ತಂಪಾದ ವಾತಾವರಣ । ಜನತೆಯಲ್ಲಿ ಸಂತಸ । ರಸ್ತೆ ಮೇಲೆ ತುಂಬಿ ಹರಿದ ನೀರು
ಕಳೆದ ಮೂರು ತಿಂಗಳಿಗೂ ಹೆಚ್ಚು ಅವಧಿ ಕಡು ಬೇಸಿಗೆಯಲ್ಲಿ ಬಳಲಿದ್ದ ಮಲೆನಾಡ ಹೆಬ್ಬಾಗಿಲು ತರೀಕೆರೆ ಪಟ್ಟಣದಲ್ಲಿಶನಿವಾರ ಧರೆಗಿಳಿದ ಮೊದಲ ವರ್ಷಧಾರೆ ಜನರಲ್ಲಿ ಸಂತಸ ಮೂಡಿಸಿದೆ.ಹೆಚ್ಚು ಕಡಿಮೆ ಜನವರಿಯಿಂದಲೇ ಪ್ರಾರಂಭವಾದ ಬೇಸಿಗೆ ಫೆಬ್ರವರಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ವರೆಗೂ ಪಟ್ಟಣದಲ್ಲಿ ವಿಪರೀತ ತಾಪಮಾನವಿದ್ದು ಹೆಚ್ಚಿದ ಬೇಸಿಗೆ ಉಷ್ಣಾಂಶದಿಂದ ಜನ ತಲ್ಲಣಿಸಿದ್ದರು. ಸುಡು ಬಿಸಿಲಲ್ಲಿ ನೆರಳನ್ನು ಹುಡುಕ ಬೇಕಾದಂತಹ ಸ್ಥಿತಿಯಿಂದ ತಲ್ಲಣಿಸುವಂತಾಗಿತ್ತು.
ಎಷ್ಟು ನೀರು ಕುಡಿದರೂ ದಾಹ ತಣಿಯುತ್ತಿರಲಿಲ್ಲ. ಹಲವೆಡೆ ಕುಡಿಯುವ ನೀರಿಗೂ ಹಾಹಾಕಾರವಾಗಿತ್ತು, ಪ್ರಾಣಿ ಪಕ್ಷಿಗಳು ಕೂಡ ನೀರಿಗಾಗಿ ಹುಡುಕಾಟ ನಡೆಸುವಂತಾಗಿತ್ತು. ಕೆಲವು ಕಡೆ ಅಂತರ್ಜಲ ಕ್ಷೀಣಿಸಿದ್ದು, ಮಳೆ ಎಂದು ಬರುತ್ತದೆ ಎಂದು ಜನರು ನಿರೀಕ್ಷಿಸುತ್ತಿದ್ದರು.ಮೊದಲ ವರ್ಷಧಾರೆ:ಜನರ ನಿರೀಕ್ಷೆಯಂತೆ ಮಲೆನಾಡು ಹೆಬ್ಬಾಗಿಲು ಎನ್ನುವ ಹೆಸರಿಗೆ ಸರಿಯಾಗಿ ತರೀಕೆರೆ ಪಟ್ಟಣದಲ್ಲಿ ಮೊದಲ ವರ್ಷಧಾರೆ ತುಸು ಹದವಾಗಿಯೇ ಸುರಿದಿದೆ. ಶನಿವಾರ ಬೆಳಗಿನಿಂದಲೇ ಎಂದಿನಂತೆ ಬಿಸಿಲ ಹೆಚ್ಚು ತಾಪಮಾನವಿತ್ತು, ಮಧ್ಯಾನ್ಹದ ನಂತರ ದಟ್ಟ ಮೋಡ ಕವಿಯ ತೊಡಗಿತು, ಕೆಲವೇ ನಿಮಿಶಗಳಲ್ಲಿ ಮಿಂಚು ಗುಡುಗಿನಿಂದ ಕೂಡಿದ ಹದವಾದ ಮಳೆ ಸಿಂಚನವಾಗಿ ಸುಮಾರು 25 ನಿಮಿಷಗಳ ಕಾಲ ಸುರಿಯಿತು.ತುಂಬಿ ಹರಿದ ರಸ್ತೆ ಚರಂಡಿಗಳುಃ
ಕಡು ಬೇಸಿಗೆ ಮತ್ತು ಬರಗಾಲದಿಂದ ತತ್ತರಿಸಿಹೋಗಿದ್ದಲ್ಲದೆ, ಅಂತರ್ಜಲ ಕ್ಷೀಣಿಸಿದ್ದ ತರೀಕೆರೆ ಪಟ್ಟಣದಲ್ಲಿ ಶನಿವಾರ ಸುರಿದ ತುಸು ಹದವಾದ ಮಳೆಯಿಂದ ಜನರು ಸಂತಸ ಪಡುವಂತೆ ಆಗಿದೆ. ತರೀಕೆರೆ ಪಟ್ಟಣದ ನಿಟ್ಟುಸಿರು ಬಿಡುವಂತಾಗಿದೆ. ಪಟ್ಟಣದಲ್ಲಿ ಇದ್ದ ಬಿಸಿಲ ವಾತಾವರಣ ಇದೀಗ ತಂಪಾಗಿದೆ. ಮಳೆ ರೈತರಿಗೆ ಆಶಾಕಿರಣವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ, ಅಡಿಕೆ ಬೆಳೆಗಾರ ಟಿ.ಎಲ್.ರಮೇಶ್ ಸಂತಸ ವ್ಯಕ್ತಪಡಿಸಿದ್ದಾರೆ.
ಮುಂದುವರಿದ ಮಳೆ: ಗುಡುಗು,ಮಿಂಚು, ಸಿಡಿಲಿನ ಅಬ್ಬರ
--
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆ ಕೆಲವೆಡೆ ಶನಿವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿಗೆ ಓರ್ವ ಬಲಿಯಾಗಿದ್ದಾರೆ.ಎನ್.ಆರ್.ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ಸಾಲೂರು ನಿವಾಸಿ ಶಂಕರ್ (50) ಮೃತ ದುರ್ದೈವಿ.
ತರೀಕೆರೆ ಪಟ್ಟಣದಲ್ಲಿ ಮಧ್ಯಾಹ್ನ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಬಿಸಿಲಿನ ಝಳಕ್ಕೆ ತತ್ತರಿಸಿದ ಜನರಿಗೆ ಮಳೆ ತಂಪೆರೆಯಿತು. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ ಭಾರಿ ಮಳೆ ಯಾಗಿದ್ದರಿಂದ ಹಲವೆಡೆ ತಗ್ಗಿನ ಪ್ರದೇಶಗಳಲ್ಲಿ ನೀರು ನಿಂತುಕೊಂಡಿದ್ದರೆ, ರಸ್ತೆಯ ತುಂಬೆಲ್ಲಾ ತೆರೆದ ಚರಂಡಿಯಲ್ಲಿ ಹರಿಯುವಂತೆ ನೀರು ಹರಿಯುತ್ತಿತ್ತು. ಕೆಲ ಹೊತ್ತು ಜನ ಜೀವನ ಅಸ್ತವ್ಯಸ್ತವಾಗಿತ್ತು.ಬೀರೂರು ಪಟ್ಟಣದಲ್ಲಿ 10 ನಿಮಿಷ ಮಳೆಯಾಗಿದ್ದರೆ, ಕಡೂರು ತಾಲೂಕಿನ ಸಖರಾಯಪಟ್ಟಣ, ದೇವನೂರು ಹೋಬಳಿಯಲ್ಲೂ ಮಳೆ ಬಂದಿದೆ. ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆ ಬಂದಿತು.
--
ಶೃಂಗೇರಿ: ಆರ್ಭಟಿಸಿದ ಮಳೆರಾಯಶೃಂಗೇರಿ: ತಾಲೂಕಿನಾದ್ಯಂತ ಶನಿವಾರವೂ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಧಾರಾಕಾರ ಮಳೆ ಸುರಿಯಿತು. ಮದ್ಯಾಹ್ನ ದಟ್ಟ ಮೋಡ ಕವಿದು ಗುಡುಗು ಸಿಡಿಲಿನ ಆರ್ಭಟ ಆರಂಭವಾಗಿ, ಗಾಳಿ ಸಹಿತ ವರುಣ ಧರೆಗಿಳಿದು ಹರ್ಷ ಹೆಚ್ಚಿಸಿತು.ಶೃಂಗೇರಿ ಪಟ್ಟಣದಲ್ಲಿ ಮಧ್ಯಾಹ್ನದಿಂದ ಆರಂಭಗೊಂಡ ಮಳೆ ಸುಮಾರು ಒಂದೆರೆಡು ಗಂಟೆಗಳ ಕಾಲ ಎಡಬಿಡದೆ ಸುರಿಯಿತು. ಶುಕ್ರವಾರವೂ ದಾರಾಕಾರ ಮಳೆ ಸುರಿದಿತ್ತು. ತಾಲೂಕಿನ ಮೆಣಸೆ, ಬೇಗಾರು, ಅಡ್ಡಗೆದ್ದೆ, ಕೆರೆಕಟ್ಟೆ, ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ.
ನೆಮ್ಮಾರು, ಕೆರೆಕಟ್ಟೆಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಧ್ಯಾಹ್ನದಿಂದ ಆರಂಭಗೊಂಡ ಮಳೆ ಸಂಜೆಯವರೆಗೂ ಮುಂದುವರೆದಿತ್ತು. ಕೆಲ ದಿನಗಳಿಂದ ಸುಡುಬಿಸಿಲ ವಾತಾವರಣದಿಂದ ಕಂಗೆಟ್ಟಿದ್ದ ಜನರಿಗೆ ಶುಕ್ರವಾರದಿಂದ ಸುರಿದ ಮಳೆಯಿಂದ ಇಡೀ ವಾತಾವರಣವೇ ತಂಪಾಗಿ ನೆಮ್ಮದಿ ತಂದಿದೆ.13 ಶ್ರೀ ಚಿತ್ರ 2-ಶೃಂಗೇರಿ ತಾಲೂಕಿನಲ್ಲಿ ಶನಿವಾರ ಧಾರಾಕಾರ ಮಳೆ ಸುರಿಯಿತು.13ಕೆಟಿಆರ್.ಕೆ.16, 17ಃತರೀಕೆರೆಯಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿ ಹರಿಯಿತು.