ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ಅಕ್ಟೋಬರ್ನಲ್ಲಿ ನೇರಳೆ ಮಾರ್ಗ ಪೂರ್ಣಗೊಂಡು 43.49 ಕಿಮೀ ಸಂಚಾರ ಸೇವೆ ಆರಂಭಿಸಿದಾಗ ಹಸಿರು ಮಾರ್ಗವೂ ಸೇರಿ ತಿಂಗಳಿಗೆ ಸರಾಸರಿ 7.50 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿತ್ತು. ಆದರೆ, ಎರಡು ತಿಂಗಳಲ್ಲಿ ಒಂದೆರಡು ದಿನ ಮಾತ್ರ ಇಷ್ಟು ಪ್ರಯಾಣಿಕರು ಸಂಚರಿಸಿದ್ದಾರೆ.
ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನೀಡಿರುವ ಮಾಹಿತಿಯಂತೆ ಕಳೆದ ತಿಂಗಳಲ್ಲಿ 1,99,21,460 ಪ್ರಯಾಣಿಕರು ಸಂಚರಿಸಿದ್ದು, ದಿನಕ್ಕೆ ಸರಾಸರಿ 6.64 ಲಕ್ಷ ಜನ ಪ್ರಯಾಣಿಸಿದ್ದಾರೆ. ಇದರಿಂದ ನಿಗಮ ₹ 51,22,03,333 ಆದಾಯ ಗಳಿಸಿದೆ. ನ. 9ರಂದು ಗರಿಷ್ಠ ಅಂದರೆ 7,56,368 ಜನ ಪ್ರಯಾಣಿಸಿದ್ದರು. ನ. 2ರಂದು ಗರಿಷ್ಠ ₹ 2,08,66,237 ಆದಾಯ ಗಳಿಸಿತ್ತು. ನೇರಳೆ ಮಾರ್ಗ ಪೂರ್ಣಗೊಳ್ಳುವುದಕ್ಕೂ ಮುನ್ನ ನಿತ್ಯ ಸರಾಸರಿ 6.2 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅಕ್ಟೋಬರ್ನಲ್ಲಿ 1,98,53,691 ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡಿದ್ದಾರೆ.ರೈಲುಗಳ ಅಭಾವ:
ದಿನದ ಸಂಚಾರ ದಟ್ಟಣೆ ಸಮಯದಲ್ಲಿ ಇದು ಸಮಸ್ಯೆಗೆ ಕಾರಣವಾಗಿದೆ. ಹಲವು ಬಾರಿ ದಟ್ಟಣೆ ನಿವಾರಣೆಗೆ ಹಸಿರು ಮಾರ್ಗದ ರೈಲುಗಳನ್ನು ಕೂಡ ನೆರಳೆ ಮಾರ್ಗದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಸಾಧಾರಣ ಸಮಯದಲ್ಲಿ 10 ನಿಮಿಷಕ್ಕೆ ಒಂದರಂತೆ ಹಾಗೂ ಬೆಳಗ್ಗೆ, ಸಂಜೆ ದಟ್ಟಣೆ ವೇಳೆ ಮೆಜಸ್ಟಿಕ್ನಿಂದ ಎಂ.ಜಿ.ರಸ್ತೆವರೆಗೆ ಪ್ರತಿ 3 ನಿಮಿಷಕ್ಕೆ ಒಂದರಂತೆ ರೈಲುಗಳ ಸಂಚಾರವಿದೆ. ಆದರೂ ಪ್ರಯಾಣಿಕರ ಸಂಖ್ಯೆಗೆ ತಕ್ಕಷ್ಟು ರೈಲುಗಳು ಇಲ್ಲದಿರುವುದೇ ಹೆಚ್ಚಿನ ತೊಂದರೆಗೆ, ಪ್ರಯಾಣಿಕರ ಸಂಖ್ಯೆ ಏರಿಕೆಯಾಗದಿರಲು ಕಾರಣ ಎಂದು ನಗರ ಸಾರಿಗೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೊಸ ಬೋಗಿಗಳು ಬರುವವರೆಗೆ ಈ ಕೊರತೆ ಸಮಸ್ಯೆ ಮುಂದುವರಿಯಲಿದೆ.
ಸದ್ಯ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಮಾತ್ರ ಇಂಟರ್ಚೇಂಜ್ ಆಗಿ ಬಳಕೆಯಾಗುತ್ತಿರುವುದು ಕೂಡ ಪ್ರಯಾಣಿಕರ ಸಂಖ್ಯೆ ಏರಿಕೆಯಾಗದಿರಲು ಕಾರಣವಾಗಿದೆ. ಮಾರ್ಗ ಬದಲಾವಣೆಗೆ ಇಲ್ಲಿ ಮಾತ್ರ ಅವಕಾಶವಿರುವುದು ಪ್ರಯಾಣಿಕ ಸ್ನೇಹಿಯಾಗಿಲ್ಲ. ನಾಗವಾರದಿಂದ-ಕಾಳೇನ ಅಗ್ರಹಾರವರೆಗಿನ ಗುಲಾಬಿ ಮಾರ್ಗ ಪೂರ್ಣಗೊಂಡ ಬಳಿಕವೇ ನೇರಳೆ ಮಾರ್ಗಕ್ಕೆ (ಎಂ.ಜಿ.ರಸ್ತೆ ನಿಲ್ದಾಣ) ಇನ್ನೊಂದು ಇಂಟರ್ಚೇಂಜ್ ಸಿಗಲಿದೆ. ಹಳದಿ ಮಾರ್ಗ ಮುಂದಿನ ವರ್ಷವೇ ಜನಸಂಚಾರ ಆರಂಭಿಸಿದರೂ ಜಯದೇವ ಇಂಟರ್ಚೇಂಜ್ ಇದಕ್ಕೆ ಸೇರದ ಕಾರಣ ಹಸಿರು, ನೇರಳೆ ಮಾರ್ಗಕ್ಕೆ ಪ್ರಯೋಜನ ಇಲ್ಲ.
* ಪ್ರಯಾಣಿಕರ ಸಂಖ್ಯೆ ಏರಿಕೆಯಾಗದಿರಲು ಏನು ಕಾರಣ?1. ಪ್ರಯಾಣಿಕರ ಸಂಖ್ಯೆಗೆ ತಕ್ಕಷ್ಟು ರೈಲುಗಳು ಇಲ್ಲ2. ಮೆಜೆಸ್ಟಿಕ್ ನಿಲ್ದಾಣ ಮಾತ್ರ ಇಂಟರ್ಚೇಂಜ್ ಆಗಿ ಬಳಕೆ3. ಮಾರ್ಗ ಬದಲಾವಣೆಗೆ ಪ್ರಯಾಣಿಕ ಸ್ನೇಹಿಯಾಗಿಲ್ಲ4. ಮೆಟ್ರೋಕ್ಕೆ ಸಮಸ್ಯೆಯಾದ ಕೊನೆ ಮೈಲಿ ಸಂಪರ್ಕ5. ಗಮ್ಯ ತಲುಪಲು ಆಟೋ, ಕ್ಯಾಬ್ ಅವಲಂಬನೆ ಅನಿವಾರ್ಯ