ಮುಳಗುಂದ: ಎಲ್ಲ ಧರ್ಮೀಯರ ಸಮಾಗಮವೇ ಜಾತ್ರೆ. ಸೌಹಾರ್ದತೆಯಿಂದ ಧಾರ್ಮಿಕ ಕಾರ್ಯಕ್ರಮ ಆಚರಿಸುವ ಮೂಲಕ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಜಾತ್ರೆಗಳು ಮಾಡುತ್ತಿವೆ ಎಂದು ಗದುಗಿನ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದರು.
ಬೆಳಗಾವಿ ಬಸವ ಬೆಳವಿ ಚಿರಂತೇಶ್ವರ ವಿರಕ್ತಮಠದ ಶರಣಬಸವ ದೇವರು ಉಪನ್ಯಾಸ ನೀಡಿ, ಬಾಲಲೀಲಾ ಮಹಾಂತ ಶಿವಯೋಗಿಗಳು ತ್ರಿಕಾಲ ಜ್ಞಾನಿಗಳು, ಮಹಾನ್ ವೈರಾಗ್ಯಗಳು, ತಮ್ಮ ತ್ರಿಕಾಲ ಜ್ಞಾನದಿಂದಲೇ ಮೈಸೂರು ರಾಜರ ರೋಗವನ್ನು ಗುಣಪಡಿಸಿದ್ದರು. ಅದಕ್ಕೆ ಪ್ರತಿಯಾಗಿ ರಾಜನು ನೀಡಿದ ರತ್ನಖಚಿತ ಸನ್ಮಾನಗಳಿಗೆ ಅಂಟಿಕೊಳ್ಳದೆ ಅವನ್ನೆಲ್ಲ ತ್ಯಜಿಸಿ ಕೇವಲ ಒಂದು ಕುಂಬಳ ಸೊರಟಗಿ ತೆಗೆದುಕೊಂಡು ಬಂದರು. ಅಷ್ಟು ವೈರಾಗ್ಯ ಮೂರ್ತಿಗಳು ಶಿವಯೋಗಿಗಳು ಎಂದರು.
ಸಾನ್ನಿಧ್ಯ ವಹಿಸಿದ್ದ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಮಾತನಾಡಿದರು. ರಾಮಣ್ಣಾ ಕಮಾಜಿ, ಗೌರಮ್ಮಾ ಬಡ್ನಿ, ಎಸ್.ಎಂ. ನೀಲಗುಂದ, ಅಶೋಕ ಸೋನಗೋಜಿ, ಜಗದೀಶ ಬಟ್ಟೂರ, ನಾಗರಾಜ ದೇಶಪಾಂಡೆ, ಸಂಜಯ ನೀಲಗುಂದ, ಡಾ. ಎಸ್.ಸಿ. ಚವಡಿ, ಎಂ.ಎಂ. ಶೇಖ, ಎ.ಡಿ. ಮುಜಾವರ, ಹೊನ್ನಪ್ಪ ಜೋಗಿ, ಎಂ.ಎಂ. ಜಮಾಲಸಾಬನವರ, ಫಕ್ಕೀರಯ್ಯ ಅಮೋಘಿಮಠ ಸೇರಿದಂತೆ ಜಾತ್ರಾ ಸಮಿತಿ ಸದಸ್ಯರು ಇದ್ದರು.