ಪಿಂಚಣಿ ದಾರರ ಬದುಕಿಗೆ ಮರಣ ಶಾಸನ ಬರೆಯುತ್ತಿದೆ ರಾಜ್ಯ ಸರ್ಕಾರ

KannadaprabhaNewsNetwork |  
Published : Jul 28, 2026, 01:30 AM IST
ಶೃಂಗೇರಿ ಕ್ಷೇತ್ರ ಜೆ,ಡಿ,ಎಸ್ ಪಕ್ಷದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧವಾಗಿ ಸೋಮವಾರ ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು | Kannada Prabha

ಸಾರಾಂಶ

ಕೊಪ್ಪಶೃಂಗೇರಿ ಕ್ಷೇತ್ರ ಜೆ.ಡಿ.ಎಸ್ ಪಕ್ಷದಿಂದ ರಾಜ್ಯ ಸರ್ಕಾರದ ವಿರುದ್ಧವಾಗಿ ಸೋಮವಾರ ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ನಡೆಯಿತುತಾಲೂಕು ಕಚೇರಿ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿಯವರು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಂಧ್ಯಾ ಸುರಕ್ಷಾ ಸೇರಿದಂತೆ ಪ್ರತಿ ಪಿಂಚಣಿ ಸೌಲಭ್ಯಗಳ ವಿಳಂಬದಿಂದ ಇದನ್ನೇ ನಂಬಿದ್ದ ವಯೋವೃದ್ಧರು ಔಷಧಿ ಮಾತ್ರೆಗಳಿಲ್ಲದೆ ಹೈರಾಣಗಿದ್ದಾರೆ ಎಂದು ಹೇಳಿದರು.

ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ । ತಾಲೂಕು ಕಚೇರಿ ಬಳಿ ಜೆಡಿಎಸ್‌ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಶೃಂಗೇರಿ ಕ್ಷೇತ್ರ ಜೆ.ಡಿ.ಎಸ್ ಪಕ್ಷದಿಂದ ರಾಜ್ಯ ಸರ್ಕಾರದ ವಿರುದ್ಧವಾಗಿ ಸೋಮವಾರ ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು

ತಾಲೂಕು ಕಚೇರಿ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿಯವರು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಂಧ್ಯಾ ಸುರಕ್ಷಾ ಸೇರಿದಂತೆ ಪ್ರತಿ ಪಿಂಚಣಿ ಸೌಲಭ್ಯಗಳ ವಿಳಂಬದಿಂದ ಇದನ್ನೇ ನಂಬಿದ್ದ ವಯೋವೃದ್ಧರು ಔಷಧಿ ಮಾತ್ರೆಗಳಿಲ್ಲದೆ ಹೈರಾಣಗಿದ್ದಾರೆ ಎಂದು ಹೇಲ

ಬಡವರು,ವೃದ್ಧರು, ವಿಧವೆಯರು, ನಿರ್ಗತಿಕರು ಹಾಗೂ ದುರ್ಲಭ ವರ್ಗದವರಿಗೆ ಅಶ್ರಯವಾಗಿದ್ದ ಸಾಮಾಜಿಕ ಯೋಜನೆಗಳಿಗೆ ಸರ್ಕಾರ ಹೊಸ ನಿರ್ಬಂಧ ಗಳನ್ನು ಹೇರುವ ಮೂಲಕ ಫಲಾನುಭವಿಗಳ ಬದುಕಿಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದು ಆರೋಪಿಸಿದರು.

ಶೃಂಗೇರಿ ಕ್ಷೇತ್ರ ಸೌಲಭ್ಯಗಳ ಕೊರತೆಯಿಂದ ಕಂಗೆಟ್ಟಿದೆ ರಾಜ್ಯದ 224 ವಿಧಾನ ಸಭಾಕ್ಷೇತ್ರಗಳ ಪೈಕಿ ಅಭಿವೃದ್ಧಿಗೆ ಪೂರಕವಾದ ಯಾವುದೇ ಸೌಲಭ್ಯ ಹೊಂದಿರದ ಕ್ಷೇತ್ರ ಎಂದರೆ ಅದು ಶೃಂಗೇರಿ ವಿಧಾನಸಭಾ ಕ್ಷೇತ್ರ. ಶಾಸಕರೆ ಎಲ್ಲಾ ಸ್ತರದ ಜನ ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ್ದಾರೆ ಪಿಂಚಣಿ ದಾರರನ್ನ ಕಡೆಗಣಿಸ ಬೇಡಿ ಎಂದು ತಿಳಿಸಿದರು.

ಕ್ಷೇತ್ರ ಅಧ್ಯಕ್ಷ ಬಿ.ಎಚ್. ದಿವಕರ್ ಭಟ್ ಬಂಡಿಗಡಿ, ಜೆಡಿಎಸ್ ಪಕ್ಷದ ಶೃಂಗೇರಿ ಕೇತ್ರ ಸಂಚಾಲಕ ಎಚ್,ಎಸ್ ಕಳಸಪ್ಪ ಬಡವರು, ವೃದ್ದರು, ವಿಧವೆಯರು, ಕೊಪ್ಪ ತಾಲೂಕು ಅಧ್ಯಕ್ಷ ಎ,ಎನ್ ರಾಮಸ್ವಾಮಿ,ತಾಲೂಕು ಸಂಚಾಲಕ ವಿಕ್ರಮ್, ಸುಧಾಕರ ಶೆಟ್ಟಿಯವರ ಮಾದ್ಯಮ ವಕ್ತಾರ ಹೆಚ್,ಕೆ ವಿಶ್ವ,ಮುಖಂಡರಾದ ಕೃಷ್ಣ ಶೆಟ್ಟಿ, ಪೂರ್ಣೇಶ್,ವಾಸಪ್ಪ ಕುಂಚೂರು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

30 ವಿದ್ಯಾರ್ಥಿಗಳ ಸಾವಿಗೆ ಸಚಿವ ಶಾ ನೇರ ಹೊಣೆ
ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ: ಬಿ.ಸಿ.ಪಾಟೀಲ್