ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಕೆಆರ್ಐಡಿಎಎಲ್ ನಿರ್ವಹಿಸುತ್ತಿರುವ ಒಂದು ಕೋಟಿ ರು. ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರ ಕಳೆದ ವರ್ಷದ ವೈರಮುಡಿ ಬ್ರಹೋತ್ಸವಕ್ಕೆ 10 ಕೋಟಿ ರು. ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ ಬ್ರಹೋತ್ಸವಕ್ಕೆ 1.5 ಕೋಟಿ ರು. ವೆಚ್ಚ ಮಾಡಿ ಉಳಿಕೆ ಅನುದಾನವನ್ನು ಈ ಭಾಗದ ಜಕ್ಕನಹಳ್ಳಿ, ನಾರಾಯಣಪುರ, ಮಾಣಿಕ್ಯನಹಳ್ಳಿ ಮತ್ತು ಹಳೆಬೀಡು ಗ್ರಾಪಂ ವ್ಯಾಪ್ತಿಗೆ ಸೇರಿದ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ. ಸರ್ಕಾರ ಈ ವರ್ಷವೂ ವೈರಮುಡಿ ಬ್ರಹೋತ್ಸವಕ್ಕೆ ಅಗತ್ಯವಿದ್ದ ಅನುದಾನ ಬಿಡುಗಡೆ ಮಾಡಿದೆ ಎಂದು ವಿವರಿಸಿದರು.
ಲಾಟರಿ, ಗಾಂಚಾ ಮಾರಾಟಕ್ಕೆಕಡಿವಾಣ:ತಾಲೂಕಿನಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್, ಗಾಂಜಾ, ಇಸ್ಪೀಟ್, ಪಚ್ಚಿದಂಧೆ ಹೆಚ್ಚಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಎಲ್ಲಾ ದಂಧೆಗಳಿಗೆ ಕಡಿವಾಣ ಹಾಕುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ರೈತಸಂಘ ಮುಖಂಡರಾದ ಹೊಸಕೋಟೆ ಸುರೇಶ್, ಎಚ್.ಎನ್.ವಿಜಯಕುಮಾರ್, ಸಿಂಗ್ರೀಗೌಡ, ಹಳೆಬೀಡು ತಿಮ್ಮೇಗೌಡ ಇತರರು ಇದ್ದರು.