ರಂಗಭೂಮಿ ಆಕರ್ಷಣೆ ಕಳೆದುಕೊಂಡಿಲ್ಲ: ಶಾಸಕ ಬಾಲಕೃಷ್ಣ

KannadaprabhaNewsNetwork |  
Published : Mar 21, 2026, 01:15 AM IST
2.ಕುದೂರು ಗ್ರಾಮದ ಶ್ರೀರಾಮಲೀಲಾ ಮೈದಾನದಲ್ಲಿ ಏರ್ಪಡಿಸಿದ್ದ ಮಹಿಳೆಯರೇ ಅಭಿನಯಿಸಿದ್ದ ನಾಟಕದ ನಿರ್ದೇಶಕರನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಸನ್ಮಾನಿಸಿದರು. | Kannada Prabha

ಸಾರಾಂಶ

ಕುದೂರು: ಮನರಂಜನೆಗೆ ಇಂದು ನೂರಾರು ಆಧುನಿಕ ಸೌಲಭ್ಯಗಳಿದ್ದರೂ ರಂಗಭೂಮಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ ಎನ್ನುವುದಕ್ಕೆ ಮಹಿಳೆಯರೇ ಅಭಿನಿಯಿಸುತ್ತಿರುವ ನಾಟಕಕ್ಕೆ ಸೇರಿರುವ ಜನಸ್ತೋಮವೇ ಸಾಕ್ಷಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು

ಕುದೂರು: ಮನರಂಜನೆಗೆ ಇಂದು ನೂರಾರು ಆಧುನಿಕ ಸೌಲಭ್ಯಗಳಿದ್ದರೂ ರಂಗಭೂಮಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿಲ್ಲ ಎನ್ನುವುದಕ್ಕೆ ಮಹಿಳೆಯರೇ ಅಭಿನಿಯಿಸುತ್ತಿರುವ ನಾಟಕಕ್ಕೆ ಸೇರಿರುವ ಜನಸ್ತೋಮವೇ ಸಾಕ್ಷಿ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ಕುದೂರು ಗ್ರಾಮದ ಶ್ರೀರಾಮಲೀಲಾ ಮೈದಾನದಲ್ಲಿ ಮಾರುತಿ ಕೃಪಾಪೋಷಿತ ನಾಟಕ ಮಂಡಳಿಯವರು ಏರ್ಪಡಿಸಿದ್ದ ಎಲ್ಲಾ ಪಾತ್ರಧಾರಿಗಳು ಮಹಿಳೆಯರೇ ಅಭಿನಯಿಸಿದ್ದ ಕುರುಕ್ಷೇತ್ರ ನಾಟಕದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ತಮ್ಮ ಮೇಲುಗೈ ಸಾಧಿಸುತ್ತಿದ್ದಾರೆ. ಇಲ್ಲಿ ಅಭಿನಿಯಿಸುತ್ತಿರುವ ಬಹುತೇಕ ಕಲಾವಿದರು ರೈತಾಪಿ ವರ್ಗದವರು ಎಂದು ತಿಳಿದು ಸಂತೋಷವಾಯಿತು. ಸಿನೆಮಾ ರೀಲು, ನಾಟಕ ರಿಯಲ್ಲು, ಇಲ್ಲಿ ಒಮ್ಮೆಗೆ ಪುಟಗಟ್ಟಲೇ ಸಂಭಾಷಣೆ ಮತ್ತು ಹಾಡುಗಳನ್ನು ಸತತವಾಗಿ ಅಭ್ಯಾಸ ಮಾಡಿ ಅಂತಿಮವಾಗಿ ಜನರ ಮುಂದೆ ಅಭಿನಯಿಸಬೇಕು. ಇದರಿಂದಾಗಿ ಇವರುಗಳ ಶ್ರದ್ದೆ ಇಲ್ಲಿ ಪ್ರಟಕವಾಗುತ್ತದೆ ಎಂದು ಹೇಳಿದರು.

ಸುಸಜ್ಜಿತ ರಂಗಮಂದಿರ ನಿರ್ಮಾಣ :

ಕುದೂರು ಶ್ರೀರಾಮಲೀಲಾ ಮೈದಾನಕ್ಕೆ ಸುಸಜ್ಜಿತವಾಗ ರಂಗಮಂದಿರ ನಿರ್ಮಾಣವಾಗುತ್ತಿದೆ. ಇದು ನಗರ ಪ್ರದೇಶದಲ್ಲಿರುವ ಟೌನ್ ಹಾಲ್ , ರವೀಂದ್ರ ಕಲಾಕ್ಷೇತ್ರಗಳಂತೆ ದೀಪಗಳ ವ್ಯವಸ್ಥೆ ಮತ್ತು ಪುರುಷ ಮತ್ತು ಮಹಿಳೆಯರ ಮೇಕಪ್ ಕೊಠಡಿಗಳು, ಹಾಗು ಇದನ್ನು ವೀಕ್ಷಿಸಲು ಮೈದಾನದ ಸುತ್ತಲೂ ವ್ಯವಸ್ಥಿತ ಆಸನಗಳ ವ್ಯವಸ್ಥೆಯನ್ನು ಮಾಡುವಲ್ಲಿ ಕಾಮಗಾರಿ ಆರಂಭವಾಗಿದೆ. ಬರುವ ಮುಂದಿನ ಬಾರಿ ಇದೇ ಮಹಿಳೆಯರು ಹೊಸ ರಂಗಸಜ್ಜಿಕೆಯಲ್ಲಿ ನಾಟಕವನ್ನು ಅಭಿನಯಿಸಬಹುದು ಎಂದು ತಿಳಿಸಿದರು.

ಬಮೂಲ್ ಉಪಾಧ್ಯಕ್ಷ ಡಾ.ರಾಜಣ್ಣ ಮಾತನಾಡಿ, ಸಿನೆಮ ಮೊಬೈಲ್ಗಳಿಂದಾಗಿ ರಂಗಭೂಮಿ ಚಟುವಟಿಕೆಗಳು ಮಂಕಾಗುತ್ತಿದೆ. ಅದಕ್ಕಾಗಿ ಇಂದಿನ ಯುವ ಸಮುದಾಯವನ್ನು ಇತ್ತ ಸೆಳೆಯಲು ಆಧುನಿಕ ವ್ಯವಸ್ಥೆಯನ್ನು ಬಳಸಿಕೊಂಡು ಆಕರ್ಷಕ ರೀತಿಯಲ್ಲಿ ವಿನ್ಯಾಸ ಮಾಡಿ ಮೂಲ ರಂಗಕಲೆಯ ಚೌಕಟ್ಟಿಗೆ ಭಂಗ ಬಾರದಂತೆ ಬದಲಾವಣೆ ಮಾಡಿದರೆ ಮತ್ತೆ ನಾಟಕಗಳು ಹೊಸ ರೂಪದೊಂದಿಗೆ ಬೆಳಗುತ್ತದೆ ಎಂದು ತಿಳಿಸಿದರು.

ನಾಟಕದ ನಿರ್ದೇಶಕ ರಾಮಕೃಷ್ಣಪ್ಪ ಮತ್ತು ರವಿ ಕಾಳೇಗಾರ್ ರವರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಜಯರಾಂ, ಚಂದ್ರಶೇಖರ್, ಮುನಿರಾಜ್, ಸಂಚಾಲಕ ಗಂಗಣ್ಣ, ಧರ್ಮಪಾಲ್, ಗಂಗಮ್ಮ, ಪಾಪಣ್ಣ, ಹನುಮಂತರಾಯಪ್ಪ, ನಾಗರಾಜು, ಹನುಮಂತರಾಯಪ್ಪ, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.

20ಕೆಆರ್ ಎಂಎನ್ 2,3.ಜೆಪಿಜಿ

2.ಕುದೂರು ಗ್ರಾಮದ ಶ್ರೀರಾಮಲೀಲಾ ಮೈದಾನದಲ್ಲಿ ಏರ್ಪಡಿಸಿದ್ದ ಮಹಿಳೆಯರೇ ಅಭಿನಯಿಸಿದ್ದ ನಾಟಕದ ನಿರ್ದೇಶಕರನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಸನ್ಮಾನಿಸಿದರು.

3.ನಾಟಕಕ್ಕೆ ಸೇರಿದ್ದ ಅಪಾರ ಜನಸ್ತೋಮ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೇಮೆ ನೀರಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಬೇಡ
ತುಮಕೂರಿನಲ್ಲಿ ಗುಡ್ಡೆ ಮಾಂಸಕ್ಕೆ ಹೆಚ್ಚಿದ ಬೇಡಿಕೆ