ಕನ್ನಡಪ್ರಭ ವಾರ್ತೆ ಮೈಸೂರು
ತಿಲಕ್ ನಗರದಲ್ಲಿರುವ ಹೆಲೆನ್ ಕೆಲ್ಲರ್ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ ಆವರಣದಲ್ಲಿ 2001 ರಿಂದ 2026 ರವರೆಗಿನ ಹಳೆಯ ವಿದ್ಯಾರ್ಥಿಗಳ ಬಳಗವು ಶನಿವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಅಂದು ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿರಾವ್ ಫುಲೆ ಅವರ ಬೆಂಬಲದೊಂದಿಗೆ ಅನುಭವಿಸಿದ ಹೋರಾಟ ಮತ್ತು ತ್ಯಾಗವೇ ಇಂದು ಮಹಿಳಾ ಶಿಕ್ಷಣ ಕ್ರಾಂತಿಗೆ ಭದ್ರ ಅಡಿಗಲ್ಲಾಯಿತು ಎಂದರು.ಹಿರಿಯ ರಂಗಭೂಮಿ ಕಲಾವಿದೆ ಇಂದಿರಾ ನಾಯರ್ ಮಾತನಾಡಿ, 2001ರಲ್ಲಿ ಈ ತರಬೇತಿ ಕೇಂದ್ರ ಆರಂಭವಾದ ದಿನಗಳು ಇನ್ನೂ ಮನಸಿನಲ್ಲಿ ಹಸಿರಾಗಿವೆ. ಅಂದಿನ ಶಿಕ್ಷಕರ ಸಮರ್ಪಣೆ, ಶಿಸ್ತು ಮತ್ತು ಪರಿಶ್ರಮ ಇಂದಿನ ತಲೆಮಾರಿನ ಶಿಕ್ಷಕರಿಗೆ ಮಾದರಿಯಾಗಬೇಕು ಎಂದರು.
ಕಳೆದ ಎರಡೂವರೆ ದಶಕಗಳಿಂದ ಸಾವಿರಾರು ವಿಶೇಷ ಶಿಕ್ಷಕರನ್ನು ರೂಪಿಸಿದ 28 ಹೆಚ್ಚು ಹಿರಿಯ ಹಾಗೂ ಹಾಲಿ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. ಈ ವೇಳೆ ಆಶಾ ವಿ. ಹಿರೇಮಠ, ಎನ್.ಆರ್. ವಿಜಯ್, ಎಸ್. ಗಿರೀಶ್, ಅನ್ನಪೂರ್ಣ, ಡಾ. ಸಂಗೀತಾ, ಮಂಜುಳಾ ಪಾಟೀಲ್, ಸಿಸ್ಟರ್ ಲೀನಾ, ಎ. ಸುರೇಶ್ ಮೊದಲಾದವರನ್ನು ಸನ್ಮಾನಿಸಲಾಯಿತು.