- ಚಾಲ್ಸ್ ಬ್ಯಾಬೇಜ್ ಸ್ಮರಣಾರ್ಥ ಕಂಪ್ಯೂಟರ್ ಆಪರೇಟರ್ ದಿನಾಚರಣೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಪಂ ಉಪ ಕಾರ್ಯದರ್ಶಿ ಎಲ್.ಕೃಷ್ಣನಾಯ್ಕ ಅಧ್ಯಕ್ಷತೆ ವಹಿಸಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಕನಿಷ್ಠ ವೇತನ ಹೆಚ್ಚಳ ಹಾಗೂ ಶೇ.40 ಅನುದಾನವನ್ನು ಗ್ರಾಮ ಪಂಚಾಯಿತಿ ಸಂಪನ್ಮೂಲ ಅನುದಾನದಲ್ಲಿ ಸಿಬ್ಬಂದಿ ಖಾತೆಗೆ ನೀಡಲು ಕ್ರಮ ವಹಿಸಲಾಗುವುದು. ಹಾಗೂ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಯಲ್ಲಿ ಗ್ರಾಪಂ ಆಪರೇಟರ್ಗಳ ಪಾತ್ರ ಮುಖ್ಯವಾಗಿದೆ. ಕರ್ತವ್ಯ ನಿಷ್ಠೆಯಿಂದ ಸೇವೆ ನಿರ್ವಹಿಸಲು ಸೂಚನೆ ನೀಡಿದರು.
ಸಂಘದ ರಾಜ್ಯ ಸಮಿತಿ ಸದಸ್ಯ ಎಸ್.ಶಿವಯೋಗಿ ಮಾತನಾಡಿ, ಕಂಪ್ಯೂಟರ್ ದಿನಾಚರಣೆ ಒಂದು ಹಬ್ಬದ ವಾತಾವರಣ ಸೃಷ್ಟಿ ಮಾಡಿದೆ. ಕಂಪ್ಯೂಟರ್ ಆಪರೇಟರ್ಗಳ ಕಾರ್ಯವೈಖರಿ ಕುರಿತು ಹಾಗೂ 2005ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ನರೇಗಾ ಯೋಜನೆಯ ಮೂಲಕ ಕಂಪ್ಯೂಟರ್ಗಳ ಮೂಲಕ ಗ್ರಾಪಂ ವಿವಿಧ ಯೋಜನೆಗಳ ಡಿಜಿಟಲೀಕರಣ ಪ್ರಕ್ರಿಯೆ ಪ್ರಾರಂಭವಾಗಿ, ಪಂಚತಂತ್ರ ತಂತ್ರಾಂಶಕ್ಕೆ ಕೇಂದ್ರದಿಂದ ಪುರಸ್ಕಾರಗಳು ಲಭಿಸಿತು. ಕಂಪ್ಯೂಟರ್ ಆಪರೇಟರ್ಗಳ ಭವಿಷ್ಯಕ್ಕೆ ವಿವಿಧ ಸವಲತ್ತುಗಳನ್ನು ಕಲ್ಪಿಸಬೇಕಾಗಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದೇಶ್ ಮಾತನಾಡಿ, ಸರ್ಕಾರ ಮತ್ತು ಇಲಾಖೆಯು ದಿನಾಚರಣೆ ಆಚರಣೆ ಮಾಡಲು ಮುನ್ನುಡಿ ಬರೆದ ಸರ್ಕಾರ ಹಾಗೂ ಇಲಾಖೆ ಚಿರಋಣಿ ಆಗಿರುತ್ತೇವೆ. ಕಡಿಮೆ ಅವಧಿಯಲ್ಲಿ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದ ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್, ಜಿಪಂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಜಿಪಂ ಆಡಳಿತ ಕಾರ್ಯದರ್ಶಿ ಎಚ್.ಬಸವರಾಜ, ಸಂಘದ ರಾಜ್ಯಾಧ್ಯಕ್ಷ ಭೀಮರೆಡ್ಡಿ ಪೊಲೀಸ್ ಪಾಟೀಲ್, ಸಹಾಯಕ ಲೆಕ್ಕಾಧಿಕಾರಿ ಆರ್.ಆರ್. ವಂದನ, ಸಹಾಯಕ ಯೋಜನಾಧಿಕಾರಿ ಎನ್.ಜೆ. ಆನಂದ, ತಾಪಂ ಸಹಾಯಕ ನಿರ್ದೇಶಕರು, ಪಿಡಿಒ ಕಾರ್ಯದರ್ಶಿ, ಎಸ್ಡಿಎ, ಗ್ರಾಪಂ ಡೇಟಾ ಎಂಟ್ರಿ ಆಪರೇಟರ್ಗಳು ಭಾಗವಹಿಸಿದ್ದರು.
- - - -27ಕೆಡಿವಿಜಿ47:ದಾವಣಗೆರೆಯಲ್ಲಿ ನಡೆದ ಕಂಪ್ಯೂಟರ್ ಆಪರೇಟರ್ ದಿನ ಕಾರ್ಯಕ್ರಮದಲ್ಲಿ ತಾಲೂಕಿನ ಉತ್ತಮ ಗಣಕ ಯಂತ್ರ ನಿರ್ವಾಹಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.