ಕನ್ನಡಪ್ರಭ ವಾರ್ತೆ ಲಿಂಗಸುಗೂರು
ತಾಲೂಕಿನ ಗುರುಗುಂಟಾ ಅಮರೇಶ್ವರ ದೇವಸ್ಥಾನ ಕ್ರಾಸ್ನ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಎತ್ತಿನ ಬಂಡಿ, ಟ್ಯ್ರಾಕ್ಟರ್ ಹಾಗೂ ನೂರಾರು ರೈತರೊಂದಿಗೆ ಪ್ರತಿಭಟನೆ ಆರಂಭಿಸಿ, 5 ಕಿಮೀ ದೂರದ ಯರಡೋಣ ಶಿವಾರದಲ್ಲಿ ಪಪ್ಪಾಯಿ ಬೆಳೆದ ರೈತನ ಬೆಳೆ ಹಾಳು ಮಾಡಿ, ಗಿಡಗಳನ್ನು ಕಿತ್ತು ಹಾಕಿ ಗುಂಡಿ ಅಗೆದ ಜಮೀನಿಗೆ ತೆರಳಿದ ರೈತರು, ಆರಂಭದಲ್ಲಿ ಎತ್ತಿಗಳೊಂದಿಗೆ ನೇಗಿಲು ಉತ್ತಲು ಮುಂದಾದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಲು ಮುಂದಾದರೂ ಸಹಿತ ಅರಣ್ಯ ಇಲಾಖೆ ಅಧಿಕಾರಿಗಳನ್ನು ಲೆಕ್ಕಿಸದೇ ರೈತರು ಎತ್ತುಗಳೊಂದಿಗೆ ಜಮೀನಿನಲ್ಲಿ ನೇಗಿಲು ಹೊಡೆಯಲು ಆರಂಭಿಸಿದರು.
ರೈತರ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು, ಎತ್ತಿನ ನೇಗಿಲು ನಿಲ್ಲಿಸಲು ಮುಂದಾದರು ರೈತರು ಕ್ಯಾರೆ ಎನ್ನದೆ ಜೆಸಿಬಿ ಯಂತ್ರದಿಂದ ತಗ್ಗುಗಳನ್ನು ಮುಚ್ಚಿದರು. ಒಗ್ಗಟ್ಟನಿಂದ ಅಪಾರ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮೂಕ ಪ್ರೇಕ್ಷರಕಾದರು.ರೈತರ ಆಕ್ರೋಶ ನೋಡಿದ ಅರಣ್ಯ ಇಲಾಖೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಅರಣ್ಯ ಇಲಾಖೆ ಅಗೆದ ಗುಂಡಿಗಳನ್ನು ಮುಚ್ಚಿದ ರೈತರು ಒಗ್ಗಟ್ಟು ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕು ಅಧ್ಯಕ್ಷ ಪ್ರಸಾದರೆಡ್ಡಿ, ನ್ಯಾಯವಾದಿ ಕುಪ್ಪಣ್ಣ ಮಾಣಿಕ್, ರಾಜ್ಯ ಪ್ರಧಾನ ಕಾರ್ಯಧ್ಯಕ್ಷ ಬೈರೆಗೌಡ, ವೀರಭದ್ರಯ್ಯ ಸ್ವಾಮಿ, ಸೇರಿದಂತೆ ರೈತ, ದಲಿತ ಸಂಘದ ಮುಖಂಡರು,ಕಾರ್ಯಕರ್ತರು. ಅರಣ್ಯ ಇಲಾಖೆಯ ಎಸಿಎಫ್ಗೋವಿಂದರಾಜು, ರಾಜೇಶ ಸೇರಿದಂತೆ ಇದ್ದರು.