ಕನ್ನಡಪ್ರಭ ವಾರ್ತೆ ಹಿರಿಯೂರು
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕೌನ್ಸಿಲ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
50-60 ವರ್ಷಗಳ ಹಿಂದೆ ಹಿರಿಯೂರು ನಗರ ಚಿಕ್ಕದಾಗಿತ್ತು. ದಿನ ಕಳೆದಂತೆ ನಗರ ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಕಿರಿದಾಗಿದ್ದು ಅಗಲೀಕರಣ ಅನಿವಾರ್ಯವಾಗಿದೆ. ಹಾಗಾಗಿ ರಸ್ತೆ ಅಗಲೀಕರಣ ಮಾಡಿಯೇ ತೀರುತ್ತೇವೆ ಎಂದರು.ಕಂದಾಯ ವಸೂಲಿ ಹಾಗೂ ರಸ್ತೆ ಅಗಲೀಕರಣ ವಿಷಯದಲ್ಲಿ ನನಗೆ ವಿವಿಧ ರೀತಿಯ ಆಸೆ ಆಮಿಷಗಳನ್ನು ತೋರಿಸಿದರು. ಆದರೆ ನಾನು ಇಂತಹ ಆಮಿಷಗಳಿಗೆ ಬಲಿಯಾಗದೆ ಗಟ್ಟಿ ನಿರ್ಧಾರ ಕೈಗೊಳ್ಳಲಾಗಿದೆ.
ಅಕ್ರಮವಾಗಿ ಕಟ್ಟಿರುವ ಕಟ್ಟಡಗಳಿಗೆ ಯಾವುದೇ ರೀತಿಯ ವಿದ್ಯುತ್, ನೀರು ಕೊಡಬಾರದು ಎಂದು ಕೋರ್ಟ್ ಆದೇಶ ನೀಡಿದೆ. ನಗರಸಭೆ ಜಾಗದಲ್ಲಿ ಇಷ್ಟು ವರ್ಷ ಕಟ್ಟಡಗಳನ್ನು ಕಟ್ಟಿಕೊಂಡು ದುಡಿದು ಕೊಂಡಿದ್ದಾರೆ. ಹಾಗಾಗಿ ರಸ್ತೆ ಅಗಲೀಕರಣ ಕಾಮಗಾರಿ ಶೀಘ್ರವೇ ನಡೆಯಲಿದೆ ಎಂದರು.
ಸದಸ್ಯ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ನಗರಸಭೆ ಉಳಿತಾಯ ಮೊತ್ತದಲ್ಲಿ ತಯಾರಿಸಿದ ಕ್ರಿಯಾಯೋಜನೆ ಅನುಮೋದನೆಗೆ ಕಳಿಸಿದ್ದು ಏನಾಗಿದೆ ಎಂಬುದರ ಬಗ್ಗೆ ಸಂಬoಧಪಟ್ಟ ಎಂಜಿನಿಯರ್ ಉತ್ತರಿಸಬೇಕು. ಅಲ್ಲದೇ ಉಳಿತಾಯ ಬಜೆಟ್ನಲ್ಲಿ ₹5 ಲಕ್ಷ ಕಾಮಗಾರಿಗೆ ತುರ್ತು ಟೆಂಡರ್ ಕೋಟ್ ಮಾಡಿರುವ ಬಗ್ಗೆ ಸ್ಪಷ್ಟ ಮಾಹಿತಿ ಕೊಡಬೇಕು ಎಂದು ಒತ್ತಾಯಿಸಿದರು.
ಎಇಇ ಯವರ ಉತ್ತರಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಅಜಯ್ ಕುಮಾರ್ ಅಧಿಕಾರಿಗಳು ಬೇಜವ್ದಾರಿತನದಿಂದ ವರ್ತಿಸುತ್ತಾರೆ. ಈ ಬಗ್ಗೆ ಆಕೌಂಟ್ ಹಾಗೂ ಎಂಜಿನಿಯರ್ ವಿಭಾಗದ ತಪ್ಪಿದೆ. ನೀವು ಕಾಟಾಚಾರದ ಕೆಲಸ ಮಾಡುವುದಾದರೆ ಬೇರೆಡೆ ವರ್ಗಾವಣೆ ಪಡೆಯಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ 100 ಬೃಹತ್ ಕಟ್ಟಡಗಳನ್ನು ಗುರುತಿಸಿದ್ದು ಆಸ್ಪತ್ರೆ, ಶಾಲೆಗಳು, ವಾಣಿಜ್ಯ ಮಳಿಗೆ, ಲಾಡ್ಜ್, ಹೋಟೆಲ್, ಚಿತ್ರಮಂದಿರ, ಛತ್ರಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ಸುಮಾರು 26 ಬಿಲ್ಡಿಂಗ್ಗಳಿಂದ ಒಟ್ಟು 998.84 ಲಕ್ಷ ನಗರಸಭೆಗೆ ಕಂದಾಯ ಬಾಕಿ ಬರಬೇಕಿದೆ.