- ಲಿಂಗೈಕ್ಯ ಶ್ರೀಗಳ ಮೂಲ ಬೈಲಾ ಜಾರಿಗೊಳ್ಳಲಿ: ಸಾದು ಸದ್ಧರ್ಮ ಲಿಂಗಾಯತ ಸಮಾಜ ಆಗ್ರಹ
ಸಿರಿಗೆರೆ ತರಳಬಾಳು ಬೃಹನ್ಮಠಕ್ಕೆ ಇನ್ನೊಂದು ತಿಂಗಳಲ್ಲೇ ಮುಂದಿನ ಪೀಠಾಧಿಪತಿ ಘೋಷಣೆ ಮಾಡಬೇಕು. ಏಕವ್ಯಕ್ತಿ ಡೀಡ್ ರದ್ದುಪಡಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಶ್ರೀ ಮಠದ ಸ್ವಾಮೀಜಿಗೆ ಸಾದು ಸದ್ಧರ್ಮ ಲಿಂಗಾಯತ ಸಮಾಜದ ಹಿರಿಯ ಮುಖಂಡ, ಅಪೂರ್ವ ಹೋಟೆಲ್ಗಳ ಸಮೂಹ ಅಧ್ಯಕ್ಷ ಅಣಬೇರು ರಾಜಣ್ಣ ಎಚ್ಚರಿಸಿದರು.
ನಗರದ ಅಪೂರ್ವ ರೆಸಾರ್ಟ್ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾಜದ ಹಾಲಿ-ಮಾಜಿ ಜನಪ್ರತಿನಿಧಿಗಳು, ಮುಖಂಡರು, ಸಮಾಜ ಬಾಂಧವರ ಸಭೆ ನೇತೃತ್ವ ವಹಿಸಿ ಮಾತನಾಡಿದ ಅವರು, ಶ್ರೀಮಠ ಹಾಗೂ ಗುರು ಪರಂಪರೆಯ ಮೇಲಿನ ಅಭಿಮಾನ, ಗೌರವದಿಂದ ಇಲ್ಲಿವರೆಗೂ ಸಮಾಧಾನದಿಂದ ಇದ್ದೆವು. ಈಗ ಹೋರಾಟ ಅನಿವಾರ್ಯವೂ ಆಗಿದೆ ಎಂದರು.ಶ್ರೀ ಮಠದ ಬೆಳವಣಿಗೆ, ಶ್ರೀಗಳ ನಡೆ ಬಗ್ಗೆ ಪ್ರಶ್ನಿಸಿದರೆ ರೌಡಿಗಳು ಅಡ್ಡಿಪಡಿಸುತ್ತಾರೆ. ಪ್ರಶ್ನಿಸಿದವರ ವಿರುದ್ಧವೇ ಸುಳ್ಳು ದೂರು ದಾಖಲಿಸಲಾಗುತ್ತಿದೆ. ಇದು ಗುರುಗಳಾದವರು ಮಾಡುವ ಕೆಲಸವೇ? ಸಿರಿಗೆರೆ ಬೃಹನ್ಮಠ, ಸಾಣೇಹಳ್ಳಿ ಶ್ರೀಮಠ, ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಹರಕಟ್ಟಿ ಮಠದ ಸ್ವಾಮೀಜಿಗಳು ಪೀಠ ತ್ಯಾಗ ಮಾಡಬೇಕು. ಸಮಾಜ ಹಾಗೂ ಶ್ರೀಮಠ, ಗುರು ಸ್ಥಾನದ ಗೌರವ ಹಾಳಾಗದಂತೆ ತಡೆಯುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.
ಬೃಹತ್ ಪಾದಯಾತ್ರೆ:
ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಸಮಾಜದಲ್ಲಿ ಎಲ್ಲಿಯೇ ತಪ್ಪಾದರೂ ಕಿವಿ ಹಿಂಡಿ, ತಿದ್ದುವ ಶಕ್ತಿಯು ಅಭಾವೀಮ ರಾಷ್ಟ್ರೀಯ ಅಧ್ಯಕ್ಷರು, ಹಿರಿಯರೂ ಆದ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಇದೆ. ಈ ಸಭೆಯಲ್ಲಿ ಸಿರಿಗೆರೆ ಮಠಕ್ಕೆ ಹೊಸ ಪೀಠಾಧಿಪತಿ ಆಯ್ಕೆ, ಏಕವ್ಯಕ್ತಿ ಡೀಡ್ ರದ್ದು, ಶ್ರೀಮಠ ಮತ್ತು ಸಮಾಜದ ಗತವೈಭವ ಮರಳಿ ತರುವ ಕೆಲಸಕ್ಕೆ ಮುನ್ನುಡಿ ಬರೆದಿದ್ದೇವೆ. ಇದೇ ಹೋರಾಟದ ಕಿಚ್ಚು ಕಡೆಯವರೆಗೂ ಇರಲಿ. ಸಭೆಗೆ ಹೋಗದಂತೆ ನನಗೂ ಸಾಕಷ್ಟು ಕರೆಗಳು ಬಂದವು. ಆದರೆ, ಶ್ರೀಮಠ, ಗುರು ಸ್ಥಾನ, ಸಮಾಜದ ಮೇಲಿನ ಗೌರವಕ್ಕಾಗಿ ಬಂದಿದ್ದೇವೆ ಎಂದರು.
ಆದಿಚುಂಚನಗಿರಿ ಮಠಗಳ ನೋಡಿ ಕಲಿಯಿರಿ: ತರಳಬಾಳು ಮಠದ ರಾಣೆಬೆನ್ನೂರು ಎಂಜಿನಿಯರಿಂಗ್ ಕಾಲೇಜಿಗೆ ಯಾರೂ ಹೋಗುವುದಿಲ್ಲ. ಅದೇ ಆದಿಚುಂಚನಗರಿ ಮಠದ ಶಿಕ್ಷಣ ಸಂಸ್ಥೆಗಳನ್ನು ನೋಡಿ ಕಲಿಯಬೇಕು. ನಾಲ್ಕೈದು ಜಿಲ್ಲೆಗಳಲ್ಲಿ ಪ್ರಬಲವಾದ ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಮಠವು ಬಿಜಿಎಸ್ ಸಂಸ್ಥೆಯಡಿ ವಿಶ್ವವಿಖ್ಯಾತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಆದರೆ, ಸಿರಿಗೆರೆ ಲಿಂಗೈಕ್ಯ ಶ್ರೀಗಳು ಸ್ಥಾಪಿಸಿದ್ದ ಸಂಸ್ಥೆಗಳು ಒಂದೊಂದಾಗಿ ಮುಚ್ಚುತ್ತಿವೆ. ಗುರುವಿಗೆ ಅಂಜಿ ಶಿಷ್ಯ, ಶಿಷ್ಯನಿಗೆ ಅಂಜಿ ಗುರು ಸಾಗಬೇಕೆಂಬ ಮಾತಿದೆ. ಭಕ್ತರನ್ನು ಹೆದರಿಸಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ ಎಂಬ ಸಂಗತಿಯನ್ನು ಸ್ವಾಮೀಜಿ ಅರ್ಥ ಮಾಡಿಕೊಳ್ಳಬೇಕು ಎಂದರು.
- - -
- ರುದ್ರೇಗೌಡ, ಸದಸ್ಯ. ವಿಪ
ಸಿರಿಗೆರೆ ಡಾ.ಶಿವಮೂರ್ತಿ ಸ್ವಾಮೀಜಿ, ಸಾಣೇಹಳ್ಳಿ ಶ್ರೀಗಳು, ಪ್ರಕಾಶ ಸ್ವಾಮೀಜಿ ಇಂದು ಸೋಮವಾರವೇ ಹಿರಿಯರಾದ ಶಾಮನೂರು ಶಿವಶಂಕರಪ್ಪ, ಬಿ.ಸಿ.ಪಾಟೀಲ, ರುದ್ರೇಗೌಡರಿಗೆ ಕರೆ ಮಾಡಿ, ಸಕಾರಾತ್ಮಕ ಹೆಜ್ಜೆ ಇಡಲಿ. ನಾಳೆಯೇ ಮೂರು ಮಠಕ್ಕೂ ನೂತನ ಪೀಠಾಧಿಪತಿಗಳನ್ನು ಘೋಷಿಸಿ, ಏಕವ್ಯಕ್ತಿ ಡೀಡ್ ರದ್ದುಪಡಿಸುವ ಕೆಲಸ ಮಾಡಿ. ಸಮಾಜ ನಿಮ್ಮ ಬಗ್ಗೆ ಅಭಿಮಾನ ಪಡುತ್ತದೆ
- ಮಹೇಶ ಚಟ್ನಹಳ್ಳಿ, ಹಿರಿಯ ಸಾಹಿತಿ- - - ಬಾಕ್ಸ್ * 18ರಂದು ಶ್ರೀಗಳು ಬೇಡಿಕೆಗೆ ಸ್ಪಂದಿಸುವ ವಿಶ್ವಾಸ: ಎಸ್ಎಸ್ ಅ.ಭಾ.ವೀ.ಮ. ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಿರಿಗೆರೆ ಲಿಂಗೈಕ್ಯ ಶ್ರೀಗಳ ಮೂಲ ಬೈಲಾದಂತೆ ಯಥಾವತ್ ಮಠದ ಶ್ರೀಗಳ ಆಯ್ಕೆ, ಇತರೆ ಪ್ರಕ್ರಿಯೆ ಆಗಬೇಕು. ಹಾಲಿ ಶ್ರೀಗಳು ಪೀಠ ತ್ಯಾಗ ಮಾಡಿ, ಉತ್ತರಾಧಿಕಾರಿ ಘೋಷಿಸಬೇಕು. ಏಕವ್ಯಕ್ತಿ ಡೀಡ್ ರದ್ದುಪಡಿಸಬೇಕು ಎಂದರು.
ಸಮಾಜಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಸಮಾಜದ ಆಗುಹೋಗುಗಳು, ಶಿಕ್ಷಣ ಸಂಸ್ಥೆಗಳಿಗೆ ಪುನಶ್ಚೇತನ ನೀಡಬೇಕು. ನಮ್ಮ ಮಠದ ಪರಂಪರೆ ಮುಂದುವರಿಯಬೇಕು. ಮೂರು ದಶಕದ ಹಿಂದಷ್ಟೇ ಯಾರ ಗಮನಕ್ಕೂ ತರದೇ ಆಗಿರುವ ಏಕವ್ಯಕ್ತಿ ಡೀಡ್ ಮೊದಲು ರದ್ದಾಗಬೇಕು. ಈ ಎಲ್ಲಾ ವಿಚಾರ ಮುಂದಿಟ್ಟುಕೊಂಡು, ಆ.18ರಂದು ಬೆಂಗಳೂರಿನಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ಮಾಡಿ, ಚರ್ಚಿಸುತ್ತೇವೆ. ನಮ್ಮ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ. ಒಂದು ವೇಳೆ ಸ್ಪಂದಿಸದಿದ್ದರೆ ಮುಂದಿನ ನಿರ್ಧಾರವನ್ನು ನಾವೆಲ್ಲರೂ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.- - - (ಫೋಟೋ ಬರಲಿವೆ)