ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

KannadaprabhaNewsNetwork |  
Published : May 09, 2024, 01:00 AM IST
ಫೋಟೋ- ಸ್ಟ್ರಾಂಗ್‌ ರೂಮ | Kannada Prabha

ಸಾರಾಂಶ

ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಸಾಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ ಅವರ ಉಪಸ್ಥಿತಿಯಲ್ಲಿ 8 ವಿಧಾನಸಭಾ ಕ್ಷೇತ್ರದ ಇ.ವಿ.ಎಂ ಮತಯಂತ್ರಗಳು ಗುಲ್ಬರ್ಗ ವಿ.ವಿ.ಯ ವಿವಿಧ ವಿಭಾಗದಲ್ಲಿ ಭದ್ರವಾಗಿಟ್ಟು ಸ್ಟ್ರಾಂಗ್ ರೂಮ್ ಸೀಲು ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಗುಲ್ಬರ್ಗ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಮುಗಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಬುಧವಾರ ಅಭ್ಯರ್ಥಿ, ಚುನಾವಣಾ ಎಜೆಂಟ್ ಸಮಕ್ಷಮ ಇ.ವಿ.ಎಂ ಇರಿಸಲಾದ ಸ್ಟ್ರಾಂಗ್ ರೂಮ್ ಸೀಲ್ ಕಾರ್ಯ ನಡೆಯಿತು.

ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಸಾಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ ಅವರ ಉಪಸ್ಥಿತಿಯಲ್ಲಿ 8 ವಿಧಾನಸಭಾ ಕ್ಷೇತ್ರದ ಇ.ವಿ.ಎಂ ಮತಯಂತ್ರಗಳು ಗುಲ್ಬರ್ಗ ವಿ.ವಿ.ಯ ವಿವಿಧ ವಿಭಾಗದಲ್ಲಿ ಭದ್ರವಾಗಿಟ್ಟು ಸ್ಟ್ರಾಂಗ್ ರೂಮ್ ಸೀಲು ಮಾಡಲಾಯಿತು.

ಅಫಜಲ್ಪುರ ಮತಕ್ಷೇತ್ರದ ಇ.ವಿ.ಎಂ. ಯಂತ್ರಗಳು ಗಣಿತ ವಿಭಾಗದಲ್ಲಿ, ಗುಲ್ಬರ್ಗ ದಕ್ಷಿಣ ಕ್ಷೇತ್ರದ ಮತಯಂತ್ರಗಳು ಸಸ್ಯಶಾಸ್ತ್ರ ವಿಭಾಗದಲ್ಲಿ, ಸೇಡಂ ಕ್ಷೇತ್ರದ ಮತಯಂತ್ರಗಳು ಕನ್ನಡ ಅಧ್ಯಯನ ಸಂಸ್ಥೆ, ಗುಲ್ಬರ್ಗ ಉತ್ತರ ಮತ್ತು ಗುರುಮಠಕಲ್ ಕ್ಷೇತ್ರದ ಮತಯಂತ್ರಗಳು ಒಳಾಂಗಣ ಕ್ರೀಡಾಂಗಣ, ಚಿತ್ತಾಪುರ, ಗುಲ್ಬರ್ಗ ಗ್ರಾಮೀಣ ಹಾಗೂ ಜೇವರ್ಗಿ ಕ್ಷೇತ್ರದ ಮತಯಂತ್ರಗಳು ಪರೀಕ್ಷಾಂಗ ವಿಭಾಗದಲ್ಲಿರಿಸಿದೆ. ಇಲ್ಲಿಯೇ ಜೂ.4ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.

ಇನ್ನು ಸಾಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ ಅಧ್ಯಕ್ಷತೆಯಲ್ಲಿ ಇ.ಸಿ.ಐ. ಮಾರ್ಗಸೂಚಿಯಂತೆ ಮತಗಟ್ಟೆ ಅಧಿಕಾರಿಗಳ ಪೋಲ್ ಡೇ ಡೈರಿ ಪರಿಶೀಲಿಸಲಾಯಿತು. ಬಿಗಿ ಭದ್ರತೆ, ಸಿ.ಸಿ.ಟಿ.ವಿ ಕಣ್ಗಾವಲು: ಮತಯಂತ್ರಗಳು ಇರಿಸಲಾದ ಗುಲ್ಬರ್ಗ ವಿ.ವಿ.ಯ ವಿವಿಧ ವಿಭಾಗಗಳ ಕಟ್ಟಡಕಗಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಈಗಾಗಲೆ ಕಟ್ಟಡ ಕೇಂದ್ರ ಭದ್ರತಾ ಪಡೆಯ ಸುಪರ್ದಿಗೆ ವಹಿಸಿದೆ. ಸೆಂಟ್ರಲ್ ಪ್ಯಾರಾ ಮಿಲಿಟಿರಿ ಪೋರ್ಸ್‌, ಸಿ.ಐ.ಎಸ್.ಎಫ್, ಕೆ.ಎಸ್.ಆರ್.ಪಿ ಹಾಗೂ ಡಿ.ಎ.ಆರ್ ತುಕಡಿ ಬಿಗಿ ಭದ್ರತೆ ನೀಡಿವೆ. ಸ್ಟ್ರಾಂಗ್ ರೂಂಗೆ ಹೋಗುವ ದಾರಿ, ಸೀಲ್ ಮಾಡಲಾದ ರೂಂ ಸಿ.ಸಿ.ಟಿ.ವಿ. ಕಣ್ಗಾವಲಿನಲ್ಲಿದ್ದು, ಅಭ್ಯರ್ಥಿ ಮತ್ತು ಎಜೆಂಟ್ ಅವರು ದಿನದ 24 ಗಂಟೆ ವೀಕ್ಷಿಸಬಹುದಾಗಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಕಲಬುರಗಿ ನಗರ ಪೊಲೀಸ್‌ ಆಯುಕ್ತ ಆರ್.ಚೇತನಕುಮಾರ, ಜಿಲ್ಲಾ ಪಂಚಾಯ್ತಿ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ಸ್ಟ್ರಾಂಗ್ ರೂಮ್ ಪ್ರಿಪರೇಷನ್ ನೋಡಲ್ ಅಧಿಕಾರಿ ಸಮದ್ ಪಟೇಲ್ ಸೇರಿದಂತೆ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ