡುತ್ತಿದ್ದ ಪತಿ:
20 ನಿಮಿಷದಲ್ಲೆ ಆಘಾತದ ಕರೆ:
ಸಹೋದರಿಯ ಮದುವೆಗೂ ತಯಾರಿ:
ಜು. 18ರಿಂಗ್ ಆಗಿತ್ತು :
ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಕೇರಳ ಸರಕಾರ:
ಆದರೆ ಅರ್ಜುನನ ಕುಟುಂಬ ಮಾತ್ರ ಈ ಮಣ್ಣು ತೆರವಿನ ಕಾರ್ಯಾಚರಣೆ ವಿಫಲತೆಯಿಂದ ಸಾಗಿದೆ. ಕೇವಲ ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ಜಿಪಿಎಸ್ ಕಾಣಿಸುವಲ್ಲಿ ಮಣ್ಣು ತೆರವುಗೊಳಿಸಿದಲ್ಲಿ ಲಾರಿಯಲ್ಲಿ ಬದುಕಿರುವ ಸಾಧ್ಯತೆ ಇರುವ ಅರ್ಜುನನನ್ನು ರಕ್ಷಿಸಿಬಹುದು ಎಂದು ವಿನಂತಿಸಿತ್ತು.
ಈ ಬಗ್ಗೆ ಸೂಕ್ತ ಸ್ಪಂದನೆ ಸಿಗದೇ ಇರುವ ನಿಟ್ಟಿನಲ್ಲಿ ಕೇರಳದ ಮಾಧ್ಯಮ ಮತ್ತು ಸರಕಾರದ ಸಹಾಯಕ್ಕೆ ಈ ಕುಟುಂಬ ಸಾಗಿತ್ತು. ಕೂಡಲೇ ಎಚ್ಚೆತ್ತ ಕೇರಳ ಸರಕಾರ ಕೇರಳ ವೆಹಿಕಲ್ ಟ್ರಾನ್ಸ್ಫೋರ್ಟ್ ಅಧಿಕಾರಿ ಚಂದ್ರಯಾನ್ ಹಾಗು ಹಿರಿಯ ಪೊಲಿಸ್ ಅಧಿಕಾರಿ ಪ್ರೇಮ ಸದನ ಅವರನ್ನು ಕರ್ನಾಟಕಕ್ಕೆ ಕಳುಹಿಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ವರದಿ ಒಪ್ಪಿಸುವಂತೆ ಆದೇಸಿಸಿತ್ತು.ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಅಂಕೊಲಾದ ಶಿರೂರಿಗೆ ಬಂದು ಕಾರ್ಯಚರಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಕೇರಳದ 30ಕ್ಕೂ ಹೆಚ್ಚು ಸುದ್ದಿವಾಹಿನಿಗಳು ಶಿರೂರಿಗೆ ಆಗಮಿಸಿ ವರದಿ ಮಾಡುತ್ತಲಿದೆ.
ಕರ್ನಾಟಕ ಸರಕಾರಕ್ಕೆ ಛೀಮಾರಿ ಹಾಕಿದ ಕೇರಳ ಸರಕಾರ:ಶಿರೂರಿನಲ್ಲಿ ಕೇವಲ ಮಣ್ಣು ತೆರವು ಕಾರ್ಯಾಚರಣೆ ಮಾತ್ರ ನಡೆಯುತ್ತಿದೆ. ಅಪಾಯದಲ್ಲಿ ಸಿಲುಕಿರುವ ಅರ್ಜುನ ಸೇರಿದಂತೆ ಇತರರ ರಕ್ಷಣೆಗೆ ಯಾವುದೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕರ್ನಾಟಕ ಸರಕಾರ ವಿಫಲವಾಗಿದೆ ಎಂದು ಕೇರಳದ ಮಾದ್ಯಮಗಳು ಕರ್ನಾಟಕವನ್ನು ಛೀಮಾರಿ ಹಾಕುತ್ತಿರುವ ವರದಿಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೆಟಲ್ ಡಿಟೆಕ್ಟರ್ನಿಂದ ಶೋಧಕೇರಳದ ಸರಕಾರದಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ಶೋಧ ಕಾರ್ಯವನ್ನು ಸುರತ್ಕಲನ ಎನ್ಐಟಿಕೆ ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳು ಮತ್ತು ತಜ್ಞರು ಮಾಡುತ್ತಿದ್ದಾರೆ. ಸುಮಾರು 4 ಅಡಿ ಆಳದ ವರೆಗೆ ರೇಡಾರ್ ಮೂಲಕ ಇರುವ ಮೆಟಲ್ ಪತ್ತೆ ಮಾಡುವ ಸಾಧನ ಇದಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಮೂರು ಕಡೆ ಸಿಗ್ನಲ್ ದೊರೆತಿದ್ದು, ಅದು ವಾಹನಗಳೆ ಎಂಬ ಬಗ್ಗೆ ದೃಢೀಕರಿಸಲು ಶೋಧ ಕಾರ್ಯ ಮುಂದುವರಿದಿದೆ.