ರೋಣ: ಸದಾ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುತ್ತಾ ಬಡವರ ಆಧಾರವಾಗಿ ಶ್ರಮಿಸುತ್ತಿರುವ ಕೊತಬಾಳ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಕಾರ್ಯ ಮಾದರಿಯಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಆರ್ಥಿಕ ಹೊರೆ ನೀಗಿಸುವ ಸಾಮೂಹಿಕ ವಿವಾಹಗಳು ಬಡವರ ಬಾಳಿನ ಆಶಾದೀಪವಾಗಿವೆ. ಸಾವಿರಾರು ಜನರ ಆಶೀರ್ವಾದ ಮಧ್ಯೆ ಜರುಗುವ ಇಂತಹ ಮದುವೆಗಳು ಭಾವೈಕ್ಯ ಮತ್ತು ಸಾಮರಸ್ಯ ಪ್ರತಿಬಿಂಬಿಸುತ್ತವೆ ಎಂದರು.
18 ಜೋಡಿಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದವು. ಅಂಕಲಗಿ ಮಠದ ಗಂಗಾಧರ ಸ್ವಾಮೀಜಿ, ಶ್ರೀಧರಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿ, ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಮಹಾದೇವ ಸ್ವಾಮೀಜಿ, ಗುರುವಸಿದ್ದೇಶ್ವರ ಸ್ವಾಮೀಜಿ, ಕೈಲಾಸಲಿಂಗ ಸ್ವಾಮೀಜಿ, ಯಚ್ವರೇಶ್ವರ ಸ್ವಾಮೀಜಿ, ಷಣ್ಮುಖಪ್ಪಜ್ಜ ಧರ್ಮರಮಠ ಸಾನ್ನಿಧ್ಯ ವಹಿಸಿದ್ದರು.ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಸವರಾಜ ನವಲಗುಂದ, ಪುರಸಭೆ ಮಾಜಿ ಅಧ್ಯಕ್ಷ ಮುತ್ತಣ್ಣ ಸಂಗಳದ, ನಿಂಬಣ್ಣ ಗಾಣಿಗೇರ, ಶಂಕ್ರಣ್ಣ ಸಂಕಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವೀರಣ್ಣ ಯಾಳಗಿ, ತಾಪಂ ಮಾಜಿ ಸದಸ್ಯ ಸಿದ್ದಣ್ಣ ಯಾಳಗಿ, ಶಿವಣ್ಣ ಪಲ್ಲೇದ, ವಿಶ್ವನಾಥ ಜಿಡ್ಡಿಬಾಗೀಲ, ಗ್ರಾಪಂ ಅಧ್ಯಕ್ಷೆ ಭೀಮವ್ವ ಗುಳಗುಳಿ, ಉಪಾಧ್ಯಕ್ಷ ಹನುಮಪ್ಪ ಅಸೂಟಿ ಉಪಸ್ಥಿತರಿದ್ದರು. ಮುತ್ತಣ್ಣ ಹಡಗಲಿ ಕಾರ್ಯಕ್ರಮ ನಿರೂಪಿಸಿದರು.