ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳ ಸಮ್ಮುಖದಲ್ಲಿ ಬೆಳೆ ಸಮೀಕ್ಷೆ ಮಾಡಲು ಆಗಸ್ಟ್ 15 ರ ನಂತರ ಅವಕಾಶವಿದೆ. ಅದಕ್ಕೂ ಮುನ್ನವೇ ರೈತರು ತಮ್ಮ ಬೆಳೆಯ ಬಗ್ಗೆ ವಿವರ ನಮೂದಿಸಬಹುದು ಎಂದರು.
ರಾಗಿ ಬಿತ್ತನೆ ಬೀಜ ಪೂರೈಸಿಈ ಬಾರಿ ಮಳೆಯ ಪ್ರಮಾಣ ಚೆನ್ನಾಗಿರುವುದರಿಂದ ಬಿತ್ತನೆ ಕಾರ್ಯಗಳು ಜಿಲ್ಲೆಯಲ್ಲಿ ಚುರುಕಾಗಿವೆ. ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ದಾಸ್ತಾನು ಸಾಕಷ್ಟು ಲಭ್ಯವಿದ್ದು, 17,097 ಮೆಟ್ರಿಕ್ ಟನ್ ರಸ ಗೊಬ್ಬರ ಪ್ರಸ್ತುತ ಲಭ್ಯವಿದೆ ಜೊತೆಗೆ 1041 ಮೆಟ್ರಿಕ್ ಟನ್ ಬಪರ್ ಸ್ಟಾಕ್ ಇಡಲಾಗಿದೆ. ರೈತರು ಈ ಬಾರಿ ನೆಲಗಡಲೆ ಬೆಳೆ ಬದಲು ರಾಗಿ ಬೆಳೆಯಲು ಒಲವು ತೋರಿಸುತ್ತಿದ್ದಾರೆ. ಅದರಂತೆ ಬಿತ್ತನೆ ಬೀಜಗಳನ್ನು ಪೂರೈಸುವಂತೆ ಸೂಚಿಸಿದರು.
ಬೆಳೆ ವಿಮೆ ಸಂದಾಯವಾಗಿಲ್ಲಕಳೆದ ಬಾರಿ ಬೆಳೆ ವಿಮೆ ಮಾಡಿಸಿದ ಕೆಲವು ರೈತರಿಗೆ ಬೆಳೆ ವಿಮೆ ಈ ವರೆಗೆ ಸಂದಾಯ ಆಗಿಲ್ಲ. ಸಂದಾಯವಾಗದಿರಲು ಕಾರಣಗಳೇನು ಎನ್ನುವ ಕುರಿತು ತ್ವರಿತವಾಗಿ ಪರಿಶೀಲಿಸಿ ಜುಲೈ 22ರ ಒಳಗೆ ವರದಿ ನೀಡಬೇಕು ಜೊತೆಗೆ ಈ ಬಾರಿಯೂ ಬೆಳೆ ವಿಮೆ ಮಾಡಿಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಸ