ಶತಮಾನ ರಾಸ; ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ

KannadaprabhaNewsNetwork |  
Published : May 11, 2026, 02:00 AM IST
8 | Kannada Prabha

ಸಾರಾಂಶ

ಬ್ರಹ್ಮವಿದ್ಯಾ ಸಂಸ್ಥೆ ವತಿಯಿಂದ ಮೈಸೂರು ವಿವಿ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಶತಮಾನ ರಾಸ- ಮಹಾ ಮಹೋಪಾಧ್ಯಾಯ ಡಾ.ರಾ. ಸತ್ಯನಾರಾಯಣರ ಜನ್ಮಶತಮಾನೋತ್ಸವ ಮತ್ತು ಭಾರತೀಯ ಸಂಗೀತಶಾಸ್ತ್ರ ದಿನಾಚರಣೆಯು ಸಂಭ್ರಮ ಸಡಗರಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಮೈಸೂರು

ಬ್ರಹ್ಮವಿದ್ಯಾ ಸಂಸ್ಥೆ ವತಿಯಿಂದ ಮೈಸೂರು ವಿವಿ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಶತಮಾನ ರಾಸ- ಮಹಾ ಮಹೋಪಾಧ್ಯಾಯ ಡಾ.ರಾ. ಸತ್ಯನಾರಾಯಣರ ಜನ್ಮಶತಮಾನೋತ್ಸವ ಮತ್ತು ಭಾರತೀಯ ಸಂಗೀತಶಾಸ್ತ್ರ ದಿನಾಚರಣೆಯು ಸಂಭ್ರಮ ಸಡಗರಿಂದ ಜರುಗಿತು.

ಈ ಕಾರ್ಯಕ್ರಮವನ್ನು ಸಂಸ್ಕೃತ ವಿವಿ ಕುಲಪತಿ ಡಾ. ಅಹಲ್ಯಾ ಶರ್ಮ ಉದ್ಘಾಟಿಸಿದರು. ಖ್ಯಾತ ವೈಣಿಕರಾದ ವಿದ್ವಾನ್ ಡಾ.ರಾ. ವಿಶ್ವೇಶ್ವರನ್ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ವಿದ್ವಾನ್ ರಾಜೇಶ್ವರಶಾಸ್ತ್ರಿ ಜೋಶಿ ಅವರಿಗೆ ಶ್ರೀವಿದ್ಯಾಶಾಸ್ತ್ರ ಸೂರಿ ಪ್ರಶಸ್ತಿ, ಭರತನಾಟ್ಯ ಕಲಾವಿದೆ ಡಾ. ವಸುಂಧರ ದೊರೆಸ್ವಾಮಿ, ಕರ್ನಾಟಕ ಸಂಗೀತಗಾರ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮತ್ತು ಭಾರತೀಯ ಶಾಸ್ತ್ರಜ್ಞ ಡಾ. ಗ್ವೀಡೋ ಜಾಂಡರೀಗೋ (ವರ್ಚ್ಯುವಲ್ ಮೂಲಕ‌) ಅವರಿಗೆ ರಾಸ ಸಂಸ್ಮರಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಳಿಕ ವಿದ್ವಾನ್ ಡಾ.ರಾ. ಸತ್ಯನಾರಾಯಣ ಅವರ ಶ್ರೀವಿದ್ಯಾಷೋಡಶಿಕಾ- ತ್ರಯೀ ಚಿತ್ಕಲಾ, ಪಿ.ವಿ. ಕಾಣೆಯವರ ಹಿಸ್ಟರಿ ಆಫ್ ಧರ್ಮಶಾಸ್ತ್ರ ಕೃತಿ ‌ಅನುವಾದಗಳಾದ ಹಿಂದೂ ಧರ್ಮಶಾಸ್ತ್ರಗಳಲ್ಲಿ ವಿವಾಹ, ಹಿಂದೂ ಧರ್ಮಶಾಸ್ತ್ರಗಳಲ್ಲಿ ಶ್ರಾದ್ಧ, ಡಾ.ರಾ.ಸ. ನಂದಕುಮಾರ ಅವರ ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಶ್ರೀಪಾದರಾಜರು ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಇದಕ್ಕೂ ಮೊದಲು ರಾಸ ಸಂಗೀತ ಗೋಷ್ಠಿ ಗಾಯನವನ್ನು ವಿದ್ವಾನ್ ಸುಮುಖ ಶ್ರೀವತ್ಸ, ಅಂಬಿಕಾ ಶಾಸ್ತ್ರಿ ಪ್ರಸ್ತುತಪಡಿಸಿದರು. ಮಧುಕರಂ ಶ್ರೀರಾಮ ಅಯ್ಯಂಗಾರ್- ವೀಣೆ, ವಿದುಷಿ ಪೃಥ್ವಿ ಭಾಸ್ಕರ್- ವಯಲಿನ್, ವಿದ್ವಾನ್ ಜಿ.ಎಸ್. ನಾಗರಾಜ್- ಮೃದಂಗ, ವಿದ್ವಾನ್ ಶರತ್ ಕೌಶಿಕ್- ಘಟ, ವಿ.ಎಸ್.ರಮೇಶ್- ಮೋರ್ಚಿಂಗ್ ನಲ್ಲಿ ಸಾಥ್ ನೀಡಿದರು.

ವಿಧಾನಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ, ಮೈಸೂರು ಅರಮನೆ ‌ಮಂಡಳಿ ಉಪ‌ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಐಜಿಎನ್ ಸಿಎ ನಿವೃತ್ತ ನಿರ್ದೇಶಕ ಡಾ. ವಿಜಯ್ ಶಂಕರ್ ಶುಕ್ಲಾ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಿಇಒ ಸವಿತಾ ಸುಲುಗೋಡು, ಬ್ರಹ್ಮವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ.ರಾ.ಸ. ನಂದಕುಮಾರ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ತಂತ್ರಜ್ಞಾನ ಕ್ಷೇತ್ರಕ್ಕೆ ಇಂಜಿನಿಯರ್, ವಿಜ್ಞಾನಿಗಳ ಕೊಡುಗೆ ಅಪಾರ: ಡಾ.ನೀರಜ್ ಕುಮಾರ್
ಮದರಸಗಳ ಆಧುನೀಕರಣಕ್ಕೆ ಕ್ರಮ ವಹಿಸಿ: ಡಿಸಿ