ಕನ್ನಡಪ್ರಭ ವಾರ್ತೆ ಜಮಖಂಡಿ
ಜಿಲ್ಲಾ ದಸ್ತು ಬರಹಗಾರರ ಸಂಘದ ಅಧ್ಯಕ್ಷ ಬಸವರಾಜ ತೆಲಸಂಗ ಮಾತನಾಡಿ, ರಾಜ್ಯದಲ್ಲಿ 15000 ಜನ ದಸ್ತು ಬರಹಗಾರರಿದ್ದಾರೆ, ಅವರ ಜೀವನೋಪಾಯಕ್ಕೆ ಸರ್ಕಾರದ ಪೇಪರ್ಲೆಸ್ ನೋಂದಣಿಯಿಂದ ಕುಟುಂಬಗಳು ಬೀದಿಪಾಲಾಗುತ್ತವೆ. ದಸ್ತು ಬರಹಗಾರರನ್ನು ತೆಗೆಯುವುದಿಲ್ಲ ಎಂದು ಹೇಳುವ ಸರ್ಕಾರ ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲು ಹೊರಟಿದೆ, ಸರ್ಕಾರ ಕೂಡಲೇ ಕಾವೇರಿ 3.0 ತಂತ್ರಾಂಶ ಜಾರಿಗೆ ತರುವುದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಧರಣಿ ಸತ್ಯಾಗ್ರಹ; ಬೆಳಗಾವಿಯ ಸುವರ್ಣ ಸೌಧದ ಎದುರು ಡಿ,16ರಿಂದ ರಾಜ್ಯ ದಸ್ತು ಬರಹಗಾರರ ಸಂಘದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವುದರಿಂದ ದಸ್ತು ಬರಹಗಾರರು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಬಸವರಾಜ ತೆಲಸಂಗ ಹೇಳಿದರು. ದಸ್ತು ಬರಹಗಾರರಾದ ಈರಣ್ಣ ಬಂಡಿಗಣಿ, ಎಸ್.ಆರ್.ಸಿದ್ದಾರ, ಶ್ರೀಶೈಲ ಗುರ್ಲಾಪುರ, ಮೋಹನ ಸಬರದ, ದುಂಡಪ್ಪ ಚಿತ್ತಾಪುರ, ಸುಭಾಷ ಬಂಡಿಗಣಿ, ಶ್ರೀಶೈಲ ಅಂಬಿ ಮುಂತಾದವರಿದ್ದರು.