ಮಳೆ ಆರಂಭವಾಗಿದ್ದು, ಹತ್ತಿ ಬಿತ್ತಲು ಈಗ ಸಕಾಲ

KannadaprabhaNewsNetwork |  
Published : May 19, 2024, 01:55 AM ISTUpdated : May 19, 2024, 01:33 PM IST
(-ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಮಳೆ ಆರಂಭಗೊಂಡಿದ್ದು, ಹತ್ತಿಬೀಜ ಬಿತ್ತಲು ಈಗ ನೆಲದ ಫಲವತ್ತತೆ ಸೂಕ್ತವಾಗಿರುತ್ತದೆ. ರೈತರು ಹತ್ತಿ ಬಿತ್ತನೆ ಮಾಡಬಹುದು ಎಂದು ಕೃಷಿತಜ್ಞ ಆರ್.ಜಿ.ಗೊಲ್ಲರ್ ತಿಳಿಸಿದ್ದಾರೆ.

  ದಾವಣಗೆರೆ  : ಮಳೆ ಆರಂಭಗೊಂಡಿದ್ದು, ಹತ್ತಿಬೀಜ ಬಿತ್ತಲು ಈಗ ನೆಲದ ಫಲವತ್ತತೆ ಸೂಕ್ತವಾಗಿರುತ್ತದೆ. ರೈತರು ಹತ್ತಿ ಬಿತ್ತನೆ ಮಾಡಬಹುದು ಎಂದು ಕೃಷಿತಜ್ಞ ಆರ್.ಜಿ.ಗೊಲ್ಲರ್ ತಿಳಿಸಿದ್ದಾರೆ.

ಕ್ಲೋರ್ ಪೈರಿಫಾಸ್ 3 ಮಿಲೀ, ಕಾರ್ಬೆಂಡೆಜಿಂ 3 ಗ್ರಾಂ ಪ್ರತಿ ಕೆಜಿ ಬೀಜಕ್ಕೆ ಉಪಚರಿಸಿ ಬಿತ್ತಬೇಕು. ಕನಕಾ ತರಹದ ತಳಿಗಳಿಗೆ 4''''*3'''' ಮತ್ತು ಡಿಸಿಎಚ್ 32 ತರಹದ ತಳಿಗಳಿಗೆ 4''''*2'''' ಅಂತರಗಳಲ್ಲಿ ಬಿತ್ತನೆ ಮಾಡಬಹುದು. 3ರಿಂದ 5 ಎಕರೆಗೆ ಒಂದು ತಳಿ ಬಳಸಬಹುದು. ಕ್ಷೇತ್ರ ಹೆಚ್ಚಾದಂತೆ (ಅವುಗಳನ್ನು ಬಳಸಿದ ಬಗ್ಗೆ ಕ್ಷೇತ್ರಾನುಭವ ಇರುವಂತಹ) ಬೇರೆ ಬೇರೆ ತಳಿ ಬಳಸಬೇಕು. ಸುತ್ತಲೂ 4-6 ಸಾಲು ಗೋವಿನಜೋಳ/ ಹೈಬ್ರಿಡ್ ಜೋಳ/ ಮೇವಿನ ಜೋಳ ಬೆಳೆಯುವುದು ಸೂಕ್ತ ಎಂದು ತಿಳಿಸಿದ್ದಾರೆ.

ಕಳೆ ಕಸ ಇರದಿರಲಿ:

ಹೊಲದಲ್ಲಿ, ಬದುಗಳಲ್ಲಿ ಪಾರ್ಥೇನಿಯಂ ಅಥವಾ ಇತರೆ ಕಳೆ ಕಸ ಇರಬಾರದು. ಬಿತ್ತುವಾಗ ಪ್ರತಿ ಗುಣಿಗೆ ಟ್ರೈಕೋಡರ್ಮಾ ಬೆರೆಸಿದ ಕೊಟ್ಟಿಗೆ ಗೊಬ್ಬರ ಕೊಡುವುದು ಸೂಕ್ತ. ಉತ್ತಮ ಹಸಿ ಮಳೆಯಾಗಿದ್ದಲ್ಲಿ ಮತ್ತು ನೀರಿನ ಅನುಕೂಲ ಇದ್ದಲ್ಲಿ ಪ್ರತಿ ಎಕರೆಗೆ 30-40 ಕೆಜಿ 10:26:26 ಸಾರಂಪೊ ಕೊಡಬಹುದು. ಬೆಳೆಯು 20-25 ದಿನಗಳು ಆದ್ದಾದಾಗ ಇದೇ ಗೊಬ್ಬರವನ್ನು, ಯೂರಿಯಾದೊಂದಿಗೆ ಮಳೆಯ ಪ್ರಮಾಣ ನೋಡಿಕೊಂಡು ಕೊಡಬಹುದು. ಬೆಳೆ 25 ದಿನಗಳ ಹಂತದಲ್ಲಿ ಇರುವಾಗ, 2- 3 ಗ್ರಾಂ 13:0:45, 2-3 ಗ್ರಾಂ 19:19:19, 1 ಗ್ರಾಂ ಲಿಬರಲ್ ಟಿಎಂಎಕ್ಸ್ 2 (ಅಥವಾ ತತ್ಸಮಾನವಾದ ಮತ್ತು ಅದೇ ಪ್ರಮಾಣದ ಲಘು ಪೋಷಕಾಂಶಗಳ ಮಿಶ್ರಣ) ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಪೈರೆಥ್ರಾಯಿಡ್ ಕೀಟನಾಶಕ ಬಳಸಬೇಡಿ:

ರಸಗೊಬ್ಬರ ಮಣ್ಣಿಗೆ ಕೊಡುವಾಗ, ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವಾಗ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರಲೇಬೇಕು. ಗೊಬ್ಬರಗಳನ್ನು ಮಣ್ಣಿನಲ್ಲಿ 4-6 " ಆಳದಲ್ಲಿ, ಬುಡದಿಂದ 4-6” ದೂರದಲ್ಲಿ ಬಳೆ ಆಕಾರದಲ್ಲಿ ಕೊಡುವುದು ಸೂಕ್ತ. ರಸ ಹೀರುವ ಕೀಟಗಳ ಬಾಧೆ ಇದ್ದಲ್ಲಿ 3 ಮಿಲಿ ಅಜಾಡಿರಕ್ಟಿನ್ (1500 ಪಿಪಿಎಂ) ಬೆರೆಸಿ ಸಿಂಪಡಿಸಬಹುದು. ಯಾವುದೇ ಕಾರಣಕ್ಕೆ ತಜ್ಞರ ಶಿಫಾರಸು ಇಲ್ಲದೇ ಪೈರೆಥ್ರಾಯಿಡ್ ಕೀಟನಾಶಕ ಬಳಸಬಾರದು ಎಂದು ಮಾಹಿತಿ ನೀಡಿದ್ದಾರೆ.

ಹುಳುಗಳ ನಾಶಪಡಿಸಿ:

ಕಾಂಡದ ಮೂತಿ ಹುಳು ಬಾಧೆ ತಪ್ಪದೇ ಬರುವ ಪ್ರದೇಶಗಳಲ್ಲಿ 25-50 ದಿನಗಳ ಹಂತದಲ್ಲಿ ಕೀಟನಾಶಕ ಬಳಕೆ ಅನಿವಾರ್ಯ. ಮತ್ತು ಬಿತ್ತನೆಯಾದ 15 ದಿನಗಳ ನಂತರ, ಪ್ರತಿ ದಿನ 7 ಗಂಟೆಯೊಳಗೆ ಹೊಲಗಳಲ್ಲಿ ಕಂಡುಬರುವ ಪ್ರೌಢ ಹುಳುಗಳನ್ನು ಕೈಯಿಂದ ಆಯ್ದು ಸಂಗ್ರಹಿಸಿ ನಾಶಪಡಿಸಬೇಕು. ಬಿತ್ತನೆ ನಂತರ 30 ದಿವಸ ಅವಧಿಯಲ್ಲಿ ತೇವಾಂಶ ತಕ್ಕಮಟ್ಟಿಗೆ ಇದ್ದರೆ, ಇಳುವರಿ ಚೆನ್ನಾಗಿ ಪಡೆಯಲು ಸಾಧ್ಯ. ಬಿತ್ತನೆ ತಡವಾದಂತೆ ಇಳುವರಿ ಕಡಿಮೆಯಾಗುವುದು ಎಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪರಿಣಿತರ / ತಜ್ಞರ ಸಲಹೆ ಪಡೆಯಲು ಮರೆಯಬಾರದು ಎಂದು ಸಲಹೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!