ಒತ್ತಡ ನಿವಾರಣೆಗೆ ಎಐ ಬಳಕೆ ಅನಿವಾರ್ಯ: ಸಿಂಗಾಪುರದ ವಿಜ್ಞಾನಿ ಡಾ.ಭಾನುಪ್ರಕಾಶ್

KannadaprabhaNewsNetwork |  
Published : May 04, 2024, 12:35 AM IST
ಎಸ್‌ಐಟಿ | Kannada Prabha

ಸಾರಾಂಶ

ಜನಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ಒದಗಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಆರ್ಟಿಪಿಸಿಯಲ್ ಇಂಟಲಿಜೆಂಟ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆ ಮಾಡುವ ಮೂಲಕ ಸವಾಲನ್ನು ಮೆಟ್ಟಿನಿಲ್ಲಲು ಸಾಧ್ಯವಾಗುತ್ತದೆ

ಕನ್ನಡಪ್ರಭ ವಾರ್ತೆ ತುಮಕೂರು ಜನಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ಒದಗಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಆರ್ಟಿಪಿಸಿಯಲ್ ಇಂಟಲಿಜೆಂಟ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆ ಮಾಡುವ ಮೂಲಕ ಸವಾಲನ್ನು ಮೆಟ್ಟಿನಿಲ್ಲಲು ಸಾಧ್ಯವಾಗುತ್ತದೆ ಎಂದು ಸಿಂಗಾಪುರದ ಬಯೋ ಇರ್ಫಾಮೆಟಿಕ್ ಇನ್ಸಿಟ್ಯೂಟ್‌ನ ಪ್ರಧಾನ ವಿಜ್ಞಾನಿ ಡಾ.ಭಾನುಪ್ರಕಾಶ್ ಹೇಳಿದರು.ನಗರದ ಎಸ್‌ಐಟಿಯ ಬಿರ್ಲಾ ಸಭಾಂಗಣದಲ್ಲಿ ಎಲೆಕ್ಟ್ರಿಕಲ್ ಸೈನ್ಸ್ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಎರಡನೇ ಸ್ಮಾರ್ಟ್ ಸಿಸ್ಟಮ್ ಫಾರ್ ಅಪ್ಲಿಕೇಷನ್ ಇನ್ ಎಲೆಕ್ಟ್ರಿಕಲ್ ಸೈನ್ಸ್-2024 ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಈಗ ಕಾಯಿಲೆಗಳನ್ನು ಗುಣಪಡಿಸುವ ಕೆಲಸ ನಡೆಯುತ್ತಿದೆ. ಆದರೆ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರ ಎರಡು ಒಗ್ಗೂಡಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಂಡು, ಕಾಯಿಲೆ ಬರದಂತೆ ತಡೆಯುವ ವಿಧಾನವನ್ನು ಸಂಶೋಧಿಸಲು ಸಾಧ್ಯವಾಗುತ್ತದೆ. ಇದರಿಂದ ಕಾಯಿಲೆಯ ತಪ್ಪು ಗ್ರಹಿಕೆ ಮತ್ತು ತಪ್ಪು ಚಿಕಿತ್ಸೆ ಎರಡನ್ನು ತಡೆಗಟ್ಟಬಹುದು ಎಂದರು.ಭಾರತದಂತಹ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಮನುಷ್ಯನ ಜೀವಿತಾವಧಿ ತಂತ್ರಜ್ಞಾನದ ಫಲವಾಗಿ ಹೆಚ್ಚಳ ವಾಗಿದ್ದರೂ, ಅದು ಆರೋಗ್ಯಕರ ಜೀವಿತಾವಧಿಯೇ ಎಂಬುದನ್ನು ಅವಲೋಕಿಸಬೇಕಾಗಿದೆ. ಅತಿಯಾದ ಒತ್ತಡದ ಜೀವನ ಶೈಲಿಯಿಂದಾಗಿ ಶೇ.20 ರಷ್ಟು ಜನ ಭಾರತೀಯರು ಮಾನಸಿಕ ರೋಗಗಳಿಗೆ ತುತ್ತಾಗುತಿದ್ದಾರೆ. ಇದರಲ್ಲಿ ಶೇ.50 ರಷ್ಟು ಮಂದಿ ಎಂಎನ್‌ಸಿ ಕಂಪನಿಯಗಳಲ್ಲಿ ಕೆಲಸ ಮಾಡುವವರು ಎಂದು ಹೇಳಿದರು.ಕೆಲವರು ಒತ್ತಡ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಇವರ ಒತ್ತಡದ ಬದುಕು ನಿವಾರಣೆಯಾಗಬೇಕಾದರೆ ಅರ್ಟಿಪಿಷಿಯಲ್ ಇಂಟಲಿಜೆನ್ಸ್‌ ಬಳಕೆ ಅನಿವಾರ್ಯವಾಗಿದೆ. ಒಳ್ಳೆಯ ಆಹಾರ, ಜೀವನ ಶೈಲಿ ಅಳವಡಿಸಿಕೊಂಡ 60 ವರ್ಷದ ಮನುಷ್ಯನ ಮೆದುಳು 30 ವರ್ಷದ ಯವಕರ ರೀತಿ ಆಲೋಚಿಸಿದರೆ, ಜಂಕ್‌ಪುಡ್‌ ಒತ್ತಡದ ಜೀವನ ಇರುವ 30 ವರ್ಷದ ಯುವಕನ ಮೆದಳು 60 ವರ್ಷದ ವಯೋವೃದ್ದರಂತೆ ಆಲೋಚಿಸುತ್ತಿರುವುದನ್ನು ಹಲವು ಸಂಶೋಧನಗಳ ಮೂಲಕ ತಿಳಿದು ಬಂದಿದೆ ಎಂದು ವಿಜ್ಞಾನಿ ಡಾ.ಭಾನುಪ್ರಕಾಶ್ ತಿಳಿಸಿದರು.ಮರಣ ಪ್ರಮಾಣ, ಅಂಗವಿಕಲತೆ ಕಡಿಮೆ ಮಾಡುವುದು ಹಾಗೂ ರೋಗಮುಕ್ತ ಜೀವನ ಆರೋಗ್ಯ ಕ್ಷೇತ್ರದ ಬಹುಮುಖ್ಯ ಗುರಿಗಳಾಗಿವೆ. ರೋಗವನ್ನು ಗುಣಪಡಿಸುವ ನಿಟ್ಟಿನಲ್ಲಿ ಔಷಧಿಗಳಿಗೆ ಗುಲಾಮರಾಗುತ್ತಿದ್ದೇವೆ. ಹಾಗಾಗಿ ರೋಗವೇ ಬರದಂತೆ ತಡೆಯುವ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲು ಇಂಜಿನಿಯರಿಂಗ್ ತಂತ್ರಜ್ಞಾನ ಬಳಕೆಯಾಗಬೇಕಿದೆ. ಕೈಗಾರಿಕಾ ಕಾಂತ್ರಿ ಹಿಂದಿನ ನೂರು ವರ್ಷಗಳಿಗೆ ಹೊಲಿಕೆ ಮಾಡಿದರೆ ಬಹುಬೇಗ ನಡೆಯುತ್ತಿದೆ. ಬದಲಾವಣೆಗೆ ತಕ್ಕಂತೆ ನಾವುಗಳು ಬದಲಾಗಬೇಕು. ಇದು ತಂತ್ರಜ್ಞಾನದ ಅಳವಡಿಕೆಯಿಂದ ಸಾಧ್ಯವಿದೆ ಎಂದರು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ತಾಂತ್ರಿಕ ಶಿಕ್ಷಣ ಪಡೆದ ಯುವಜನರು ಮತ್ತು ಉದ್ದಿಮೆದಾರರು ತಮ್ಮಲ್ಲಿರುವ ಹೊಸ ಐಡಿಯಾಗಳನ್ನು ಹಿರಿಯರ ತಜ್ಞರ ಸಮ್ಮುಖದಲ್ಲಿ ಹಂಚಿಕೆ ಮಾಡಿಕೊಳ್ಳಲು ಸ್ಮಾರ್ಟ್ ಸಿಸ್ಟಮ್ ಫಾರ್ ಅಪ್ಲಿಕೇಷನ್ ಇನ್ ಎಲೆಕ್ಟ್ರಿಕಲ್ ಸೈನ್ಸ್-2024 ಒಂದು ಒಳ್ಳೆಯ ವೇದಿಕೆಯಾಗಿದೆ. ಕೈಗಾರಿಕಾ ಕ್ಷೇತ್ರದ ತಜ್ಞರು ಮತ್ತು ಶೈಕ್ಷಣಿಕ ಕ್ಷೇತ್ರದ ತಜ್ಞರ ಜ್ಞಾನದ ವಿನಿಮಯ ವೇದಿಕೆ ಇದಾಗಿದೆ. ಜಗತ್ತಿಗೆ ಹೊಸ ಅವಿಷ್ಕಾರದ ಬಗ್ಗೆ ತಿಳುವಳಿಕೆ ಮೂಡಿಸುವುದರ ಜತೆಗೆ ತಮಲ್ಲಿರುವ ಇನೋವೆಟಿವ್ ಐಡಿಯಾವನ್ನು ಹಂಚಿಕೊಳ್ಳುವ ಅವಕಾಶವನ್ನು ಸಿದ್ದಗಂಗಾ ಕಳೆದ ಎರಡು ವರ್ಷಗಳಿಂದ ಮಾಡುತ್ತಾ ಬಂದಿದೆ. ಇದಕ್ಕಾಗಿ ಆಯೋಜಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಇಂಜಿನಿಯರಿಂಗ್ ಎಂಬುದು ಶಿಸ್ತು ಬದ್ದ ಶಿಕ್ಷಣವಾಗಿದೆ. ಸಮಾಜದ ಆಗು ಹೋಗುಗಳನ್ನು ಅರಿತು, ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ತಾವು ಕಲಿತ ಜ್ಞಾನವನ್ನು ಬಳಕೆ ಮಾಡಬೇಕಿದೆ. ಹವಾಮಾನ ವೈಪರಿತ್ಯ, ಹಸಿವು, ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ. ಇದು ನಿಮ್ಮ ವೃತ್ತಿ ಜೀವನ ಉನ್ನತ ಮಟ್ಟಕ್ಕೇರಲು ಸಹಾಯಕವಾಗಲಿದೆ ಎಂದರು.ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ, ಬೆಂಗಳೂರಿನ ಇಐ ಕ್ಯುಮಿನಾ ಟೆಕ್ನಾಲಜಿಸ್‌ನ ಅಧ್ಯಕ್ಷ ಚೇತನಾ ಮೋಹನ್ ಅವರು ಟೆಕ್ನಿಷಿಯಂ-2024ಗೆ ಸಂಬಂಧಿಸಿದ ಹವ್ಯಾಸಿ ಪ್ರಾಜೆಕ್ಟ್ ಪ್ರದರ್ಶನ ಉದ್ಘಾಟಿಸಿ ತಾಂತ್ರಿಕ ಭಾಷಣ ಮಾಡಿದರು. ಎಸ್‌ಐಟಿ ಸಿಇಒ ಡಾ.ಶಿವಕುಮಾರಯ್ಯ, ಪ್ರಾಂಶುಪಾಲ ಡಾ.ಎಸ್.ವಿ.ದಿನೇಶ್, ಎಸ್‌ಐಟಿಯ ಕೋ ಅಡಿನೇಟರ್ ಡಾ.ಎಚ್.ಕೆ.ಲತಾ, ತಾಂತ್ರಿಕ ಮುಖ್ಯಸ್ಥ ಡಾ.ಜಿ.ಆರ್.ಕಿರಣ್ಮಯಿ, ಸಂಯೋಜಕರಾದ ಡಾ.ಫನ್ವಾಲಾ ಫೆನಿಲ್ ಚೇತನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!