ಮಳಖೇಡದಲ್ಲಿ ಮಧ್ವ ನವಮಿ ಉತ್ಸವದ ವೈಭವ

KannadaprabhaNewsNetwork |  
Published : Jan 28, 2026, 01:45 AM IST
ಫೋಟೋ- ವಿಜಯ 1ಮಳಖೇಡದಲ್ಲಿ ಮಂಗಳವಾರ ನಡೆದ ಲಕ್ಷ ಸುಮಧ್ವ ವಿಜ ಯ ಪಾರಾಯಣದಲ್ಲಿ ಆಚಾರ್ಯ ಮಧ್ವರ ಪ್ರತಿಮೆಗೆ ಉತ್ತರಾದಿ ಮಟಾಧೀಶರು ಜೇನುತುಪ್ಪದ ಅಭಿಷೇಕ ನೆರವೇರಿಸಿದರುಫೋಟೋ- ವಿಜಯ 2 ಮತ್ತು ವಿಜಯ 3ಮಳಖೇಡದಲ್ಲಿ ಮಧ್ವ ವಿಜಯ ಪಾರಾಯಣದ ಸುಂದರ ನೋಟಗಳುಫೋಟೋ- ವಿಜಯ 5ಮಳಖೇಡದಲ್ಲಿ ಸೇರಿದ್ದ ಸಹಸ್ರ ಸಂಖ್ಯೆಯಲ್ಲಿನ ಭಕ್ತರು ಏಕಕಾಲಕ್ಕೇ ಸುಮಧ್ವ ವಿಜಯ ಪಾರಾಯಣ ನಡೇಸಿಕೊಟ್ಟರು. | Kannada Prabha

ಸಾರಾಂಶ

ಮಳಖೇಡದಲ್ಲಿ ಮಂಗಳವಾರ ಇಡೀ ಪರಿಸದರಲ್ಲಿ ಆಚಾರ್ಯ ಮಧ್ವರ ಜೀವನ ವೃತ್ತಾಂತ, ಮಧ್ವರ ತತ್ವ- ಸಿದ್ದಾಂತಗಳ ಸಾರವೇ ತುಂಬಿರುವ ಶ್ರೀ ಸುಮಧ್ವ ವಿಜಾಯ ಪಾರಾಯಣವೇ ಅನುರಣಿಸಿತ್ತು, ಕಾಗಿಣಾ ತೀರ, ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ 1 ಲಕ್ಷ ಬಾರಿ ನಡೆದ ಸುಮಧ್ವ ವಿಜಯ ಪಾರಾಯಣದೊಂದಿಗೆ ಈ ಬಾರಿಯ ಮಧ್ವ ನವಮಿ ಅಲ್ಲಿನ ಪರಿಸರದಲ್ಲಿ ವಿಶೇಷವಾಗಿ ಕಳೆಗಟ್ಟಿತ್ತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಮಳಖೇಡದಲ್ಲಿ ಮಂಗಳವಾರ ಇಡೀ ಪರಿಸದರಲ್ಲಿ ಆಚಾರ್ಯ ಮಧ್ವರ ಜೀವನ ವೃತ್ತಾಂತ, ಮಧ್ವರ ತತ್ವ- ಸಿದ್ದಾಂತಗಳ ಸಾರವೇ ತುಂಬಿರುವ ಶ್ರೀ ಸುಮಧ್ವ ವಿಜಾಯ ಪಾರಾಯಣವೇ ಅನುರಣಿಸಿತ್ತು, ಕಾಗಿಣಾ ತೀರ, ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ 1 ಲಕ್ಷ ಬಾರಿ ನಡೆದ ಸುಮಧ್ವ ವಿಜಯ ಪಾರಾಯಣದೊಂದಿಗೆ ಈ ಬಾರಿಯ ಮಧ್ವ ನವಮಿ ಅಲ್ಲಿನ ಪರಿಸರದಲ್ಲಿ ವಿಶೇಷವಾಗಿ ಕಳೆಗಟ್ಟಿತ್ತು.

ಉತ್ತರಾದಿ ಮಠಾಧೀಶ ಸತ್ಯಾತ್ಮ ತೀರ್ಥರ ಅನುಗ್ರಹ ಹಾಗೂ ಸಂಕಲ್ಪದೊಂದಿಗೆ ಮಳಖೇಡದ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂ.ವೆಂಕಣ್ಣಾಚಾರ್ಯ ಪೂಜಾರಿಯವರು ಕಳೆದ 1 ವರ್ಷದಿಂದ ಆನ್‌ಲೈನ್‌ ಮೂಲಕ ನಿತ್ಯ 4 ಹಂತಗಳಲ್ಲಿ ಅರ್ಥ ಸಹಿತ 1008 ಜನರಿಗೆ ಹೇಳಿಕೊಟ್ಟ ಸುಮಧ್ವ ವಿಜಯ ಪಾಠದ ಫಲವೇ ಆಗಿದೆ. ಇಂದಿನ ಮಧ್ವ ನವಮಿಯಲ್ಲಿ ಎತ್ತ ನೋಡಿದರತ್ತ ಸುಮಧ್ವ ವಿಜಯ ಮಳಖೇಡದಲ್ಲಿ ಪ್ರತಿಧ್ವನಿಸಿತ್ತು.

ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಉತ್ತರಾದಿ ಮಠ ಜಯತೀರ್ಥರ ಮೂಲ ಸನ್ನಿಧಾನದಲ್ಲಿ ಮಧ್ವ ನವಮಿ ನಿಮಿತ್ತ ಹಾಗೂ ಪಾರಾಯಣದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ‌ದರು.

ಸತ್ಯಾತ್ಮತೀರ್ಥರ ಸಾನ್ನಿಧ್ಯದಲ್ಲಿ‌ ಜರುಗಿದ ಈ ಜ್ಞಾನ ಸತ್ರ ಕಾಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ದೇಶದ ಉದ್ದಲಗಳಿಂದಲೂ ಸಾವಿರಾರು ಭಕ್ತರು‌ ಪಾಲ್ಗೊಂಡಿದ್ದರು.

ಮಂಗಳವಾರ ಬೆಳಿಗ್ಗೆ 7.30ರಿಂದ 11ರ ವರೆಗೆ ಭಕ್ತರಿಂದ‌ ಸಾಮೂಹಿಕ ಸುಮದ್ವಿಜಯ ಪಾರಾಯಣ ಜರುಗಿತು.

ನಂತರ ಶ್ರೀ ಮಧ್ವಾಚಾರ್ಯರ ಮೂರ್ತಿಗೆ 108 ಕೇಜಿ ಜೇನು ತುಪ್ಪದಿಂದ‌ ಅಭಿಷೇಕ ಮಾಡಲಾಯಿತು. ನಂತರ‌ ಶ್ರೀಗಳು ದಿಗ್ವೀಜಯ‌ ಮೂಲ‌ರಾಮದೇವರ ಪೂಜೆ ನಡರವೇರಿಸಿದರು. ಶ್ರೀರಾಮದೇವರಿಗೆ ಲಕ್ಷ ತುಳಸಿ‌ ಅರ್ಚನೆ‌ ಮಾಡಲಾಯಿತು.

ಹನುಮ, ಭೀಮ, ಮಧ್ವರ ಉತ್ಸವ ಮೂರ್ತಿ ಇಟ್ಟು ರಥೋತ್ಸವ ಮಾಡಲಾಯಿತು. ನಂತರ‌ ಭಕ್ತರ‌ ಸಮ್ನುಖದಲ್ಲಿ‌ ಗಜವಾನೋತ್ಸವ ನಡೆಯಿತು. ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕ ಪಂ. ವೆಂಕಣ್ಣಾಚಾರ್ಯ ಪೂಜಾರ, ಪಂ. ಗೋಪಾಲಾಚಾರ್ಯ ಅಕಮಂಚಿ, ಪಂ. ಗುರುಮಧ್ವಾವಾಚಾರ್ಯ ನವಲಿ, ಮಠಾಧಿಕಾರಿ ರಾಮಾಚಾರ್ಯ ಘಂಟಿ , ಕಲಬುರಗಿಯ ಪಾರಾಯಣ ಸಂಘಗಳ ಸದಸ್ಯರು, ಅಪಾರ ಭಕ್ತರು‌ ಪಾಲ್ಗೊಂಡಿದ್ದರು.

ಮಧ್ವಾಚಾರ್ಯರ ಕೊಡುಗೆ ಅನನ್ಯ

ಈ ಸಂದರ್ಭದಲ್ಲಿ ಅನುಗ್ರಹ ಸಂದಶ ನೀಡಿದ ಸತ್ಯಾತ್ಮತೀರ್ಥರು, ತತ್ವ ಪ್ರಪಂಚಕ್ಕೆ ಶ್ರೀಮಧ್ವಾಚಾರ್ಯರ ಕೊಡುಗೆ ಅನನ್ಯವಾಗಿದೆ, ಮಧ್ವಾಚಾರ್ಯರಂಥ‌ ಗುರುಗಳನ್ನು ಪಡೆದ ನಾವೇ ಧನ್ಯರು ಎಂದರು ಎಂದು ಗುರುಗಳನ್ನು ಕೊಂಡಾಡಿದರು.

ಗುರುಗಳಲ್ಲಿ ಭಕ್ತಿ ಮಾಡಿದರೆ‌ ಮುಕ್ಕುಂದನ ಮೇಲೆ‌ ಭಕ್ತಿ ಬರುತ್ತದೆ. ಭಗವಂತನನ್ನು‌ ಭಜಿಸಿದರೆ ಮೋಕ್ಷದ ಫಲ ಸಿಗುತ್ತದೆ. ಮೋಕ್ಷವನ್ನು ಭಗವಂತ ಕೊಡುತ್ತಾನೆ. ಆದರೆ ಭಗವಂತನ ಕಡೆ ನಮ್ಮನ್ನು ಕರೆದುಕೊಂಡು ಹೋಗುವ ಶಕ್ತಿ ಗುರುಗಳಲ್ಲಿದೆ. ಸಹಸ್ರಾರು ಭಕ್ತರು ಲಕ್ಷ ಸಲ ಸುಮಧ್ವೀಜಯ ಪಾರಾಯಣ ಮಾಡಿ ಮಳಖೇಡದ ಇಂದ್ರನ‌ಸನ್ನಿಧಾನದಲ್ಲಿ ಸಮರ್ಪಣೆ ಮಾಡಿದ್ದು ಪುಣ್ಯದ ಕಾರ್ಯ. ಇಂಥ ಧಾರ್ಮಿಕ ಕಾರ್ಯಕ್ರಮಗಳು‌ ಹೆಚ್ಚಾಗಿ ನಡೆಯಬೇಕು ಎಂದು ಶ್ರೀಗಳು‌ ನುಡಿದರು.

ಅದಮ್ಯ ಚೇತನ ಪುಸ್ತಕ‌ ಬಿಡುಗಡೆ

ಮಳಖೇಡದ ಹಿರಿಯರಾದ ಕಮಲಾಕರ ಕುಲಕರ್ಣಿ ಅವರು ರಚಿಸಿದ ಅದಮ್ಯ ಚೇತನ ಪುಸ್ತಕವನ್ನು ಸತ್ಯಾತ್ಮತೀರ್ಥರ ಸಮ್ನುಖದಲ್ಲಿ ಪಂ. ವೆಂಕಣ್ಣಾಚಾರ್ಯ ಪೂಜಾರ‌ ಬಿಡುಗಡೆಗೊಳಿಸಿದರು. ಧಾರ್ಮಿಕ ಕ್ಷೇತ್ರದಲ್ಲಿ‌ ಅಪಾರ ಸಾಧನೆ ಮಾಡಿರುವ ದಿ. ಕಮಲಾಬಾಯಿ ಮಣೂರ ಅವರ ಜೀವನ ಚರಿತ್ರೆಯನ್ನು ಕಮಲಾಕರ ಕುಲಕರ್ಣಿ ಅವರು ಅದಮ್ಯ ಚೇತನ ಪುಸ್ತಕದಲ್ಲಿ ನಿರೂಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ