ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಎಚ್ಚರಿಕೆ
ಕನ್ನಡಪ್ರಭ ವಾರ್ತೆ ಶಿರಸಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನದಿ ಜೋಡಣೆ ವಿರೋಧಿಸಿ, ಕೊಳ್ಳ ಸಂರಕ್ಷಣಾ ಸಮಿತಿ ಮುಂದಾಳತ್ವದಲ್ಲಿ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿ ಇತರ ಪ್ರಮುಖರ ನಿಯೋಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಧಾರಣ ಸಾಮರ್ಥ್ಯ ಅಧ್ಯಯನ ಮಾಡದೇ ಡಿಪಿಆರ್ ತಯಾರಿಗೆ ಅನುಮತಿ ನೀಡಬೇಡಿ ಎಂದು ವಿನಂತಿಸಿಕೊಳ್ಳಲಾಗಿತ್ತು. ಆದರೂ ಅನುಮತಿ ನೀಡಲಾಗಿದೆ. ಈ ಯೋಜನೆ ನಿನ್ನೆ ಮೊನ್ನೆದಲ್ಲ. ನದಿ ತಿರುವು ಯೋಜನೆ ತೂಗುಗತ್ತಿ ಬಹಳ ಹಿಂದಿನಿಂದ ನೇತಾಡುತ್ತಿದ್ದು, ಕಳೆದ 30 ವರ್ಷದ ಹಿಂದೆ ಕೈಗಾ ಪ್ರಾರಂಭಗೊಂಡಿದೆ. ಆಗ ಯಾವ ಸರ್ಕಾರ ಇತ್ತು ಎಂಬುದನ್ನು ನೆನಪು ಮಾಡಿಕೊಳ್ಳುವುದು ಅವಶ್ಯವಾಗಿದೆ ಎಂದರುಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿದರು. ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ, ಶಿರಳಗಿ ಚೈತನ್ಯ ರಾಜಾರಾಮಾಶ್ರಮದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸ್ವಾಗತಿಸಿದರು. ಸ್ವರ್ಣವಲ್ಲೀ ವಿದ್ಯಾರ್ಥಿಗಳು ವೇದಘೋಷ ಹಾಡಿದರು. ಎಂ.ಕೆ. ಭಟ್ಟ ಸಂದೇಶ ವಾಚಿದರು. ಅನಂತ ಭಟ್ಟ ಹುಳಗೋಳ, ಸುರೇಶ ಹಕ್ಕಿಮನೆ ನಿರೂಪಿಸಿದರು. ಆರ್.ಎಂ. ಹೆಗಡೆ ಬಾಳೇಸರ, ಗೋಪಾಲಕೃಷ್ಣ ವೈದ್ಯ, ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ, ಜಿ.ಎಂ. ಹೆಗಡೆ ಮುಳಖಂಡ, ಶ್ರೀನಿವಾಸ ಹೆಬ್ಬಾರ, ರಮೇಶ ದುಭಾಶಿ ಫಲ ಸಮರ್ಪಿಸಿದರು. ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ವಂದಿಸಿದರು.ಪೂರಕ ಯೋಜನೆಗಾಗಿ ಹೋರಾಡೋಣ: ವೈದ್ಯನದಿ ಜೋಡಣೆ ಯೋಜನೆ ಹಾಲಿ ಸರ್ಕಾರದ ಯೋಜನೆಯಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2021 ಡಿ. 25ರಂದು ಈ ಯೋಜನೆ ಜಾರಿಗೆ ಕ್ಯಾಬಿನೆಟ್ನಲ್ಲಿ ನಿರ್ಣಯವಾಗಿತ್ತು. ಆಗ ಜನಪ್ರತಿನಿಧಿಗಳು ಮಾತನಾಡಿಲ್ಲ. ಆಗ ವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿದ್ದರು. ಅಂದೇ ಮುಗಿದಿದ್ದರೆ ಈಗ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬಹಳ ಮುಂದು ಹೋಗಿದೆ. ಕೇಂದ್ರ ಶೇ. 90 ಹಾಗೂ ರಾಜ್ಯ ಸರ್ಕಾರ ಶೇ. 10ರಷ್ಟು ಹಣ ನೀಡುವ ಸುಮಾರು 23 ಸಾವಿರ ಕೋಟಿ ರು. ಯೋಜನೆಯಾಗಿದೆ. ರಾಜಕಾರಣ ಬದಿಗಿಟ್ಟು ವಿರೋಧ ಮಾಡಬೇಕಿದೆ. ವೇದಿಕೆಯಲ್ಲಿ ಮಾತನಾಡಿರುವುದಕ್ಕೆ ಬದ್ಧರಾಗಿರಬೇಕು. ಇಂತಹ ಯೋಜನೆಯಿಂದ ಕೃಷಿಕರಿಗೆ, ಮೀನುಗಾರಿಕೆಗೆ, ಅರಣ್ಯ ಅತಿಕ್ರಮಣದಾರರಿಗೆ ತೊಂದರೆಯಾಗಲಿದೆ. ಶ್ರೀಗಳ ನೇತೃತ್ವದಲ್ಲಿ ಅಧ್ಯಯನ ಮಾಡಿಸಿ, ಈ ಯೋಜನೆ ಕೈಬಿಡಬೇಕು. ಜಿಲ್ಲೆಗೆ ಪೂರಕ ಯೋಜನೆಗಾಗಿ ಹೋರಾಡೋಣ. ನಿಮ್ಮ ಜೊತೆ ಇದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ಪಷ್ಟಪಡಿಸಿದರು.
ಬುದ್ಧಿ ಇಲ್ಲದ ರಾಜಕಾರಣಿಗಳ ಪಡೆದಿರುವುದು ದುರ್ದೈವಪರಿಸರ ಅರ್ಥಶಾಸ್ತ್ರಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಉಪನ್ಯಾಸ ನೀಡಿ, ನದಿ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತದೆ ಎಂಬ ಹೇಳುವ ರಾಜಕಾರಣಿ ಮೂರ್ಖ. ರಾಜಕಾರಣಗಳಿಗೆ ಜಲಚಕ್ರ ಅಗತ್ಯವಿಲ್ಲ. ಬುದ್ಧಿ ಇಲ್ಲದ ರಾಜಕಾರಣಿಗಳನ್ನು ಪಡೆದಿರುವುದು ದುರ್ದೈವ. ಒಟ್ಟಾರೆ 2353 ಹೆಕ್ಟೇರ್ ಭೂಮಿ ನಾಶವಾಗಲಿದೆ. ಅಘನಾಶಿನಿ ನದಿ ಮುಖಜಭೂಮಿ ಫಲವತ್ತಾಗಿದ್ದು, ಚಿತ್ರದುರ್ಗದ ವಾಣಿವಿಲಾಸ ಡ್ಯಾಂಗೆ ಕೊಂಡೊಯ್ಯಲಾಗುತ್ತದೆ. 23 ಸಾವಿರ ಕೋಟಿ ರು. ವೆಚ್ಚದ ಈ ಯೋಜನೆಯಲ್ಲಿ 1.20 ಲಕ್ಷ ಮರ ನಾಶವಾಗಲಿವೆ. 2500 ಎಕರೆ ಅರಣ್ಯ ನಾಶವಾಗಲಿದೆ. ಅರಣ್ಯ ಉಳಿಯುವುದಿಲ್ಲ ಎಂಬ ಸ್ಥಿತಿ ಇದೆ. ಈ 2 ಯೋಜನೆಯಿಂದ ಉತ್ತರ ಕನ್ನಡಕ್ಕೆ ಏನು ಉಪಯೋಗ? ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ಜನರು ಕೇಳದೇ ಅಭಿವೃದ್ಧಿ ಯೋಜನೆ ಕೊಟ್ಟಿದೆ. ಉತ್ತರ ಕನ್ನಡದ ಬಹು ವರ್ಷದ ಬೇಡಿಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಕಟ್ಟಿಕೊಡಿ ಎಂದು ಕೇಳಿದ್ದೇವೆ. ಆದರೆ. ಸರ್ಕಾರ ಮಾನ್ಯತೆ ಮಾಡಿಲ್ಲ. ಮಂಗನ ಕಾಯಿಲೆ ಲ್ಯಾಬ್ ವ್ಯವಸ್ಥೆ ಇಲ್ಲ. ಜನಪ್ರತಿನಿಧಿಗಳಿಗೆ ವೈಯಕ್ತಿಕ ಅಭಿಪ್ರಾಯಕ್ಕೆ ಅವಕಾಶವಿಲ್ಲ. ಆದರೆ ಜನರಿಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ದಯವಿಟ್ಟು ಜನಪ್ರತಿನಿಧಿಗಳು ಈ ಯೋಜನೆ ಬೇಡ ಎಂಬುದನ್ನು ಅಧಿವೇಶನಕ್ಕೆ ಗಟ್ಟಿ ಧ್ವನಿಯಿಂದ ಹೇಳಬೇಕು. ಅಘನಾಶಿನಿ, ಬೇಡ್ತಿ ಉಳಿಸಿಕೊಳ್ಳುವುದು ಸಾವು ಬದುಕಿನ ಪ್ರಶ್ನೆಯಾಗಿದೆ ಎಂದರು.