-ಹಿಂದುಳಿದವರಿಗೆ ದಾರಿದೀಪ
ಕನ್ನಡಪ್ರಭ ವಾರ್ತೆ ಸೊರಬ
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶದಡಿ ಸಮಾಜದಲ್ಲಿನ ಅಂಧಾನುಕರಣೆ ದೂರ ಮಾಡುವಲ್ಲಿ ನಾರಾಯಣಗುರುಗಳ ಶ್ರಮ ಅಪಾರ ಎಂದು ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಎಚ್. ಗಣಪತಿ ಹುಲ್ತಿಕೊಪ್ಪ ಹೇಳಿದರು.ಹೊಸಪೇಟೆ ಬಡಾವಣೆಯ ಬ್ರಹ್ಮಶ್ರೀ ನಾರಾಯಣ ವೃತ್ತದಲ್ಲಿ ಶ್ರೀನಾರಾಯಣ ಗುರುಗಳ ಧರ್ಮ ಪರಿಪಾಲನಾ ಸಂಘ, ನಾರಾಯಣಗುರು ಸೇವಾ ಸಮಿತಿ, ಎಸ್ಎನ್ಜಿವಿ ನೇತೃತ್ವದಲ್ಲಿ ಈಡಿಗ ಸಮುದಾಯದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಪಂ ಮಾಜಿ ಅಧ್ಯಕ್ಷ ಕೆ. ಅಜ್ಜಪ್ಪ ಕಾಸರಗುಪ್ಪೆ ಮಾತನಾಡಿ, ಸಮಾಜದಲ್ಲಿ ತುಳಿತಕ್ಕೊಳಗಾದ ಜನರನ್ನು ಮೇಲೆತ್ತುವ, ಅಸ್ಪೃಶ್ಯತೆ ತೊಲಗಿಸುವ ಮತ್ತು ಅಂತಹ ಪದ್ಧತಿಗಳ ವಿರುದ್ಧ ಹೋರಾಡಿದ ಮಹಾನ್ ನಾಯಕ ಬ್ರಹ್ಮಶ್ರೀ ನಾರಾಯಣಗುರುಗಳಾಗಿದ್ದಾರೆ. ನಾರಾಯಣ ಗುರು ವೃತ್ತದಲ್ಲಿ ಶ್ರೀಗಳ ಮೂರ್ತಿಯನ್ನು ಪ್ರತಿಷ್ಠಾಪಿಸುವ ಉದ್ದೇಶ ಹೊಂದಲಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಸಂಘಟನೆಗಳು ಒಗ್ಗೂಡಿ ಇಂತಹ ಮಹತ್ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ನಾರಾಯಣಗುರುಗಳ ಧರ್ಮ ಪರಿಪಾಲನಾ ಸಂಘದ ತಾಲೂಕು ಅಧ್ಯಕ್ಷ ರಾಜು ಹಿರಿಯಾವಲಿ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಸಂಸ್ಥಾಪಕ ನಾಗೇಶ ರಾಜೀವನಗರ, ಬಿಎಸ್ಎನ್ಡಿಪಿ ತಾಲೂಕು ಗೌರವಾಧ್ಯಕ್ಷ ನಂಜುಂಡಪ್ಪ ಮಳಲಗದ್ದೆ, ಜಿಲ್ಲಾಧ್ಯಕ್ಷ ಎಸ್.ಡಿ. ನಾಯ್ಕ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಡಿ. ಉಮೇಶ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ ಶೇಖರ್, ದೀವರ ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ತಾಲೂಕು ಅಧ್ಯಕ್ಷ ಓ.ಬಿ. ರಾಜಶೇಖರಪ್ಪ ಕೆರೆಕೊಪ್ಪ, ಜಿ.ಡಿ. ನಾಯ್ಕ್, ಜಿ.ಡಿ. ಪ್ರಕಾಶ್ ಕೆರೆಕೊಪ್ಪ, ತ್ಯಾಗರಾಜ ಹುಲ್ತಿಕೊಪ್ಪ, ಈಶ್ಚರ ಎಂ. ಸಾರೇಮರೂರು, ರವಿ ಶೆಟ್ಟಿ, ಬಿ. ವಸಂತ್ ಕೆರೆಕೊಪ್ಪ, ರಾಮಪ್ಪ ಸಂಪಗೋಡು, ಪ್ರಶಾಂತ್ ಜೆ. ನಾಯ್ಕ್, ಶಿವರಾಜ್ ಸಾರೇಮರೂರು, ರಾಮು ಹಳೇಸೊರಬ, ವಿಶ್ವನಾಥ ಓಟೂರು ಇದ್ದರು.
೨೮ಕೆಪಿಸೊರಬ-೦೧